ಸಸ್ಯಗಳ ವೈರಸ್ ನಂಜು ರೋಗ ಹರಡುವ ಅಧ್ಯಯನ ಅತ್ಯಾಗತ್ಯ

ಸಸ್ಯಗಳ ವೈರಸ್ ನಂಜು ರೋಗ ಹರಡುವ  ಅಧ್ಯಯನ ಅತ್ಯಾಗತ್ಯ

ಸಸ್ಯಗಳ ವೈರಸ್ ನಂಜು ರೋಗ ಹರಡುವ ಅಧ್ಯಯನ ಅತ್ಯಾಗತ್ಯ 

ರಾಯಚೂರು ಕೃಷಿ ಕಾಲೇಜಿನ ಸಸ್ಯ ರೋಗ ಶಾಸ್ತ್ರ ವಿಭಾಗ ಅನೇಕ ಕೃಷಿ ತಾಂತ್ರಿಕತೆಗಳನ್ನು ಪರಿಚಯಿಸುತ್ತಿದ್ಫು, ಸಸ್ಯ ವೈರಸ್ ರೋಗ ಅಧ್ಯಯನಕ್ಕೆ ವೆಕ್ಟರ್ ಹೌಸ್ (Vector house ) ನೂತನವಾಗಿ ನಿರ್ಮಿಸಲಾಗಿದೆ, ಟೊಮೇಟೊ, ಮೆಣಸಿನಕಾಯಿ, ಬದನೆ ಇಂದಿನ ಬದಲಾಗುತ್ತಿರುವ ಹವಾಮಾನ ಬೆಳೆಗಳು ಹೆಚ್ಚಿನ ನಂಜು ರೋಗಕ್ಕೆ ತುತ್ತಗುತ್ತಿವೆ ಎಂದು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ ಸ್ನಾತಕೋತ್ತರ ಡೀನ್ ಡಾ. ಎ.ಜಿ. ಶ್ರೀನಿವಾಸ್ ತಿಳಿಸಿದರು. ಹೇನು, ಬಿಳಿ ನೊಣ, ನುಸಿ ಮುಂತಾದ ಸಸ್ಯ ರೋಗ ವಾಹಕಗಳ ಅಧ್ಯಯನವು ಕಾಲಕ್ಕೆ ಹಾಗೂ ಬೆಳೆಯ ಹಂತಕ್ಕೆ ಸಮೀಪದ ಸಂಶೋಧನೆ ಅತ್ಯಗತ್ಯ ಎಂದು ಸ್ನಾತಕೋತ್ತರ ಕೃಷಿ ವಿದ್ಯಾರ್ಥಿಗಳಿಗೆ ಅವರು ತಿಳಿಸಿದರು. ಸಸ್ಯ ರೋಗ ವಿಭಾಗ ಮುಖ್ಯಸ್ಥರದ ಡಾ. ವೈ ಎಸ್ ಅಮರೇಶ್ , ಬಿಜಾಪುರ ಕೃಷಿ ಕಾಲೇಜು ಹಿರಿಯ ಪ್ರಾದ್ಯಪಕರಾದ ಡಾ. ಅರುಣ್ ಸತರಡ್ಡಿ, ಗಂಗಾವತಿ ಕೃಷಿ ಡೀನ್ ಡಾ.ಯಂಜೆರಪ್ಪ, ಕೆ ವಿ ಕೆ ಕಲ್ಬುರ್ಗಿ ಮುಖ್ಯಸ್ಥರದ ಡಾ. ರಾಜು ಜಿ ತೆಗ್ಗೆಲ್ಲಿ, ತೋಟಗಾರಿಕೆ ಸಹ ಪ್ರಧ್ಯಾಪಕರಾದ ಡಾ. ಶೇಖರ ಗೌಡ ಪಾಟೀಲ್ ಜೊತೆಗಿದ್ದರು. ಡಾ. ಅಶ್ವತ ನಾರಾಯಣ ಡಿ ಎಸ್ ಸಸ್ಯ ರೋಗ ಪ್ರಧ್ಯಾಪಕರು ನೂತನ ವೈರಸ್ ವಾಹಕ ಕೊಠಡಿ ಉಪಯೋಗ ಕುರಿತು ಮಾಹಿತಿ ನೀಡಿದರು. ಸಹ ಪ್ರಾದ್ಯಪಕರಾದ ಡಾ.ಶ್ರೀದೇವಿ ಚೌಹಾನ್, ಡಾ. ಸವಿತಾ ಎ ಎಸ್, ಡಾ. ಅಜಿತ್ ಕುಮಾರ್, ಅರುಣ್ ಕುಮಾರ್, ಕೆ ವಿ ಕೆ ವಿಜ್ಜಾನಿ ಜಹೀರ್ ಅಹಮದ್, ಕೃಷಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

.