ಡಾ.ಹಾರಕೂಡ ಶ್ರೀಗಳು ಹಾಗೂ ಡಾ.ದಾಕ್ಷಾಯಣಿ ಎಸ್.ಅಪ್ಪ ಸೇರಿದಂತೆ ಆರು ಜನರಿಗೆ ಅವ್ವ ಪ್ರಶಸ್ತಿ

ಡಾ.ಹಾರಕೂಡ ಶ್ರೀಗಳು ಹಾಗೂ ಡಾ.ದಾಕ್ಷಾಯಣಿ ಎಸ್.ಅಪ್ಪ ಸೇರಿದಂತೆ ಆರು ಜನರಿಗೆ ಅವ್ವ ಪ್ರಶಸ್ತಿ

ಡಾ.ಹಾರಕೂಡ ಶ್ರೀಗಳು ಹಾಗೂ ಡಾ.ದಾಕ್ಷಾಯಣಿ ಎಸ್.ಅಪ್ಪ ಸೇರಿದಂತೆ ಆರು ಜನರಿಗೆ ಅವ್ವ ಪ್ರಶಸ್ತಿ

ಕಲಬುರಗಿ:- ಜಿಲ್ಲೆಯ ಡೊಂಗರಗಾಂವದ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದ ವತಿಯಿಂದ ನೀಡುವ ಹತ್ತನೇ ವರ್ಷದ 2025ನೇ ಸಾಲಿನ 'ಅವ್ವ' ಪ್ರಶಸ್ತಿಗೆ ನಡೆದಾಡುವ ದೇವರು,ಸಾಹಿತ್ಯ ಪೋಷಕರು ಹಾಗೂ ಸ್ವತ: ಸಾಹಿತಿಗಳಾದ ಷ.ಬ್ರ.ಶ್ರೀ ಡಾ.ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳ ಅವರ "ಚನ್ನಶ್ರೀವಾಣಿ" (ಅಂಕಣ ಬರಹಗಳ ಸಂಕಲನ), ಗೊರೂರು ಪಂಕಜ ಅವರ ಬೆರಗು ರೇಖೆಗಳು(ಕವನ ಸಂಕಲನ ) ಕೃತಿಗಳನ್ನು ಅವ್ವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅದೇ ರೀತಿ ಶರಣಬಸವೇಶ್ವರ ಮಹಾಸoಸ್ಥಾನದ ಮಹಾಮನೆಯ ಮಹಾತಾಯಿ ಡಾ. ದಾಕ್ಷಾಯಿಣಿ ಶರಣಬಸವಪ್ಪ ಅಪ್ಪ ( ಶಿಕ್ಷಣ ಮತ್ತು ದಾಸೋಹ) ನಿವೃತ ಪ್ರಾಧ್ಯಾಪಕರು ಹಾಗೂ ಭಾಷಾ ವಿಜ್ಞಾನಿಗಳಾದ ಪ್ರೊ.ವಿ.ಜಿ.ಪೂಜಾರ(ಸಾಹಿತ್ಯ), ಕಲಬುರಗಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಶ್ರೀ ಶಿವಕುಮಾರ ಪಸಾರ,(ಕಾನೂನು) ಶ್ರೀಮತಿ ಶರಣಮ್ಮ ಬಿ.ಪಾಟೀಲ( ಮಹಿಳಾ ಉದ್ಯಮಿ ) ಅವರನ್ನು 2025 ನೇ ಸಾಲಿನ 'ಅವ್ವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಶರಣಬಸಪ್ಪ ವಡ್ಡನಕೇರಿ ಹಾಗೂ ಪ್ರತಿಷ್ಠಾನದ ಸಂಚಾಲಕರಾದ ಡಾ. ನಾಗಪ್ಪ ಗೋಗಿ ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ 16 ಸೋಮವಾರದಂದು ಹಾರಕೂಡ ಶ್ರೀಮಠದಲ್ಲಿ ನಡೆಯಲಿದ್ದು, ಪ್ರಶಸ್ತಿಯು ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಹಾಗೂ ಸನ್ಮಾನ ಒಳಗೊಂಡಿರುತ್ತದೆ.