ದೇಹ ರಚನಾ ವಿಜ್ಞಾನವುಳ್ಳ ಕರುಣಹಸಿಗೆ ಕೃತಿ

ದೇಹ ರಚನಾ ವಿಜ್ಞಾನವುಳ್ಳ  ಕರುಣಹಸಿಗೆ ಕೃತಿ

ದೇಹ ರಚನಾ ವಿಜ್ಞಾನವುಳ್ಳ ಕರುಣಹಸಿಗೆ ಕೃತಿ 

ಕಲಬುರ್ಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲಿಂಗೈಕ್ಯ ಧರ್ಮರಾಜ್ ಅಫ್ಜಲ್ಪುರ್ಕರ್ ಸ್ಮರಣಾರ್ಥ ಜರುಗಿದ ಅರಿವಿನ ಮನೆ 872 ನೆಯ ದತ್ತಿ ಕಾರ್ಯಕ್ರಮದಲ್ಲಿ ಡಾ. ಚಿತ್ಕಳ ಮಠಪತಿ ಅವರು ಮಾತನಾಡಿ ಚನ್ನಬಸವಣ್ಣನವರು ರಚಿಸಿದ ಕರಣ ಹಸಿಗೆ ಕೃತಿಯು ವೈದ್ಯಕೀಯ ವಿಜ್ಞಾನದ ದೇಹ ರಚನಾ ಶಾಸ್ತ್ರವನ್ನು ವೈಜ್ಞಾನಿಕವಾಗಿ ವಿವರಿಸುವ ಕೃತಿಯಾಗಿದೆ ಎಂದು ವೈದ್ಯ ವಿಜ್ಞಾನಿ ಡಾ.ಪಿ ಎಸ್ ಶಂಕರ ಅವರು ಹೇಳಿದ್ದಾರೆ ಎಂದರು . ಚನ್ನಬಸವಣ್ಣನವರು ಸ್ವಯಂಭು ಜ್ಞಾನಿಗಳಾಗಿದ್ದರು ಎಂದು ಅಲ್ಲಮಪ್ರಭುದೇವರು ತಮ್ಮ ವಚನದಲ್ಲಿ ಹೇಳಿದ್ದಾರೆ .ಜ್ಞಾನಕ್ಕೆ ಕಿರಿಯರು ಕಿರಿಯರು ಎಂಬುದು ಇರುವುದಿಲ್ಲ .ಚನ್ನಬಸವಣ್ಣನವರು ಬಸವಣ್ಣನವರ ಅಕ್ಕ ನಾಗಮ್ಮನವರ ಮಗನಾಗಿದ್ದಾರೆ. ಚನ್ನಬಸವಣ್ಣನವರು ತಮ್ಮ ಕಿರಿಯ ವಯಸ್ಸಿನಲ್ಲಿ ಹಿರಿದಾದ ಜ್ಞಾನವನ್ನು ಹೊಂದಿದ್ದರು .ಅವರು ತಮ್ಮ 24ನೆಯ ವಯಸ್ಸಿನಲ್ಲಿಯೇ ಅಪಾರಜ್ಞಾನ ಹೊಂದಿದ್ದರು. ಸೊಲ್ಲಾಪುರದ ಸಿದ್ದರಾಮರಿಗೆ ಲಿಂಗದೀಕ್ಷೆಯನ್ನು ನೀಡಿದವರು .ಆಕಳ ಹಾಲಿನಲ್ಲಿ ತುಪ್ಪವಿದೆ .ಆ ಹಾಲಿಗೆ ಸಂಸ್ಕಾರ ನೀಡಿದಾಗ ತುಪ್ಪವಾಗುವಂತೆ .ನಮ್ಮಲ್ಲೇ ಇರುವ ದೇವರನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಲು ನಾವು ಸಂಸ್ಕಾರ ಪಡೆದುಕೊಳ್ಳಬೇಕು ಎಂದು ಶರಣರು ವಚನದಲ್ಲಿ ತಿಳಿಸಿದ್ದಾರೆ ಎಂದು ನುಡಿದರು .    

ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಕೂಬಾ , ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ , ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ ,ದತ್ತಿ ದಾಸೋಹಿಗಳಾದ ಭಾರತೀ ಹುಲಗೋಳ , ಡಾ.ಕೆ. ಎಸ್. ವಾಲಿ , ಶರಣಗೌಡ ಪಾಟೀಲ್ ಪಾಳ ,ಬಂಡಪ್ಪ ಕೇಸುರ್ , ಉದ್ದಂಡಯ್ಯ ಭಾಗವಹಿಸಿದರು.