ಮೂರ್ತಿಗೆ ಅವಮಾನ ಮಾಡಿದವರಿಗೆ ಗಡಿಪಾರು ಮಾಡಿ -ಅನಿಲ ನಾಟಿಕಾರ ಆಗ್ರಹ

ಮೂರ್ತಿಗೆ ಅವಮಾನ ಮಾಡಿದವರಿಗೆ ಗಡಿಪಾರು ಮಾಡಿ -ಅನಿಲ ನಾಟಿಕಾರ ಆಗ್ರಹ

ಮೂರ್ತಿಗೆ ಅವಮಾನ ಮಾಡಿದವರಿಗೆ ಗಡಿಪಾರು ಮಾಡಿ -ಅನಿಲ ನಾಟಿಕಾರ ಆಗ್ರಹ

ಕಲಬುರಗಿ : ಜಿಲ್ಲೆಯ ಶಹಾಬಾದ್ ತಾಲೂಕಿನ ಮುತ್ತಘಾ ಗ್ರಾಮದಲ್ಲಿ ಶರಣ ಸಾಹಿತ್ಯದ ಶ್ರೇಷ್ಠ ಶರಣ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಗೆ ಭಗ್ನ ಮಾಡಿದ ಘಟನೆಗೆ ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ಯುವ ಮುಖಂಡ ಅನಿಲ ನಾಟಿಕಾರ ಇಂಗಳಗಿ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಅಂಬಿಗರ ಚೌಡಯ್ಯನವರು ನಮ್ಮ ಸಮಾಜದ ಆದರ್ಶಪುರುಷರು. ಅವರ ಮೂರ್ತಿಯನ್ನು ಹಾಳುಮಾಡಿದ ಕೃತ್ಯವು ಕೇವಲ ಮೂರ್ತಿಗೆ ಅಲ್ಲ ಸಂಪೂರ್ಣ ಸಮಾಜದ ಗೌರವಕ್ಕೆ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಸಮಾಜದ ಶಾಂತಿ ಹಾಳುಮಾಡುವ ಇಂತಹ ದೇಶದ್ರೋಹಿ ಮನೋಭಾವದ ವ್ಯಕ್ತಿಗಳನ್ನು ಗಡಿಪಾರು ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರಕಟಣೆಯ ಮುಖಾಂತರ ಆಗ್ರಹಿಸಿದರು.