ಮಂಡ್ಯ ವಿಶ್ವ ವಿದ್ಯಾಲಯ ಮಟ್ಟದ ಅಂತರ ಬಿ. ಎಡ್. ಕಾಲೇಜು ಚರ್ಚಾ ಸ್ಪರ್ಧೆ

ಮಂಡ್ಯ ವಿಶ್ವ ವಿದ್ಯಾಲಯ ಮಟ್ಟದ ಅಂತರ ಬಿ. ಎಡ್. ಕಾಲೇಜು ಚರ್ಚಾ ಸ್ಪರ್ಧೆ
ಜಿಲ್ಲಾ ಸರ್ವೋದಯ ಮಂಡಲ ಮತ್ತು ಶಂಕರ ಗೌಡ ಶಿಕ್ಷಣ ಮಹಾ ವಿದ್ಯಾಲಯದ ಆಶ್ರಯದಲ್ಲಿ 'ಗಾಂಧಿ ಅವರ ಅಹಿಂಸಾ ನೀತಿ ಯಿಂದ ಸ್ವಾತಂತ್ರ್ಯ ಬಂದಿತು' ಅನ್ನುವ ವಿಷಯದ ಬಗ್ಗೆ ನಡೆದ ಚರ್ಚಾ ಸ್ಪರ್ಧೆಯಲ್ಲಿ ಜಿಲ್ಲೆಯ ಹತ್ತು ಶಿಕ್ಷಣ ಮಹಾ ವಿದ್ಯಾಲಯಗಳು ಭಾಗವಹಿಸಿದ್ದವು ಎ. ಇ. ಟಿ. ಬಿ. ಶಿಕ್ಷಣ ಕಾಲೇಜು,ವಿಜಯಾ ಶಿಕ್ಷಣ ಮಹಾವಿದ್ಯಾಲಯ,ಮಂಡ್ಯ ಬಿ. ಇಡಿ. ಕಾಲೇಜು ಮತ್ತು ಲಿಂಗಯ್ಯ ಶಿಕ್ಷಣ ಮಹಾವಿದ್ಯಾಲಯ ಕ್ರಮವಾಗಿ ಮೊದಲ ನಾಲ್ಕು ಪ್ರಶಸ್ತಿಗಳಿಗೆ ಭಾಜನರಾದರು.
ಕಾರ್ಯಕ್ರಮದಲ್ಲಿ ಸರ್ವಶ್ರೀ ಎಂ. ಬಿ. ಬೋರೇಗೌಡ, ಪ್ರೊ.ಕೆ. ಬಿ. ನಾಗಾನಂದ, ಪ್ರಾಂಶುಪಾಲ ಡಾ.ಸುವರ್ಣ ವಿ. ಡಿ. ಡಾ.ಕೆ.ಚನ್ನಕೃಷ್ಣಯ್ಯ, ಪ್ರೊ.ರಾಮಮೂರ್ತಿ, ಜೆ. ಬಿ. ಶಿವಣ್ಣ ಉಪಸ್ಥಿತರಿದ್ದರು