ಬಹುಭಾಷಿಕತೆ ಭಾರತದ ಸತ್ವ : ವಿಕ್ರಮ ವಿಸಾಜಿ

ಬಹುಭಾಷಿಕತೆ ಭಾರತದ ಸತ್ವ : ವಿಕ್ರಮ ವಿಸಾಜಿ
ಬಹುಭಾಷಿಕತೆ ಭಾರತದ ಸತ್ವ : ವಿಕ್ರಮ ವಿಸಾಜಿ

ಬಹುಭಾಷಿಕತೆ ಭಾರತದ ಸತ್ವ : ವಿಕ್ರಮ ವಿಸಾಜಿ

ಕಲಬುರಗಿ: “ಭಾರತವು ಭಾಷಾ ವೈವಿಧ್ಯದ ಭೂಮಿಯಾಗಿದೆ. ಇವು ಪರಸ್ಪರ ಸಂವಾದಿಸಿವೆ. ಹೀಗಾಗಿ ಭಾಷೆಗಳ ಈ ಸೌಹಾರ್ದ ಪರಂಪರೆ ಕಾಪಾಡಿಕೊಳ್ಳಬೇಕಾಗಿದೆ" ಎಂದು ಶರಣಬಸವ ವಿಶ್ವವಿದ್ಯಾಲಯ ಮತ್ತು ಸುಭಾಷ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಆಯೋಜಿಸಿದ್ದ ಕನ್ನಡ ವಿಭಾಗ ಶರಣಬಸವ ವಿಶ್ವವಿದ್ಯಾಲಯದ ಬಸವ ಮಂಟಪದಲ್ಲಿ “ಭಾಷೆ – ಬದುಕು” ವಿಚಾರ ಸಂವಾದದಲ್ಲಿ ಡಾ. ವಿಕ್ರಮ ವಿಸಾಜಿ ಹೇಳಿದರು.

"ಯಾವುದೇ ಭಾಷೆಯನ್ನು‌ ಹೇರುವುದು ತಪ್ಪು. ಕನ್ನಡ ಬಳಕೆಯ ವಲಯಗಳು ಹೆಚ್ಚಬೇಕು. ಕನ್ನಡವನ್ನು ಹೊಸ ಕಾಲಕ್ಕೆ ಸಜ್ಜುಗೊಳಿಸುವ ಅಗತ್ಯವಿದೆ. ತಂತ್ರಜ್ಞಾನ ಮತ್ತು ಕನ್ನಡದ ಸಂಬಂಧ ಇನ್ನಷ್ಟು ಗಟ್ಟಿಯಾಗಬೇಕೆಂದು" ಅವರು ನುಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಅವರು ಮಾತನಾಡಿ, “2000 ವರ್ಷಗಳ ಇತಿಹಾಸ ಹೊಂದಿದ ಕನ್ನಡ ಭಾಷೆಯನ್ನು ಮರೆಯುತ್ತಾ, 600 ವರ್ಷಗಳ ಹಿಂದಿ ಭಾಷೆಗೆ ಜನರು ವ್ಯಾಮೋಹಗೊಳ್ಳುತ್ತಿರುವುದು ಭಾರೀ ವಿಷಾದಕರ ಸಂಗತಿ,” ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಡೋಳ್ಳೆಗೌಡ್ರು ಅಧ್ಯಕ್ಷೀಯ ಭಾಷಣ ನೀಡಿ, “ಕನ್ನಡ ನಮ್ಮ ಉಸಿರಾಗಲಿ, ಮನೆಯ ಮಾತಾಗಲಿ. ಎಲ್ಲ ಭಾಷೆಗಳನ್ನೂ ಕಲಿಯಿರಿ, ಆದರೆ ಕನ್ನಡ ಉಳಿಯಲಿ,” ಎಂದು ಹೇಳಿದರು.

ಪುಸ್ತಕ ಬಿಡುಗಡೆ ಕಾರ್ಯವನ್ನು ಟಿ.ವಿ. ಶಿವಾನಂದ ನೆರವೇರಿಸಿದರು. ವೀರಶೆಟ್ಟಿ ಗಾರಂಪಳ್ಳಿಯವರು ಪ್ರಾಸ್ತಾವಿಕ ಮಾತನಾಡಿದರು, ಶರಣಗೌಡ ಪಾಟೀಲ ಪಾಳಾ ಅವರು ಸ್ವಾಗತಿಸಿದರು. 

ಡಾ.ಚಿದಾನಂದ ಚಿಕ್ಕಮಠ ಅವರು ನಿರೂಪಿಸಿದರು. ಡಾ. ಕರೆಣ್ಣ ದೇವಪುರ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ 

ಬಸವರಾಜ ಕೊನೇಕ, ಬಿ.ಎಚ್. ನಿರಗುಡಿ, ಡಾ. ಸದಾನಂದ ಪೆರ್ಲ, ಚಿ.ಸಿ.ನಿಂಗಣ್ಣ, ವಿನೋದ ಜೇನವೇರಿ, ಡಾ‌. ಶರಣಬಸಪ್ಪ ವಡ್ಡನಕೇರಿ, ಸಿದ್ದಣಗೌಡ ಕಡಣಿ, ಬಸವರಾಜ ಟೆಂಗಳಿ, ಗುಂಡಣ್ಣ ಡಿಗ್ಗಿ, ಅಂಬಾರಾಯ ಕೋಣೆ, ಚಂದ್ರಶೇಖರ್ ಪೂಜಾರಿ, ಗುಂಡಪ್ಪ ತಳವಾರ, ಲವಕುಶ, ಇತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

-