ಕನಸು ಸೇವಾ ಸಂಸ್ಥೆ'ಯಿಂದ ಕಿವುಡ ಮತ್ತು ಮೂಕ ಮಕ್ಕಳಿಗೆ ರೇಷನ್ ವಿತರಣೆ

'ಕನಸು ಸೇವಾ ಸಂಸ್ಥೆ'ಯಿಂದ ಕಿವುಡ ಮತ್ತು ಮೂಕ ಮಕ್ಕಳಿಗೆ ರೇಷನ್ ವಿತರಣೆ
ಕಲಬುರಗಿ: ಸಮಾನ ಮನಸ್ಸುಳ್ಳ ಸ್ನೇಹಿತರಿಂದ ಸ್ಥಾಪಿತವಾದ *ಕನಸು ಸೇವಾ ಸಂಸ್ಥೆ (ರಿ)* ವತಿಯಿಂದ ಇಂದು ನಗರದಲ್ಲಿರುವ ನಾಗನಹಳ್ಳಿ ರಸ್ತೆಯ ಶ್ರೀಯಾನ್ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಗೆ ರೇಷನ್ ಸಾಮಗ್ರಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸಂತೋಷಕುಮಾರ್ ಎಸ್.ಪಿ, ಉಪಾಧ್ಯಕ್ಷ ಅವಿನಾಶ ಜಾನಕಾರ, ಕಾರ್ಯದರ್ಶಿ ರಾಚಯ್ಯಸ್ವಾಮಿ ಹಿರೇಮಠ, ಖಜಾಂಚಿ ಭೀಮಾಶಂಕರ ಝಳಕಿ ಹಾಗೂ ಪದಾಧಿಕಾರಿಗಳಾದ ಮಲ್ಲಪ್ಪ ಮೊಗಲಾ, ವಿಷ್ಣು ಘಾಳೆ, ಕರ್ಣ ಯಲಬತ್ತಿ, ಅಲ್ಲಮಪ್ರಭು ಕುಂಬಾರ, ಮಲ್ಲಿಕಾರ್ಜುನ ಪಾಟೀಲ್, ತ್ರಿಧರ್ ಸರಡಗಿ, ಸಚಿನ್ ಕೋಚಿ, ಅಭಿಷೇಕ ಗಾಯಕವಾಡ ಉಪಸ್ಥಿತರಿದ್ದರು.
ಶಾಲೆಯ ಮುಖ್ಯಸ್ಥ ರಾಜು ಎಸ್. ಶಖಾಪುರ, ಶಿವಶರಣಪ್ಪ ಶಖಾಪುರ, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಮಾಳಗೆ, ವಿನಯಕುಮಾರ್, ಮಹಾಂತೇಶ, ಅನೀತಾ ಮತ್ತು ಸಿಬ್ಬಂದಿವರ್ಗದವರು, ಮಕ್ಕಳು ಈ ಸಂದರ್ಭದಲ್ಲಿ ಹಾಜರಿದ್ದರು.
ಸೇವಾಭಾವನೆಯೊಂದಿಗೆ ಸಮಾಜದ ಅಗತ್ಯವಿರುವ ವರ್ಗಗಳಿಗೆ ನೆರವಾಗುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.