ಪೌರ ಕಾರ್ಮಿಕರು ಕಾಯಕ ಯೋಗಿಗಳು : ಅವರ ಸೇವೆ ಅನನ್ಯವಾಗಿದೆ :..ಸಾಬೇರಾ ಬೇಗಂ.

ಪೌರ ಕಾರ್ಮಿಕರು ಕಾಯಕ ಯೋಗಿಗಳು : ಅವರ ಸೇವೆ ಅನನ್ಯವಾಗಿದೆ :..ಸಾಬೇರಾ ಬೇಗಂ.
ಶಹಾಬಾದ : - ಪೌರ ಕಾರ್ಮಿಕರು ನೈಜ ಕಾಯಕ ಯೋಗಿಗಳು, ಸ್ವಚ್ಛತಾ ರೂವಾರಿಗಳು, ಸಂದಿಗ್ಧ ಸ್ಥಿತಿಯಲ್ಲಿಯೂ ಬಿಡುವಿಲ್ಲದೆ ನೈರ್ಮಲೀಕರಣ ಕಾರ್ಯ ಕೈಗೊಳ್ಳುತ್ತಿರುವ ಅವರ ಸೇವೆ ಅನನ್ಯವಾಗಿದೆ ಎಂದು ನಗರ ಸಭೆ ಸದಸ್ಯೆ ಶ್ರೀಮತಿ ಸಾಬೇರಾ ಬೇಗಂ ಹೇಳಿದರು
ಅವರು ನಗರದ ಸಂತ್ ಥಾಮಸ್ ಶಾಲೆಯ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೊರೊನಾದಂತ ಸಂದಿಗ್ಧ ಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಬಿಡುವಿಲ್ಲದೆ ನೈರ್ಮಲೀಕರಣ ಕಾರ್ಯ ಮಾಡಿದ್ದು ಹಾಗೂ ನಗರದ ಸ್ವಚ್ಛತೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ನಗರ ಸಭೆಯ ಪೌರ ಕಾರ್ಮಿಕರ ಅವರ ಕಾರ್ಯ ಶ್ಲಾಘನೀಯ ಎಂದರು.
ಸಂತ್ ಥಾಮಸ್ ಚರ್ಚ್ನ ಫಾದರ್ ಜೆರಾಲ್ಡ್ ಸಾಗರ ಮಾತನಾಡಿ, ಪೌರ ಕಾರ್ಮಿಕರು ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡುವ ವೈದ್ಯರಿದ್ದಂತೆ, ನಿತ್ಯ ಪಟ್ಟಣದ ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದಾರೆ, ಅವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಶಾಲೆಯ ವತಿಯಿಂದ ಪೌರ ಕಾರ್ಮಿಕರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಗರ ಸಭೆಯ ಕಂದಾಯ ಅಧಿಕಾರಿ ಸುರೇಶ ಮೈಂದರಗಿ, ವಿಜಯ ಕುಮಾರ, ಅನಿಲ ಹೊನಗುಂಟಿ, ಈರಣ್ಣ ಕುರಿ ಹಾಗೂ ಶಾಲೆಯ ಮುಖ್ಯ ಗುರು ಕಾಣಿಕ್ಯ ಮೇರಿ ಸಿಬ್ಬಂದಿಗಳಾದ ಇಮ್ಯಾನವೇಲ್, ಶರಣು ತುಂಗಳ, ಮಿಸ್ ರೂಪಾ, ಸುಮಲತಾ ಮೇರಿ, ನಂದಿನಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.