ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಆಚರಣೆ

ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಆಚರಣೆ
ಕಲಬುರಗಿ : ಶ್ರೀ ಸದ್ಗುರು ಕಲಾ ಸಂಸ್ಥೆ ರಿ ಕಲಬುರಗಿ ಇವರ ವತಿಯಿಂದ ಗಾನಯೋಗಿ ಡಾ ಪಂ ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವದ ನಿಮಿತ್ಯ ವಚನ ಶೃದ್ದಾಂಜಲಿ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಲ ಶಿವಾಜಿ ನಗರದಲ್ಲಿ ಗುರುವಾರ ಸಂಜೆ 6 ಗಂಟೆಗೆ ಜರುಗಿತು,
ಪ್ರಸ್ತುತ ಕಾಲಮಾನದಲ್ಲಿ ಎಲ್ಲಾ ಅವಯವಗಳು ಚೆನ್ನಾಗಿದ್ರು ಸಹ ನಮಗೆ ಏನಿಲ್ಲ ಅಂತ ಕೈಕಟ್ಟಿ ಕೂಡುವಂತವರಾಗಿದ್ದೇವೆ, ಆದರೆ ಗದುಗಿನ ಶ್ರೀ ಪುಟ್ಟರಾಜ ಕವಿ ಶಿವಯೋಗಿಗಳು ತಾವು ಬಾಹ್ಯದಲ್ಲಿ ಅಂಧರಾದರೂ ಕೂಡ ಅಂತರಂಗದ ಮಹಾನ್ ಜ್ಞಾನದ ದೀವಿಗೆಯನ್ನು ಪಡೆದವರು, ಸಾವಿರಾರು ಅಂಧ ಅನಾಥ ಮಕ್ಕಳಿಗೆ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ವಿದ್ಯೆ ನೀಡಿ ಸಂಗೀತ ಲೋಕಕ್ಕೆ ಅಪಾರ ಕೂಡುಗೆ ನೀಡಿದ ಮಹಾತ್ಮರು ಅಂಥವರ ಸ್ಮರಣೆ ಸೂರ್ಯ ಚಂದ್ರ ಇರವವರೆಗೂ ಕೂಡ ನಾಡಿನಲ್ಲಿ ನಡಿಯುತ್ತೆ, ಅವರು ಅಜಾರಮರರೂ ಎಂದು ಕಾರ್ಯಕ್ರಮದ ಮುಖ್ಯಅತಿಥಿ ಸ್ಥಾನವಹಿಸಿದ ಶಶಿಕಲಾ ಬಸವರಾಜ ಇಂಗಳಗಿ ನುಡಿದರು,
ಗವಾಯಿಗಳು ಬರೀ ಸಂಗೀತ ಅಷ್ಟೆ ಅಲ್ಲ ತ್ರಿಕಾಲ ಲಿಂಗಪೂಜಾ ನಿಷ್ಟರಾಗಿದ್ದರು ಹಾಗೂ ಮೂರು ಭಾಷೆಯಲ್ಲಿ ಪುರಾಣ ಬರೆದ ಮಹಾನ್ ಮೇಧಾವಿ ಮತ್ತು ಜ್ಞಾನದ ದಿವ್ಯ ದೃಷ್ಟಿ ಹೊಂದಿದವರಾಗಿದ್ದರು, ಎಂದು ಕಾರ್ಯಕ್ರಮದ ನೇತೃತ್ವ ವಹಿಸಿದ ಶ್ರೀ ಶರಣಯ್ಯ ಸ್ವಾಮಿ ಮತ್ತಿಮೂಡ ಮಾತನಾಡಿದರು, ಕಾರ್ಯಕ್ರಮದ ಅಧ್ಯಕ್ಷತೆ ಪ್ರಭಾಕರ ಜಮಾದಾರ ವಹಿಸಿದ್ದರು, ಹಾಗೂ ಹಣಮಂತರಾಯ ಎಸ್ ಪೂಜಾರಿ, ಶ್ರೀ ದತ್ತು ಪೂಜಾರಿ, ಚಂದ್ರಕಾಂತ ಗುಳಗಿ, ವಿಜಯಲಕ್ಷ್ಮಿ ಎಸ್ ಕೆಂಗನಾಳ, ಕಲಾ ಸಂಸ್ಥೆಯ ಅಧ್ಯಕ್ಷ ಶಿವಲಿಂಗಪ್ಪಾ ಕೆಂಗನಾಳ ಹಾಗೂ ಇತರರು ಉಪಸ್ಥಿತರಿದ್ದರು,
ವಚನ ಶೃದ್ದಾಂಜಲಿ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಸರಾಂತ ಸಂಗೀತ ಕಲಾವಿದರಾದ ಸೈದಪ್ಪಾ ಚೌಡಪೂರ, ರಾಚಯ್ಯ ಶಾಸ್ತ್ರಿ ರಟಕಲ್, ಶಿವಕುಮಾರ ಪಾಟೀಲ್ ಬೇಡಜುರ್ಗಿ, ಚೇತನ ಬಿದಿಮನಿ, ವಿನೋದ ದಸ್ತಾಪೂರ,ಬಸವಕುಮಾರ ಕೆಂಗನಾಳ, ಮೌನೇಶ ಪಂಚಾಳ, ಶಿವಾನಂದ ಹಿತ್ತಲಶಿರೂರ, ಇನ್ನು ಅನೇಕ ಕಲಾವಿದರು ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ನಡಿಸಿಕೊಟ್ಟರು , ನಾಗಲಿಂಗಯ್ಯ ಶಾಸ್ತ್ರಿಗಳು ಸ್ಥಾವರಮಠ ಸುಂಟನೂರ ನಿರೂಪಿಸಿದರು.