ಸೂರ್ಯಕಾಂತ್ ಎಂ. ಜಮಾದಾರ್ ಅವರಿಗೆ ಸ್ನೇಹ ಶ್ರೀಪ್ರಶಸ್ತಿ

ಸೂರ್ಯಕಾಂತ್ ಎಂ. ಜಮಾದಾರ್ ಅವರಿಗೆ ಸ್ನೇಹ ಶ್ರೀಪ್ರಶಸ್ತಿ
ಕಲಬುರಗಿ: ಇಲ್ಲಿನ ಅಖಿಲ ಕರ್ನಾಟಕ ಸ್ನೇಹ ಗಂಗವಾಹಿನಿ ಸಂಸ್ಥೆ ಕೊಡ ಮಾಡುವ ಸ್ನೇಹ ಶ್ರೀ ಪ್ರಶಸ್ತಿಯನ್ನು ಉದಯವಾಣಿ ಪತ್ರಿಕೆಯ ವರದಿಗಾರ ಸೂರ್ಯಕಾಂತ್ ಎಂ. ಜಮಾದಾರ್ ಅವರಿಗೆ ನೀಡಿ ಗೌರವಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ. ಬಿ. ಪಿ ಬುಳ್ಳ ತಿಳಿಸಿದ್ದಾರೆ.
ಸೂರ್ಯಕಾಂತ್ ಜಮಾದಾರ್ ಅವರು ಕಳೆದ 30 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆ ಹಾಗೂ ಕೋಲಿ ಸಮಾಜದ ಪ್ರತಿ ಅವರಿಗಿರುವ ಪ್ರೀತಿ ವಿಶ್ವಾಸ ಹಾಗೂ ಕಾಳಜಿಯನ್ನು ಗಮನಿಸಿ ನಮ್ಮ ಸಂಸ್ಥೆಯ ಸರ್ವ ಸದಸ್ಯರ ಅಭಿಪ್ರಾಯದಂತೆ ಈ ವರ್ಷದ ಸ್ನೇಹ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈಚೆಗೆ ನಡೆದ ಸಂಸ್ಥೆಯ ಸಭೆಯಲ್ಲಿ ಈ ಕುರಿತು ಎಲ್ಲಾ ಸದಸ್ಯರ ಅಭಿಪ್ರಾಯ ಪಡೆದು ನಿರ್ಣಯ ಕೈಗೊಳ್ಳಲಾಗಿದೆ.
ಕಲ್ಬುರ್ಗಿಯ "ಕ್ರಾಂತಿ" ಪತ್ರಿಕೆಯಿಂದ ತಮ್ಮ ಸೇವಾ ವೃತ್ತಿಯನ್ನು ಆರಂಭಿಸಿದ ಅವರು,
ರಾಜ್ಯಮಟ್ಟದ ಪತ್ರಿಕೆಗಳಾದ ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಟಿವಿ 9 ಹಾಗೂ ಸಂಧ್ಯಾಕಾಲ ಸೇರಿದಂತೆ ಹಾಲಿ ಉದಯವಾಣಿ ಪತ್ರಿಕೆಗಳ ಮೂಲಕ ನಿರಂತರವಾಗಿ ಪತ್ರಿಕಾ ಸೇವೆಯನ್ನು ಮಾಡುತ್ತಿದ್ದಾರೆ.
ಜೂನ್ 29ರಂದು ಬೆಳಗ್ಗೆ ನಗರದ ಸ್ನೇಹ ಗಂಗಾವಾಹಿನಿ ಸಂಸ್ಥೆಯ ದಿ. ಕಸ್ತೂರಿಬಾಯಿ ಬುಳ್ಳಾ ಸ್ಮಾರಕ ಭವನದ ಸಭಾಂಗಣದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಆದ್ದರಿಂದ ಕೋಲಿ ಸಮಾಜದ ಬಂಧುಗಳು ಹಾಗೂ ಸ್ನೇಹಿತರು ಹಾಗೂ ಹಿತೈಷಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿ ಮಾಡಬೇಕು ಎಂದು ಡಾ.ಬುಳ್ಳಾ ಮನವಿ ಮಾಡಿದ್ದಾರೆ
.