ಕೆಬಿಎಸ್ ಬ್ಯಾಂಕ್ ವಿರುದ್ಧ ಬೃಹತ್ ಪ್ರತಿಭಟನೆ

ಕೆಬಿಎಸ್ ಬ್ಯಾಂಕ್ ವಿರುದ್ಧ ಬೃಹತ್ ಪ್ರತಿಭಟನೆ
ಕಲಬುರಗಿ: ಕರ್ನಾಟಕದ ಕೆಬಿಎಸ್ ಬ್ಯಾಂಕಿನ 13 ಶಾಖೆಗಳಲ್ಲಿರುವ ನೌಕರರ ಮೇಲೆ ನಿರಂತರವಾಗಿ ದಬ್ಬಾಳಿಕೆಯಾಗುತ್ತಿದೆ ಎಂದು ಆರೋಪಿಸಿ,ಆಡಳಿತಮಂಡಳಿಯವರ ಮೇಲೆಸೂಕ್ತ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ಯುವಶಕ್ತಿ ಸೈನ್ಯದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಮೇಲಾಧಿಕಾರಿಗಳು ಸಿಬ್ಬಂದಿಯ ಮೇಲೆ ಮಾಡುವ ಅನ್ಯಾಯವನ್ನು ವಿರೋಧಿಸುವ ಸಿಬ್ಬಂದಿಯನ್ನು ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆ ಮಾಡಿ ತಮ್ಮಿಂದ ತಾವೇ ನೌಕರಿ ಬಿಟ್ಟು ಹೋಗುವ ಹಾಗೇ ಪರಿಸ್ಥಿತಿ ನಿರ್ಮಾಣ ಮಾಡುತ್ತಾರೆ. ರಜಾ ದಿನಗಳಲ್ಲಿಯು ಕೂಡಾ ಸಿಬ್ಬಂದಿಯವರಿAದ ಕೆಲಸ ಮಾಡುವಂತೆ ಒತ್ತಾಯ ಮಾಡುತ್ತಾರೆ. ವರ್ಷಗಟ್ಟಲೇ ಕಳೆದರೂ ಕೂಡಾ ಸಿಬ್ಬಂದಿಗಳಿಗೆ ಟಿ.ಎ.ಡಿ.ಎ.ಕೊಡುವುದಿಲ್ಲ.ಕಡಿಮೆ ಸಂಬಳದಲ್ಲಿ 12ರಿಂದ 14 ಗಂಟೆಗಳ ಕಾಲಕೆಲಸಮಾಡಿಸಿಕೊಳ್ಳುತ್ತಾರೆ. ಸಂಬಳ ಜಾಸ್ತಿ ಕೇಳಿದರೆ ನೌಕರಿಯನ್ನು ಬಿಟ್ಟು ಹೋಗಿ ಎಂದು ಖಡಾಖಂಡಿತವಾಗಿ ಬೆದರಿಸುತ್ತಾರೆ. ಈ ಬ್ಯಾಂಕ್ ಹೆಸರಿಗೆ ಮಾತ್ರ ಬ್ಯಾಂಕಾಗಿದೆ. ಕಾರ್ಯನಿರ್ವಹಿಸುವುದು ಎಲ್ಲಾ ಖಾಸಗಿ ಫೈನಾನ್ಸ್ ತರಹ ಆಗಿರುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಯುವಶಕ್ತಿ ಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಲಿಂಗರಾಜ ಗುಂಡುರಕರ್, ಪಾಲಂಜಿ ದಯಾನಂದ ಬಬಲಾದ, ಅಶ್ವತಕುಮಾರ ಮಾಡ್ಯಾಳಕರ್, ಚಂದ್ರಕಾAತ ಧೂಳಪ್ಪ ಶಿರಡೋಣ, ದಯಾನಂದ ಜಮಾದಾರ ಅಂಕಲಗಿ, ಶಂಕರ ಮರತೂರ ಅಂಕಲಗಿ, ಪ್ರಕಾಶ ಜಮಾದಾರ ಅಂಕಲಗಿ ಸೇರಿದಂತೆ ಇತರರಿದ್ದರು
.