ಬಸವ ಭವನ ನಿರ್ಮಾಕ್ಕೆ ಬಸವಪರ ಸಂಘಟನೆಗಳಿಂದ ಅನಿರ್ದಿಷ್ಟ ಧರಣಿ
ಬಸವ ಭವನ ನಿರ್ಮಾಕ್ಕೆ ಬಸವಪರ ಸಂಘಟನೆಗಳಿಂದ ಅನಿರ್ದಿಷ್ಟ ಧರಣಿ
ಚಿಂಚೋಳಿ : ಬಸವ ಭವನ ನಿರ್ಮಾಣಕ್ಕೆ ನಿವೇಶನ ಸ್ಥಳಾವಕಾಶ ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಚಿಂಚೋಳಿ ಎಲ್ಲಾ ಬಸವಪರ ಸಂಘಟನೆಗಳ ಒಕ್ಕೂಟ ವತಿಯಿಂದ ಹಳೆಯ ತಾಲೂಕ ಆಡಳಿತ ಸೌಧ ತಹಸೀಲ್ ಕಾರ್ಯಾಲಯದ ಎದುರುಗಡೆ ಅನಿರ್ದಿಷ್ಟ ಧರಣಿ ಕೈಗೊಂಡಿದೆ.
ಕ್ಷೇತ್ರದ ಶಾಸಕರಿಂದ ಹಿಡಿದು ಸಚಿವರವರೆಗೆ ಎಲ್ಲರಿಗೂ ಚಿಂಚೋಳಿ ಲಿಂಗಾಯತರ ಅವಶ್ಯಕ ಬೇಡಿಕೆ, ಬಸವ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವ ವಿಷಯದ ಕುರಿತು ಮನವರಿಕೆ ಮಾಡಿ, ಸಹಕಾರ ಕೋರಲಾಗಿತ್ತು. ಆದರೆ ಚಿಂಚೋಳಿ ಲಿಂಗಾಯತರ ಸಹಕಾರಕ್ಕೆ ಯಾರೊಬ್ಬರು ಬಂದಿಲ್ಲ. ರಾಜ್ಯ ಮಟ್ಟದಲ್ಲಿ ಬಸವಣ್ಣನವರ ಬಗ್ಗೆ ದೊಡ್ಡ ದೊಡ್ಡ ಮಾತುಗಳು ಹೇಳಿ ಚಪ್ಪಾಳೆ ಗಿಟ್ಟಿಸುವ ಯಾವ ನಾಯಕರು ಚಿಂಚೋಳಿಯ ಅಧಿಕಾರಿಗಳಿಗೆ ಬಸವ ಪ್ರತಿಮೆ ತೆಗೆಯುವುದನ್ನು ತಡೆಯಲು ನಿರ್ದೇಶನ ನೀಡಲಿಲ್ಲ.
ತಾಲೂಕಿನ ಅಧಿಕಾರಿಗಳು ಮಾಡಿದ ಈ ಕೆಲಸ ಸರಕಾರಕ್ಕೆ ಕಪ್ಪು ಚುಕ್ಕೆ ತಂದಿದ್ದು, ಕೂಡಲೇ ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸಿ, 2 ಎಕರೆ ಜಮೀನು ಮಂಜೂರು ಮಾಡುವವರೆಗೆ ಅನಿರ್ದಿಷ್ಟ ಧರಣಿಗೆ ಮುಂದುವರಿಕೆಗೆ ಇಳಿದಿದ್ದು, ಜನಪ್ರತಿನಿಧಿಗಳು ಕಣ್ಣು ತೆರೆದು ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡಬೇಕು. ಇಲ್ಲ ಅಂದ್ರೆ ಲಿಂಗಾಯತ ಸಮಾಜ ಸರಕಾರದ ವಿರುದ್ಧ ಧಿಕ್ಕಾರ ಹೇಳುವ ಸಮಯವು ದೂರವಿಲ್ಲ. ಶಾಂತಿಯ ಮಂತ್ರ ಹೇಳುವ ಲಿಂಗಾಯತ ಸಮಾಜಕ್ಕೆ ಉಗ್ರ ರೂಪ ತಾಳಲು ಅವಕಾಶ ಕೊಡೇಬೇಡಿ ಎಂದು ಲಿಂಗಾಯತ ಸಂಘಟನೆಗಳು ಆಗ್ರಹಿಸಿ, ಸರಕಾರಕ್ಕೆ ಒತ್ತಾಯಿಸಿವೆ.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಶರಣು ಪಾಟೀಲ ಮೋತಕಪಳ್ಳಿ, ಸಮಾಜದ ಹಿರಿಯ ಮುಖಂಡ ಬಸವರಾಜ ಸಜ್ಜನ,ಸುರೇಶ ದೇಶಪಾಂಡೆ, ಸಂತೋಷ ಕಶೆಟ್ಟಿ, ವೀರೇಶ ಯಂಪಳ್ಳಿ, ಲೋಕೇಶ ಶೇಳಗಿ, ಅನಿಲಕುಮಾರ, ಆನಂದ ಹಿತ್ತಲ್, ರಾಜಶೇಖರ ಹಿತ್ತಲ್, ಶಂಕರ ಶಿವಪೂರಿ ಅವರು ಉಪಸ್ಥಿತರಿದ್ದರು.