ಸಂಸ್ಕೃತಿ ಸಂವರ್ಧನೆಯಲ್ಲಿ ಹಂಸಜ್ಯೋತಿ ಪಾತ್ರ ಹಿರಿದಾದದು – ಶ್ರೀನಿವಾಸ ಜಿ ಕಪ್ಪಣ್ಣ ಅಭಿಮತ

ಸಂಸ್ಕೃತಿ ಸಂವರ್ಧನೆಯಲ್ಲಿ ಹಂಸಜ್ಯೋತಿ ಪಾತ್ರ ಹಿರಿದಾದದು – ಶ್ರೀನಿವಾಸ ಜಿ ಕಪ್ಪಣ್ಣ ಅಭಿಮತ

ಸಂಸ್ಕೃತಿ ಸಂವರ್ಧನೆಯಲ್ಲಿ ಹಂಸಜ್ಯೋತಿ ಪಾತ್ರ ಹಿರಿದಾದದು – ಶ್ರೀನಿವಾಸ ಜಿ ಕಪ್ಪಣ್ಣ ಅಭಿಮತ 

'ಹಂಸ ಜ್ಯೋತಿ ಸುವರ್ಣ ಸಂಭ್ರಮಾಚರಣೆ ' ಮತ್ತು 10 ಜನ ಸಾಧಕೋತ್ತ ಮರಿಗೆ 'ಹಂಸ ಸಮ್ಮಾನ್' 2025 ಪ್ರಶಸ್ತಿ ಪ್ರದಾನ ಸಮಾರಂಭ 

ಆಯೋಜನೆ: ಹಂಸ ಜ್ಯೋತಿ ಟ್ರಸ್ಟ್

ಹಂಸ ಜ್ಯೋತಿಯ ಸುವರ್ಣ ಸಂಭ್ರಮಾಚರಣೆ ; ಹಂಸ ಸಾಂಸ್ಕೃತಿಕ ಸಂಭ್ರಮ ಅಂತರಾಷ್ಟ್ರೀಯ ಯೋಗ ಮತ್ತು ಸಂಗೀತ ದಿನಾಚರಣೆ ಅಂಗವಾಗಿ ಹಂಸ - ಸಂಗೀತ ,ನೃತ್ಯ ಯೋಗ ಮಿಲನ ಮತ್ತು 10 ಜನ ಸಾಧಕೋತ್ತಮರಿಗೆ ಪ್ರತಿಷ್ಠಿತ 'ಹಂಸ ಸಮ್ಮಾನ್ '2025 ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಅರಮನೆ ರಸ್ತೆ ಮಹಾರಾಣಿ ಕಾಲೇಜು ಪಕ್ಕದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. .

ಹಿರಿಯ ರಂಗಸಂಘಟಕ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ ಕಪ್ಪಣ್ಣ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ನಾಡಿನ ಸಾಂಸ್ಕೃತಿಕ ಚಳುವಳಿಯ ಸಂದರ್ಭದಲ್ಲಿ ಪ್ರಮುಖ ಸಂಸ್ಥೆಯಾದ ಹಂಸ ಜ್ಯೋತಿಯ ಸುವರ್ಣ ಸಂಭ್ರಮಾಚರಣೆ ನಡೆಸುತ್ತಿರುವ ಈ ಹೊತ್ತಿನಲ್ಲಿ ಸಾಮಾಜಿಕ ಕಳಕಳಿಯ ಧ್ಯೇಯವನ್ನು ಅರ್ಥಪೂರ್ಣವಾಗಿ ಆನುಷ್ಠಾನಗೊಳಿಸುತ್ತ ಸಂಸ್ಕೃತಿ ಸಂವರ್ಧನೆಯಲ್ಲಿ ಹಂಸಜ್ಯೋತಿ ಪಾತ್ರ ಹಿರಿದಾದದು ಎಂದು ಅಭಿಪ್ರಾಯಪಟ್ಟರು . 

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌ .ಪ್ರಧಾನ ಕಾರ್ಯದರ್ಶಿ ನಾಡೋಜ ಡಾ .ವೂಡೆ ಪಿ ಕೃಷ್ಣ, ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ. ರಾಮಚಂದ್ರ , ,ಮಾಜಿ ಶಾಸಕ ಎಸ್ ಬಾಲರಾಜ್, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಎಂ ಮುನಿನಾರಾಯಣಪ್ಪ ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಿರ್ಮಾಪಕಿ ಡಾ.ಸುಕನ್ಯಾ ಹಿರೇಮಠ ,ಅಖಿಲ ಕರ್ನಾಟಕ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷ ರೋಷಣಿ ಗೌಡ, ಕರ್ನಾಟಕ ಪದ್ಮಶಾಲಿ ಸಂಘದ ಅಧ್ಯಕ್ಷ ಎನ್ ಜಗದೀಶ್ , ಲೆಕ್ಕ ಪರಿಶೋಧಕ ಕೆ. ಅಂಜನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು .

ಹತ್ತು ಜನ ಸಾಧಕೋತ್ತಮರಿಗೆ 'ಹಂಸ ಸನ್ಮಾನ 2025 ' ಪ್ರಶಸ್ತಿ ಪ್ರದಾನ 

ಸಾಂಸ್ಕೃತಿಕ -ಶೈಕ್ಷಣಿಕ -ಸಾಮಾಜಿಕ ರಂಗದಲ್ಲಿ ಅನನ್ಯ ಕೊಡುಗೆ ನೀಡಿರುವ ನಾಡಿನ 10 ಸಾಧಕೋತ್ತಮರಿಗೆ 2025 ನೇ ಸಾಲಿನ ಹಂಸ ಜ್ಯೋತಿ ಸುವರ್ಣ ಸಂಭ್ರಮಾಚರಣೆ 'ಹಂಸ ಸಮ್ಮಾನ್ ' ಪ್ರಶಸ್ತಿ ಪ್ರದಾನ ಮಾಡಿ ಸುಂದರವಾದ ಸರಸ್ವತಿ ವಿಗ್ರಹದ ಸ್ಮರಣಿಕೆ , ಪ್ರಶಸ್ತಿ ಪತ್ರ ದೊಂದಿಗೆ ಗೌರವಿಸಲಾಯಿತು

ಭಾರತೀಯ ಭೂ ವೈಜ್ಞಾನಿಕ ಸಮೀಕ್ಷೆ ಮಹಾ ನಿರ್ದೇಶಕ ಡಾ. ಕೆ ವಿ ಕೃಷ್ಣಮೂರ್ತಿ , ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಹಿರಿಯ ಕಲಾವಿದ ವಿದ್ವಾನ್ ಆರ್ ಕೆ ಪ್ರಸನ್ನ ಕುಮಾರ್ ,ಬೆಂಗಳೂರು ನಗರ ವಿಶ್ವವಿದ್ಯಾಲಯದ ಕೆನರಾ ಬ್ಯಾಂಕ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಪ್ರಾಧ್ಯಾಪಕಿ ಮತ್ತು ನಿರ್ದೇಶಕಿ ಡಾ .ನಿರ್ಮಲ ಎಂ, ಕ್ರೀಡಾ - ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕಿ ಕೆ .ಶಶಿಕಲಾ ,ರೂಪಕಲಾ ನೃತ್ಯ ಶಾಲೆಯ ನಿರ್ದೇಶಕಿ ಖ್ಯಾತ ನೃತ್ಯ ಕಲಾವಿದೆ ವಿದುಷಿ ರೂಪಶ್ರೀ ಅರವಿಂದ ,ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಮಹಿಳಾ ವಿಭಾಗ ಅಧ್ಯಕ್ಷೆ ಉಮಾ ಜಗದೀಶ ,ಓಂ ಯೋಗ ಮತ್ತು ಧ್ಯಾನ ತರಬೇತಿ ಕೇಂದ್ರದ ನಿರ್ದೇಶಕಿ ಕೆ ಎಸ್ ಕೊಟ್ರಮ್ಮ ,ಮಾರುತಿ ಸಿಲ್ಕ್ಸ್ ನಿರ್ವಾಹಕ ಹೆಚ್ .ಲೋಕೇಶ್ ,ಕರ್ನಾಟಕ ಯುವ ಸಂಸ್ಥೆಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ ಫಣಿಂದ್ರ ಪ್ರಸಾದ್ ಹಾಗೂ ಮಹಾರಾಷ್ಟ್ರ ಮುಂಬೈನ ಆಲ್ ಇಂಡಿಯಾ ಪಿಕಲ್ ಬಾಲ್ ಸಂಸ್ಥೆ ಇವರುಗಳು ಈ ಸನ್ಮಾನಕ್ಕೆ ಭಾಜನರಾಗಿದ್ದಾರೆ .

ವೈವಿಧ್ಯಮಯ ಹಂಸ ಸಾಂಸ್ಕೃತಿಕ ಸಂಭ್ರಮ : 

ಸುನಾದ ತರಂಗಿಣಿ ತಂಡವರಿಂದ ಹಂಸ ಗಾನ ನಾದ ವೈಭವ ನಡೆಯಲಿದೆ .ವಿದ್ವಾನ್ ಬೆಟ್ಟ ವೆಂಕಟೇಶ್ ನಿರ್ವಹಣೆಯಲ್ಲಿ ವಿದ್ವಾನ್ ಆರ್ ಕೆ ಪ್ರಸನ್ನಕುಮಾರ್ -ಗಾಯನ ; ವಿ ದ್ವಾನ್ ಆರ್‌ಪಿ ಪ್ರಶಾಂತ್- ವೀಣೆ; ವಿದುಷಿ ಭಾರತಿ ಬಾಬು -ವೀಣೆ; ವಿದ್ವಾನ್ ರಾಹುಲ್ ವೆಂಕಟೇಶ್ -ಕೊಳಲು ;ವಿದ್ವಾನ್ ಬೆಟ್ಟ ವೆಂಕಟೇಶ್ -ಮೃದಂಗ; ವಿದ್ವಾನ್ ಸುಬ್ರಮಣ್ಯ ಮೋಹಿತೆ -ಖಂಜಿರ ; ವಿದ್ವಾನ್ ನಟರಾಜ ತಮ್ಮಯ್ಯ - ಘಟಂ ; ವಿದ್ವಾನ್ ಎಸ್ ಮುಕುಂದ- ಡೋಲಕ್ ;ವಿದ್ವಾನ್ ರಘುರಾಮಕೃಷ್ಣ- ತಬಲ ; ವಿದ್ವಾನ್ ಕಾರ್ತಿಕ್ ಮೋಹಿತೆ -ಮೋರ್ಚಿಂಗ್ ಪಕ್ಕವಾದ್ಯದಲ್ಲಿ ಸಹಕರಿಸಿದರು.

ಹೆಚ್ ವಿ ನಾಗರಾಜ್ ನಿರ್ವಹಣೆಯಲ್ಲಿ ಕರ್ನಾಟಕ ಯೋಗ ಕ್ರೀಡಾ ಕೇಂದ್ರದ ವೈವಿಧ್ಯಮಯ ಯೋಗ ಪ್ರದರ್ಶನ ಮತ್ತು ಶ್ರೀಮತಿ ಸವಿತಾ ನಿರ್ವಹಣೆಯಲ್ಲಿ ಓಂ ಯೋಗ ಮತ್ತು ಧ್ಯಾನ ತರಗತಿ ಅವರಿಂದ ಯೋಗ ನೃತ್ಯ ಪ್ರದರ್ಶನ ಆಯೋಜಿಸಲಾಗಿತ್ತು. ವಿದುಷಿ ರೂಪಶ್ರೀ ಅರವಿಂದ ನಿರ್ದೇಶನದಲ್ಲಿ ರೂಪಕಲ ನೃತ್ಯಶಾಲಾ ಕಲಾವಿದರಿಂದ ಹಂಸ ನೃತ್ಯ ವೈಭವ ಸಾಮೂಹಿಕ ನೃತ್ಯ ಪ್ರದರ್ಶನವನ್ನು ಮಾಡಿದರು ಎಂದು ಹಂಸ ಜ್ಯೋತಿ ವ್ಯವಸ್ಥಾಪಕ ಟ್ರಸ್ಟಿ ಎಂ ಮುರಳಿದರ ಮತ್ತು ಕಾರ್ಯನಿರ್ವಾಹಕ ಟ್ರಸ್ಟಿ ವಿಜಯ ಮುರುಳಿಧರ ತಿಳಿಸಿರುತ್ತಾರೆ .