ಭರತನೂರಿನ ಬೆಳಕು

ಭರತನೂರಿನ ಬೆಳಕು
ಕಾಳಗಿ ತಾಲೂಕಿನ ಭರತನೂರಿನ ವಿರಕ್ತಮಠ ಶಿಕ್ಷಣ,ದಾಸೋಹ ಹಾಗೂ ಸಮಾಜ ಸೇವೆ ಮೂಲಕ ಖ್ಯಾತಿ ಪಡೆದಿದ್ದು. ಪೂಜ್ಯಶ್ರೀ ಲಿಂಗೈಕ್ಯ ಗುರುನಂಜೇಶ್ವರ ಶಿವಯೋಗಿಗಳು ಮಹಾತಪಸ್ವಿಗಳಾಗಿ ಮಠದ ಕೀರ್ತಿಯನ್ನು ಬೆಳಗಿಸಿದರು. ಪೂಜ್ಯರು ಲಿಂಗೈಕ್ಯ ಆದನಂತರ ಪಟ್ಟಕ್ಕೆ ಬಂದಿರುವ ಪರಮಪೂಜ್ಯರಾದ ಶ್ರೀ ಮ.ನಿ.ಪ್ರ. ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ಕಾಯಕ ಮತ್ತು ದಾಸೋಹವನ್ನು ಜೀವನದಲ್ಲಿ ಅಳವಡಿಸಿಕೊಂಡು "ಶ್ರೀಗಳವರ ನಡೆ ಕೃಷಿ ಕಡೆ" ಅನ್ನುವ ಹಾಗೆ ಕೃಷಿಯಲ್ಲಿ ಬಹಳ ದೊಡ್ಡ ಸಾಧನೆಯನ್ನು ಮಾಡಿ ಶ್ರೀಮಠಕ್ಕೆ ಆದಾಯದ ಕೊರತೆಯನ್ನು ನೀಗಿಸಿದ್ದಲ್ಲದೆ. ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಸಾಧನೆಯನ್ನು ಮಾಡುವುದರ ಮೂಲಕ ಬಡಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸಂಕಲ್ಪ ತೊಟ್ಟಿದ್ದು ಹೆಮ್ಮೆ ವಿಷಯ. ಪ್ರಸ್ತುತ ಶ್ರೀಗಳು ಮಠದ ಪಟ್ಟಾಧಿಕಾರಕ್ಕೆ ಬಂದು ಇಪ್ಪತ್ತೈದು (25) ವರ್ಷದಲ್ಲಿ ಸಮಾಜ ಸೇವೆ ಸೇರಿದಂತೆ ಜನಕಲ್ಯಾಣದ ಹಲವಾರು ಜನಪರ,ಜೀವಪರ ಕಾರ್ಯ ಮಾಡುತ್ತ ಜನಪ್ರಿಯ ಸ್ವಾಮಿಗಳಾಗಿದ್ದಾರೆ.
ಅವರ ಇಪ್ಪತ್ತೈದು ವರ್ಷದ ರಜತ ಮಹೋತ್ಸವ ಕಾರ್ಯಕ್ರಮ ಹತ್ತರಲ್ಲಿ ಹನ್ನೊಂದು ಆಗಬಾರದು ಎಂದು ಅರಿತ ಸಾಹಿತಿಗಳು ಮತ್ತು ಮಠದ ಭಕ್ತರು ಆದ ಡಾ.ವಿಜಯಕುಮಾರ ಪರುತೆ ಹಾಗೂ ಶ್ರೀ ರೇವಣಸಿದ್ಧಪ್ಪ ದುಕಾನ ಅವರು ಸೇರಿಕೊಂಡು ರಜತ ಮಹೋತ್ಸವದ ಸವಿನೆನಪಿಗಾಗಿ "ಭರತನೂರಿನ ಬೆಳಕು"ಎನ್ನುವ ಅಭಿನಂದನ ಸಂಪುಟ ಹೋರತಂದಿದ್ದು ಶ್ಲಾಘನಿಯ ಕಾರ್ಯ.
ಈ ಸಂಪುಟದಲ್ಲಿ ಗುರುವಿಗೆ ಅಭಿನಂದನೆ-ಕಾವ್ಯ ಕುಸುಮ,ಗುರುವಿಗೆ ಅಭಿನಂದನೆ-ಸಾಹಿತ್ಯ ಸುಮ,ಶರಣ ಸಾಹಿತ್ಯ-ಅನುಭಾವ ಚಿಂತನಗಳು,ಸಂಕಿರಣ ಸಾಹಿತ್ಯ-ವಿಮರ್ಶೆ ಲೇಖನಗಳು,ಶ್ರೀ ಮಠದ ಗ್ರಂಥಗಳ ಪರಿಚಯ,ಮಠದ ವಿವಿದ ಚಿತ್ರಪಟಗಳು ಸೇರಿದಂತೆ ಆರು ಭಾಗಗಳಲ್ಲಿ ವಿಂಗಡಿಸಿದ್ದು ಇಲ್ಲಿನ ಎಲ್ಲ ಲೇಖನಗಳು ಸರ್ವರಿಗೂ ಉಪಯುಕ್ತ ವಾಗಿದ್ದು ಅಲ್ಲದೆ ವಚನ ಹಾಗೂ ಶರಣ ಸಾಹಿತ್ಯ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗಂತೂ ಇದೊಂದು ಆಕಾರ ಗ್ರಂಥವಾಗುವುದರಲ್ಲಿ ಎರಡು ಮಾತಿಲ್ಲ.
ಪೂಜ್ಯರ ಹಾಗೂ ಗಣ್ಯರ ಸಂದೇಶಗಳೊಂದಿಗೆ ಪ್ರಾರಂಭವಾಗುವ ಈ ಕೃತಿಯು ಭರತನೂರಿನ ಶ್ರೀ ಗುರುನoಜೇಶ್ವರ ಪ್ರಕಾಶನ ದಿಂದ 2025 ರಲ್ಲಿ ಪ್ರಕಟಗೊಂಡಿದ್ದು 372 ಪುಟವಿರುವ ಪುಸ್ತಕದ ಬೆಲೆ 400 ರೂಪಾಯಿ ನಿಗದಿಪಡಿಸಲಾಗಿದೆ.ಪುಸ್ತಕದ ಮುದ್ರಣ ಅಂದವಾಗಿದ್ದು ಓದುಗರ ಮನಸ್ಸನ್ನು ಸೆಳೆಯುತ್ತದೆ.
ಡಾ.ಶರಣಬಸಪ್ಪ ವಡ್ದನಕೇರಿ