ಯುವ ಕವಿಗೋಷ್ಠಿಗೆ ಮಾಲಾ ಕಣ್ಣಿ ಆಯ್ಕೆ

ಯುವ ಕವಿಗೋಷ್ಠಿಗೆ ಮಾಲಾ ಕಣ್ಣಿ ಆಯ್ಕೆ

ಯುವ ಕವಿಗೋಷ್ಠಿಗೆ ಮಾಲಾ ಕಣ್ಣಿ ಆಯ್ಕೆ

ಕಲಬುರಗಿ: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಆಯೋಜಿಸಿರುವ ಕಲ್ಬುರ್ಗಿ ವಿಭಾಗ ಮಟ್ಟದ ಯುವ ಕವಿಗೋಷ್ಠಿಗೆ ನಗರದ ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥೆ ಹಾಗೂ ಯುವ ಕವಿಯತ್ರಿ ಮಾಲಾ ಕಣ್ಣಿ ಆಯ್ಕೆಯಾಗಿದ್ದಾರೆ.

ಜೂನ್ 17ರಂದು ಹೊಸಪೇಟೆ ನಗರದ ವಿಜಯನಗರ ಮಹಾವಿದ್ಯಾಲಯದಲ್ಲಿ ಯುವ ಕವಿಗೋಷ್ಠಿ ಜರುಗಲಿದೆ.

ಮಾಲಾ ಕಣ್ಣಿ ಅವರ ಆಯ್ಕೆಗೆ ಯುವ ಮುಖಂಡರಾದ ಸುರೇಶ ಬಡಿಗೇರ ಶರಣರಾಜ ಚಪ್ಪರಬಂದಿ, ಕಲ್ಯಾಣರಾವ ಪಾಟೀಲ್ ಕಣ್ಣಿ, ಮಹೇಶ್ಚಂದ್ರ ಪಾಟೀಲ್ ಕಣ್ಣಿ, ಲಿಂಗರಾಜ್ ಡಾಂಗೆ, ಸುಭಾಷ್ ಮೇತ್ರೆ, ಸವಿತಾ ನಾಶಿ, ಅಶ್ವಿನಿ ಚವ್ಹಾಣ್, ವಿಜಯಲಕ್ಷ್ಮಿ ಹಿರೇಮಠ, ಜಯಶ್ರೀ ಜೈನ್ ಪೂರ್ಣಿಮಾ ಕುಲಕರ್ಣಿ, ಶೀಲಾ ಕಲಬುರಗಿ ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.