ಮಹಾರಾಷ್ಟ್ರ ನಡೆ ಪ್ರಶಾಂತಗೌಡ ಆರ್. ಮಾಲಿಪಾಟೀಲ್ ಖಂಡನೀಯ

ಮಹಾರಾಷ್ಟ್ರ ನಡೆ ಪ್ರಶಾಂತಗೌಡ ಆರ್. ಮಾಲಿಪಾಟೀಲ್ ಖಂಡನೀಯ

ಮಹಾರಾಷ್ಟ್ರ ನಡೆ ಪ್ರಶಾಂತಗೌಡ ಆರ್. ಮಾಲಿಪಾಟೀಲ್ ಖಂಡನೀಯ

ಕಲಬುರಗಿ: ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಎತ್ತರಿಸುವುದನ್ನು ವಿರೋಧಿಸಿ ಮಹಾರಾಷ್ಟ್ರ ಸರ್ಕಾರ ಅಲ್ಲಿಯ ರೈತರನ್ನು ಎತ್ತಿ ಕಟ್ಟಿರುವುದನ್ನು ಬಲವಾಗಿ ಖಂಡಿಸು ತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷರಾದ ಪ್ರಶಾಂತಗೌಡ ಆರ್. ಮಾಲಿಪಾಟೀಲ್ ತಿಳಿಸಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಹಾರಾಷ್ಟ್ರ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ನಮ್ಮ ಭಾಗದ ರೈತರನ್ನು ಬಲಿ ಪಡೆಯುವ ಉದ್ದೇಶ ಹೊಂದಿದೆ. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿದ್ದೇ ಆದಲ್ಲಿ ಮಹಾರಾಷ್ಟ್ರ ವ್ಯಾಪ್ತಿಯ ಸಾಂಗ್ಲಿ, ಮಿರಜ್, ಸಾತಾರ ಹಾಗೂ ಇನ್ನಿತರ ಜಿಲ್ಲೆಗಳು ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಪ್ರವಾಹಕ್ಕೆ ತುತ್ತಾಗುತ್ತವೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿ ಹೇಳಬೇಕು. ಕರ್ನಾಟಕದ ಸುದ್ದಿಗೆ ಬಂದರೆ ರೈತರು ಸುಮ್ಮನೆ ಕುರುವುದಿಲ್ಲ ಎಂದು ಪ್ರಕಟಣೆಯ ಮೂಲಕ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಪಂಚಯ್ಯ, ಜ್ಯೋತಿ, ಸಂಗೀತ, ಶರಣು ಆಳಂದ್, ಮಲ್ಲಿಕಾರ್ಜುನ್ ಯಡ್ರಾಮಿ, ಸದಾಶಿವ ಇದ್ದರು