ಗೋಹತ್ಯ ,ಅತ್ಯಾಚಾರ ತಡೆದ ಶಿವಾಜಿ

ಶಿವಾಜಿಮಹಾರಾಜರ ಪಟ್ಟಾಭಿಷೇಕ ಸ್ಮರಣೆಯಲ್ಲಿ ಹಿಂದೂ ಸಾಮ್ರಾಜ್ಯೋತ್ಸವ ಅತ್ಯಾಚಾರ, ಗೋಹತ್ಯೆ ವಿರೋಧಿಸಿದ ಶಿವಾಜಿ ಮಹಾ ಪರಾಕ್ರಮಿ
ಚಿಂಚೋಳಿ: ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಗೋಹತ್ಯೆಯನ್ನು ಶಿವಾಜಿ ಬಾಲಕನಿದ್ದಾಗಲೇ ವಿರೋಧಿಸಿದ್ದರು. ಆದಿಲ್ ಶಾಹಿ ಎದುರು ತಲೆ ಬಾಗದ ಶಿವಾಜಿಯ ಸ್ವಾಭಿಮಾನ ನಮಗೆ ಸ್ಪೂರ್ಥಿ ತುಂಬುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ
ಜಿಲ್ಲಾ ಮುಖ್ಯಮಾರ್ಗಗಳ ಪ್ರಮುಖರಾದ ರವೀಂದ್ರ ಕಾನಾಗಡ್ಡ ತಿಳಿಸಿದರು.
ಅವರು ಇಲ್ಲಿನ ದೇವಡಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗುರುವಾರ ಹಮ್ಮಿಕೊಂಡ ಹಿಂದೂ ಸಾಮ್ರಾಜ್ಯೋತ್ಸವದಲ್ಲಿ ಮಾತನಾಡಿದರು.
ಶಿವಾಜಿ ಚಾಣಕ್ಷ ಹಾಗೂ ಪರಾಕ್ರಮಿಯಾಗಿದ್ದಲ್ಲದೇ ತನ್ನ ಸಾಮ್ರಾಜ್ಯದಲ್ಲಿ ಸ್ತ್ರೀಯರನ್ನು ಅತ್ಯಂತ ಗೌರವದಿಂದ ಕಂಡಿದ್ದಾರೆ ಎಂದರು.
ಜಿಲ್ಲಾ ಸಂಘಚಾಲಕ ಅಶೋಕ ಪಾಟೀಲ ಮಾತನಾಡಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಅಂಗವಾಗಿ 2025 ಅಕ್ಟೋಬರ್ 2ರಿಂದ 2026ರ ವಿಜಯದಶಮಿವರೆಗೆ ವರ್ಷವಿಡಿ ಒಟ್ಟು ೭ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ವಿಜಯ ದಶಮಿ ಹಬ್ಬದಂದು ಶಾಖಾ ಮಟ್ಟದ ಪಥ ಸಂಚಲನ, ಅಕ್ಟೋಬರ್ ತಿಂಗಳಲ್ಲಿ ತಾಲ್ಲೂಕು ಮಟ್ಟದ ಬೃಹತ್ ಪಥಸಂಚಲನ, ನವೆಂಬರ್-ಡಿಸೆಂಬರ್ನಲ್ಲಿ ಮನೆ ಮನೆ ಸಂಪರ್ಕ, ಜನೆವರಿ ತಿಂಗಳಲ್ಲಿ ಹೋಬಳಿ ಮಟ್ಟದ ಹಿಂದೂ ಸಮಾವೇಶ, ಗಣ್ಯ ನಾಗರಿಕರ ಸಭೆ, ಸಕಲ ಸಮಾಜದ ಪ್ರಮುಖರ ಸಭೆ ಹಾಗೂ ಎಲ್ಲಾ ಗ್ರಾಮಗಳಲ್ಲಿ ಶಾಖೆ ಸ್ಥಾಪನೆ ಮುನ್ನಡೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಪತ್ರಕರ್ತ ಜಗನ್ನಾಥ ಶೇರಿಕಾರ ಹಿಂದೂ, ಹಿಂದುತ್ವ ಮತ್ತು ಹಿಂದೂಸ್ತಾನ ಕುರಿತು ಮಾತನಾಡಿದರು. ಆಕಾಶ ಕನಕಪುರ ಧ್ವಜಾರೋಹಣ ನಡೆಸಿದರು. ಭಾಸ್ಕರ್ ಕುಲಕರ್ಣಿ, ಕಿರಣ ಪಂಚಾಳ ಪ್ರಾರ್ಥಿಸಿದರು. ಶ್ರೀಹರಿ ಕಾಟಾಪುರ ಸ್ವಾಗತಿಸಿದರು. ಸೂರ್ಯಕಾಂತ ಚಿಂಚೋಳಿ ನಿರೂಪಿಸಿದರು. ಗೋಪಾಲ ಸುತ್ರಾವೆ ವಂದಿಸಿದರು.
ನಿವೃತ್ತ ಶಿಕ್ಷಕ ಸಂಗಪ್ಪ ಪಾಲಾಮೂರ, ಡಾ. ಕಿಶನರಾವ್ ಕಾಟಾಪುರ, ಜಗದೀಶಸಿಂಗ್ ಠಾಕೂರ, ಶ್ರೀನಿವಾಸ ಪಾಟೀಲ, ರೇವಣಸಿದ್ದ ಮೋಘಾ, ಸಂತೋಷ ಗಡಂತಿ, ಶಂಕರಗೌಡ ಅಲ್ಲಾಪುರ, ನಾಗರಾಜ ಮಲಕೂಡ, ಶ್ರೀಮಂತ ಕಟ್ಟಿಮನಿ, ಹಣಮಂತ ಪೂಜಾರಿ, ಲೋಕೇಶ ಶೆಳ್ಳಗಿ, ಶ್ರೀಕಾಂತ ಪಿಟ್ಟಲ್ ಮೊದಲಾದವರು ಇದ್ದರು.