ಪರಿಸರ ನಾಶದಿಂದ ಜಾಗತಿಕ ತಾಪಮಾನ ಹೆಚ್ಚಳ: ಮಲ್ಲಿನಾಥ್ ನಾಗನಹಳ್ಳಿ

ಪರಿಸರ ನಾಶದಿಂದ ಜಾಗತಿಕ ತಾಪಮಾನ ಹೆಚ್ಚಳ: ಮಲ್ಲಿನಾಥ್ ನಾಗನಹಳ್ಳಿ

ಪರಿಸರ ನಾಶದಿಂದ ಜಾಗತಿಕ ತಾಪಮಾನ ಹೆಚ್ಚಳ: ಮಲ್ಲಿನಾಥ್ ನಾಗನಹಳ್ಳಿ

ಕಲಬುರಗಿ: ಮನುಷ್ಯ ಭೌತಿಕ ಸುಖದತ್ತ ಹೋರಳುತ್ತಿದಂತೆ, ಪರಿಸರದ ಮೇಲಿನ ಕಾಳಜಿ ಕಡಿಮೆಯಾಗುತ್ತಿದೆ. ಅರಣ್ಯ ನಾಶ, ಹಸಿರು ಪ್ರದೇಶ ಕುಸಿತ, ಮಾಲಿನ್ಯ, ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ, ಜಾಗತಿಕ ತಾಪಮಾನ ವೃದ್ಧಿಗೆ ಪರಿಸರ ನಾಶವೇ ಕಾರಣ ಎಂದು ಕೂಟನೂರ್ (ಡಿ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲಿನಾಥ್ ಎಸ್. ನಾಗನಹಳ್ಳಿ ಕಳವಳ ವ್ಯಕ್ತಪಡಿಸಿದರು.

ಗುರುವಾರ ಕೂಟನೂರ್ (ಡಿ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ವಿಶೇಷ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮುಂಗಾರು ಭದ್ರವಾಗಿ ಶುರುವಾಗಿದೆ. ರೈತರು ತಮ್ಮ ಹೊಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಟ್ಟು ಹಸಿರು ಭೂಮಿ ನಿರ್ಮಿಸಬೇಕು ಎಂದು ಹೇಳಿದರು.

ನಾವು ಆರೋಗ್ಯವಾಗಿರಬೇಕಾದರೆ, ಪರಿಸರ ಸಂರಕ್ಷಣೆ ಅತ್ಯಗತ್ಯ. ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಜತೆಗೆ, ಗಿಡಗಳನ್ನು ಬೆಳೆಸುವ ಪ್ರಾಮುಖ್ಯತೆ ಸಾರಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಿಂದ ಶೀಘ್ರದಲ್ಲೇ ಉಚಿತ ಸಸಿಗಳ ವಿತರಣೆ ರೈತರಿಗೆ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ನಿರ್ದೇಶಕ ಶಾಮ ನಾಟಿಕಾರ್, ಶಾಮರಾವ್ ಪಾಟೀಲ್, ಶಾಮರಾವ್ ಪಾಟೀಲ್, ಭೀಮಾಶಂಕರ್ ನಾಗನಹಳ್ಳಿ ನಾಯಕ, ದಸ್ತಾಯ್ಯ ಗುತ್ತೇದಾರ, ಸಂಗ್ಗಣ್ಣಗೌಡ ಪಾಟೀಲ್ ಸೀತನೂರ್, ಜಯಾನಂದ್ ಮಾಹುರ್, ರೈತರಾದ ಗುಂಡೆರಾವ್ ಬಿರಾದಾರ್, ನಾಗರಾಜ್ ಪಾಟೀಲ್ ಅನ್ವರ್ ಪಟೇಲ್ ಸೀತನೂರ್ ಮತ್ತು ಕಾರ್ಯದರ್ಶಿ ಭೀಮಾಶಂಕರ್ ಕೂಟನೂರ್ ಇದ್ದರು.