ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ – ನಂದಿಕೂರ ಗ್ರಾಮದಲ್ಲಿ ವಿಶ್ವ ಪರಿಸರ ದಿನ ಆಚರಣೆ

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ – ನಂದಿಕೂರ ಗ್ರಾಮದಲ್ಲಿ ವಿಶ್ವ ಪರಿಸರ ದಿನ ಆಚರಣೆ

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ – ನಂದಿಕೂರ ಗ್ರಾಮದಲ್ಲಿ ವಿಶ್ವ ಪರಿಸರ ದಿನ ಆಚರಣೆ 

 ಕಲಬುರಗಿ : ಪ್ಲಾಸ್ಟಿಕ್ ಮುಕ್ತ ಹಾಗೂ ವಾಯು ಮಾಲಿನ್ಯ ಮುಕ್ತ ಪರಿಸರ ನಿರ್ಮಾಣವಾದಾಗ ಮಾತ್ರ ವಿಶ್ವ ಪರಿಸರ ದಿನಾಚರಣೆ ಅರ್ಥಪೂರ್ಣವಾಗುತ್ತದೆ ಎಂದು ನಂದಿಕೂರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಚಂದ್ರಕಾಂತ ಕೆ. ಸಿತನೂರ ಹೇಳಿದರು.

ನಂದಿಕೂರ ಗ್ರಾಮದಲ್ಲಿರುವ ಶ್ರೀ ಗುರು ಸೇವಾ ಶಾಲೆ** ಆವರಣದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಪವನ್ ಕುಮಾರ್ ಬಿ. ವಳಕೇರಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು “ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯಲ್ಲಿ ಗಿಡ ನೆಟ್ಟು ಅದನ್ನು ಬೆಳೆಸಬೇಕು. ಸ್ವಚ್ಛ ಪರಿಸರವಿಲ್ಲದೆ ಭವಿಷ್ಯ ಭದ್ರವಲ್ಲ” ಎಂದು ಸಲಹೆ ನೀಡಿದರು.

ಪವನ ಕುಮಾರ್ ಬಿ. ವಳಕೇರಿ ಅವರು ಮಾತನಾಡುತ್ತಾ, “ಪ್ರತಿ ವರ್ಷ ಜೂನ್ 5 ರಂದು ಆಚರಿಸಲಾಗುವ ಈ ದಿನವು 1972ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿದ ಪ್ರಮುಖ ದಿನವಾಗಿದೆ. 1974ರಿಂದ ಪ್ರಾರಂಭವಾಗಿ ಈಗ 147ಕ್ಕೂ ಹೆಚ್ಚು ದೇಶಗಳಲ್ಲಿ ಈ ದಿನ ಆಚರಿಸಲಾಗುತ್ತಿದೆ,” ಎಂದು ವಿವರಿಸಿದರು.

ಅವರು ಮುಂದುವರೆದು, “ನೂರಾರು ಗಿಡಗಳನ್ನು ಹಚ್ಚುವುದು, ಪೋಷಿಸುವುದು ಹಾಗೂ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯದಿಂದ ಮಾತ್ರ ನೈಸರ್ಗಿಕ ಸಮತೋಲನ ಕಾಪಾಡಬಹುದು. ಶಾಲೆಗಳಲ್ಲಿ ಪ್ರಬಂಧ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳಿಗೆ ಪರಿಸರದ ಮಹತ್ವ ತಿಳಿಸಬೇಕು,” ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಲಾಯಿತು.

ಮಲ್ಲಣ್ಣಗೌಡ ನಂದಿಕೂರ್,ಲಕ್ಷ್ಮಣ ಪೂಜಾರಿ,ವಿಶಾಲ ವಿಶ್ವಕರ್ಮ,ನಾಮದೇವ ರಾಠೋಡ,ರಾಚಯ್ಯ ಮಠಪತಿ,ಲೋಹಿತ ವಿಶ್ವಕರ್ಮ (ಮಾಜಿ ಅಧ್ಯಕ್ಷರು, ಕರ್ನಾಟಕ ಸರ್ಕಾರದ ಅಭಿವೃದ್ಧಿ ನಿಗಮ ಮಂಡಳಿ, ಬೆಂಗಳೂರು), ವಿಠ್ಠಬಾಯಿ ಪಾಟೀಲ, ಶಾಲಾ ಮಕ್ಕಳು, ಸಿಬ್ಬಂದಿ ಹಾಗೂ ಹಲವಾರು ಗ್ರಾಮಸ್ಥರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.