ವಿದ್ಯಾ ಕಲಿಸಿದ ಗುರುಗಳನ್ನು ಜೀವನ ಪರಿಯಂತಹ ಮರಿಯಬಾರದು:ಶಿವಾಜಿ ಆರ್. ಎಚ್.

ವಿದ್ಯಾ ಕಲಿಸಿದ ಗುರುಗಳನ್ನು ಜೀವನ ಪರಿಯಂತಹ ಮರಿಯಬಾರದು:ಶಿವಾಜಿ ಆರ್. ಎಚ್.

ಪ್ರಜ್ಞಾ ಭುವನ ಪ್ರೌಢಶಾಲೆಯಲ್ಲಿ ಗುರುವಂದನ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮ

ವಿದ್ಯಾ ಕಲಿಸಿದ ಗುರುಗಳನ್ನು ಜೀವನ ಪರಿಯಂತಹ ಮರಿಯಬಾರದು:ಶಿವಾಜಿ ಆರ್. ಎಚ್.

ಕಮಲನಗರ: ವಿದ್ಯಾ ಕಲಿಸಿದ ಗುರುಗಳನ್ನು ಜೀವನ ಪರಿಯಂತಹ ಮರೆಯಬಾರದು, ಇಂದಿನ ಆಧುನಿಕ ದಿನಗಳಲ್ಲಿ ನಾವು ಹಲವಾರು ಸಂಭ್ರಮಾಚಾರಣೆ ನೋಡುತ್ತೇವೆ, ಹುಟ್ಟಿದ ಹಬ್ಬ, ವಾರ್ಷಿಕೋತ್ಸವದ ಹೀಗೆ ಹಲುವು ಕಾರ್ಯಕ್ರಮದಲ್ಲಿ ನಾವು ಕಂಡಿರುತ್ತೇವೆ, ಆದುಕ್ಕೆಲ್ಲ ಮೀರಿದ ಸಂಭ್ರಮ ಎಂದರು ನಾವು ಕಲಿತ ಶಿಕ್ಷಕರನ್ನು ಗೌರವಿಸುವುದು ಎಂದು ಪ್ರಾಚಾರ್ಯರು ಶಿವಾಜಿ ಆರ್. ಎಚ್ ಅವರು ನುಡಿದರು.

ಪಟ್ಟಣ ಬಸವ ಫಂಕ್ಷನ ಹಾಲನಲ್ಲಿ ಭಾರತಿ ಶಿಕ್ಷಣ ಸಂಸ್ಥೆ ಡಿಗ್ಗಿಯ ಅಡಿಯಲ್ಲಿ ನಡಿಯುತ್ತಿರುವ ಪ್ರಜ್ಞಾ ಭುವನ ಪ್ರೌಢಶಾಲೆಯ 2002ನೇ ಸಾಲಿನಿ ವಿದ್ಯಾರ್ಥಿ ಒಗ್ಗೂಟದಿಂದ ಆಯೋಜನೆ ಮಾಡಿದ ಗುರುವಂದನ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಶಾಂತಿ ವರ್ಧಕ ಪಿಯು ಕಾಲೇಜಿನ ಪ್ರಾಚಾರ್ಯರ ಶಿವಾಜಿ ಆರ್. ಎಚ್ ಮಾತನಾಡಿದರು.

 ವಿವಿಧ ಕ್ಷೇತ್ರದಲ್ಲಿ ತಮ್ಮ ತಮ್ಮ ಬದುಕನ್ನು ಕಟ್ಟಿಕೊಂಡ ವಿದ್ಯಾರ್ಥಿಗಳು 23 ವರ್ಷದ ನಂತರ ಒಂದೇ ವೇದಿಕೆಯಲ್ಲಿ ಸೇರುವುದು ಸಾಮಾನ್ಯ ವಿಷಯವಲ್ಲ, ಇಂಥ ಒಂದು ಅದ್ಭುತ ಪ್ರಯತ್ನ ಮಾಡಿದ ಎಲ್ಲಾ ವಿದ್ಯಾರ್ಥಿ ಬಳಗಕ್ಕೆ ಅಭಿನಂದನೆ ಸಲ್ಲಿಸಿದರು.

ಇಂತಹ ಕಾರ್ಯಕ್ರಮಗಳಿಂದ ಗುರು ಭಕ್ತಿ ಮತ್ತು ಸ್ನೇಹ ಸಂಬಂಧ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟನೆ ಮಾಡಿ ಪ್ರಸ್ತಾವಿಕವಾಗಿ ಶಾಲೆಯ ನಿವೃತ್ತ ಮುಖ್ಯ ಗುರುಗಳು ದೇವೇಂದ್ರ ಪಾಟೀಲ ಮಾತನಾಡಿದರು, 23 ವರ್ಷದ ತಮ್ಮ ಸಹೋದ್ಯೋಗಿಗಳನ್ನು ನೆನೆದು ಭಾವುಕರಾದರು. ಅಂದಿನ ವಿದ್ಯಾರ್ಥಿಗಳು ಗುರುಗಳ ಬಗ್ಗೆ ಅಪಾರ ಗೌರವ ಪ್ರೀತಿಯನ್ನು ಹೊಂದಿದರು, ನಮ್ಮ ಶಾಲೆಯ ಆಡಳಿತ ಪರಸ್ಪರ ಹೊಂದಾಣಿಕೆಯಿಂದ ಬಹಳ ಅಚ್ಚುಕಟ್ಟಾಗಿ ನಡೆದುಬಂದಿತು ಎಂದು ತಮ್ಮ ವೃತ್ತಿ ಜೀವನ ಬಗ್ಗೆ ಮತ್ತು ಕಾರ್ಯಕ್ರಮದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ಹಳೆ ವಿದ್ಯಾರ್ಥಿಗಳಾದ ಮಾಣಿಕ ಬಿರಾದಾರ,ಅಂಕೋಶ ಚಾಂಡೇಶ್ವರೆ, ಪ್ರದೀಪ ಬಿರಾದಾರ,ಸಂದೀಪ ಪಾಟೀಲ, ಬಾಬುರಾವ ಜಾಧವ, ಹಳೆ ವಿದ್ಯಾರ್ಥಿನಿಯಾರಾದ ಭಾಗ್ಯಶ್ರೀ, ಸುವರ್ಣ, ಜಗದೇವಿ ತಮ್ಮ 23 ವರ್ಷದ ಶಿಕ್ಷಣ ಬಗ್ಗೆ ಹೇಳಿದರು, ಆಧುನಿಕ ದಿನಗಲ್ಲಿ ಮಕ್ಕಳು ಹೆಚ್ಚು ಮೊಬೈಲ್ ಬಳಕ್ಕೆ ಇಂದ ಶಿಕ್ಷಣದ ರುಚಿಯನ್ನು ಕಳ್ಕೊಂಡಿದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಎಲ್ಲಾ ಗುರುಗಳನ್ನು ಸನ್ಮಾನಿಸಿ ಗೌರವಸಿ ನೆನಪಿನ ಕಾಣಿಕೆ ನೀಡಲಾಯಿತು. ಕಾರ್ಯಕ್ರಮ ಅಧ್ಯಕ್ಷತೆ ಸಂಸ್ಥೆಯ ಅಧ್ಯಕ್ಷರಾದ ನಿಲಕಂಠ ಕಾಂಬಳೆ ವಹಿಸಿ ಅಧ್ಯಕ್ಷ ಭಾಷಣ ಮಾಡಿ, ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಕೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶಿವಾನಂದ ವಡ್ಡೆ, ರಂಗಾರಾವ ಜಾಧವ, ಆರ್. ವಿ ಸೂರ್ಯವಂಷಿ, ತಾನಾಜಿ ಸಂಘವೆ, ಎಸ್. ಕೆ ಬಾಲೂರೆ, ಎಸ. ಏನ್ ಭಾಸ್ಕರ, ಎಸ್. ಎ

ಪೀಪರ್, ವಿ.ಪಿ. ಪಾಟೀಲ ಪ್ರಚಲಿತ ಮುಖ್ಯ ಶಿಕ್ಷಕ ಚಾಂಗುಣೆ ಸರ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಮತ್ತು 2002ನೇ ಸಾಲಿನ ವಿದ್ಯಾರ್ಥಿ ಬಳಗ ಉಪಸ್ಥಿತರಿದ್ದರು.

ಬಂಟಿ ರಾಂಪುರೆ ಸ್ವಾಗತಿಸಿದರು. ಪರಮೇಶ ರಾಂಪುರೆ ಕಾರ್ಯಕ್ರಮ ನಿರೂಪಣೆ ಮಾಡಿದರು.