"ಮೈಂಡ್ ಮಿಸ್ಟರಿ" ವಿಶೇಷ ಜಾದೂ ಆ ಯೋಜನೆಗೆ ಚಿಂತನೆ: ಶರಣು ಪಪ್ಪಾ

"ಮೈಂಡ್ ಮಿಸ್ಟರಿ" ವಿಶೇಷ ಜಾದೂ ಆ ಯೋಜನೆಗೆ ಚಿಂತನೆ: ಶರಣು ಪಪ್ಪಾ

ಅಂತಾರಾಷ್ಟ್ರೀಯ ಜಾದೂಗಾರ ಗಣೇಶ್ ಗೆ ಚೇಂಬರ್ ಸನ್ಮಾನ

"ಮೈಂಡ್ ಮಿಸ್ಟರಿ" ವಿಶೇಷ ಜಾದೂ ಆ ಯೋಜನೆಗೆ ಚಿಂತನೆ: ಶರಣು ಪಪ್ಪಾ

ಕಲಬುರಗಿ : ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಅವರಿಗೆ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಸ್ಥೆಯಲ್ಲಿ ಜೂ.2 ರಂದು ವಿಶೇಷ ಸನ್ಮಾನ ನೆರವೇರಿಸಲಾಯಿತು. 

ಸಂಸ್ಥೆಯ ಅಧ್ಯಕ್ಷರಾದ ಶರಣು ಪಪ್ಪಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಮತ್ತು ಶಿಕ್ಷಣಕ್ಕಾಗಿ ಜಾದೂ ಮುಂತಾದ ಹೊಸ ಪ್ರಯೋಗಗಳಿಂದ ಜಾದೂ ರಂಗಕ್ಕೆ ಹೊಸ ಸ್ಪರ್ಶ ನೀಡಿ ಇತ್ತೀಚೆಗೆ "ಮೈಂಡ್ ಮಿಸ್ಟರಿ" ಎಂಬ ವಿನೂತನ ಜಾದೂ ಪ್ರಯೋಗವನ್ನು ಮಾಡಿ ಖ್ಯಾತಿ ಹೊಂದುತ್ತಿರುವ ಕುದ್ರೋಳಿ ಗಣೇಶ್ ಅವರಿಗೆ ವಿಶೇಷವಾಗಿ ಸತ್ಕರಿಸಲಾಯಿತು. ಸಮಾಜದಲ್ಲಿ ಬದಲಾವಣೆಗೆ ಕಾರಣಿಭೂತರಾಗಿ ಮನರಂಜನಾ ರಂಗದಲ್ಲಿ ಹೊಸ ಪ್ರಯೋಗಗಳನ್ನು ಮಾಡಿರುವ ಸಾಧನೆಗೆ ಯಶಸ್ಸು ಸಿಗಲಿ. ಜೂನ್ 27ರಿಂದ ಕಲಬುರಗಿ ಪ್ರವಾಸ ಮಾಡುವ ಕುದ್ರೋಳಿ ಗಣೇಶ್ ಜಾದು ಕಾರ್ಯಕ್ರಮಗಳಿಗೆ ಸಂಸ್ಥೆಯಿಂದ ಪೂರ್ಣ ಸಹಕಾರ ನೀಡಲಾಗುವುದು. ಶಿಕ್ಷಣಕ್ಕಾಗಿ ಜಾದು ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲು ಚಿಂತನೆ ನಡೆದಿದೆ ಹಾಗೂ ಸಮಾಜದ ವೈದ್ಯರು, ಇಂಜಿನಿಯರ್, ಸಿ ಎ, ರೋಟೇರಿಯನ್, ಉದ್ಯಮಿಗಳಿಗಾಗಿ "ಮೈಂಡ್ ಮಿಸ್ಟರಿ" ಎಂಬ ವಿಶೇಷ ಜಾದೂ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಶರಣು ಪಪ್ಪಾ ತಿಳಿಸಿದರು.

   ಈ ಸಂದರ್ಭದಲ್ಲಿ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷರಾದ ಶಶಿಕಾಂತ್ ಪಾಟೀಲ್, ಗೌರವ ಕಾರ್ಯದರ್ಶಿ ಶಿವರಾಜ್ ಇಂಗಿನ್ ಶೆಟ್ಟಿ ಮತ್ತು ಸದಸ್ಯರಾದ ಅಭಿಜಿತ್ ಶೆಟ್ಟಿ, ಜಗದೀಶ್ ಗಾಜರೆ ನಮೃತಾ ಫತಾಟೆ, ಮೋದಿ ವಿಚಾರ ಮಂಚ್ ನ ಕರ್ನಾಟಕ ವಲಯ ಅಧ್ಯಕ್ಷರಾದ ಶಿವರಾಜ್ ಕೋಟ್ಯಾನ್, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಮತ್ತಿತರರು ಉಪಸ್ಥಿತರಿದ್ದರು.

ಜಾದೂ ಮೂಲಕ ಕೈಚಳಕ ಮೆರೆದ ಗಣೇಶ್!

 ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಸೇರಿದ ಸಂಸ್ಥೆಯ ಸದಸ್ಯರ ಮುಂದೆ ಕುದ್ರೋಳಿ ಗಣೇಶ್ "ಕ್ಲೋಸ್ ಅಪ್" ಜಾದೂ ಮಾಡಿ ವಿಸ್ಮಯಗೊಳಿಸಿದರು. ನಾಣ್ಯಗಳ ಮಾಯ, ಇಸ್ಪೀಟ್ ಎಲೆಗಳಲ್ಲಿ ವಿವಿಧ ಜಾದು ವಿಸ್ಮಯ, ಮೈಂಡ್ ರೀಡಿಂಗ್, ಮೆಮೊರಿ ಗೇಮ್ ಮುಂತಾದ ಜಾದು ಕೈಚಳಕದಿಂದ ಎಲ್ಲರನ್ನು ನಕ್ಕು ನಗಿಸಿ ಚಕಿತಗೊಳಿಸಿದರು.