ಬಳಕೆ ಆಗದ ಅಂಬೇಡ್ಕರ್ ಭವನಗಳು ಗ್ರಂಥಾಲಯನ್ನಾಗಿ ಪರಿವರ್ತಿಸಿ : ಅಧ್ಯಕ್ಷ ಶ್ರೀಮಂತ ಕಟ್ಟಿಮನಿ

ಬಳಕೆ ಆಗದ ಅಂಬೇಡ್ಕರ್ ಭವನಗಳು ಗ್ರಂಥಾಲಯನ್ನಾಗಿ ಪರಿವರ್ತಿಸಿ : ಅಧ್ಯಕ್ಷ ಶ್ರೀಮಂತ ಕಟ್ಟಿಮನಿ

ಬಳಕೆ ಆಗದ ಅಂಬೇಡ್ಕರ್ ಭವನಗಳು ಗ್ರಂಥಾಲಯನ್ನಾಗಿ ಪರಿವರ್ತಿಸಿ : ಅಧ್ಯಕ್ಷ ಶ್ರೀಮಂತ ಕಟ್ಟಿಮನಿ  

ಚಿಂಚೋಳಿ : ರಾಜ್ಯದ ಪ್ರತಿ ಗ್ರಾಮ ಮತ್ತು ಹಳ್ಳಿ ಹಾಗೂ ನಗರ, ಪಟ್ಟಣ ಪ್ರದೇಶಗಳಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಭವನಗಳನ್ನು ಗ್ರಂಥಾಲಯಗಳನ್ನಾಗಿ ಪರಿವರ್ತಿಸಬೇಕೆಂದು ಚಿಂಚೋಳಿ ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿ ಅಗ್ರಹಿಸಿ, ಒತ್ತಾಯಿಸಿದ್ದಾರೆ.

ಪ್ರಕಟಣೆ ನೀಡಿದ ಅವರು, ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಡಾ. ಬಿ. ಆರ್. ಅಂಬೇಡ್ಕರ್ ಭವನಗಳನ್ನು ಸರಿಯಾದ ಕ್ರಮದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿಲ್ಲವಾದ್ದರಿಂದ ಭವನಗಳನ್ನು ಗ್ರಂಥಾಲಯಗಳನ್ನಾಗಿ ಪರಿವರ್ತಿಸಿದರೆ, ದಲಿತ ಹಿಂದುಳಿದವರು ಅಕ್ಷರ ಜ್ಞಾನ ಹೆಚ್ಚಿಸಿಕೊಳ್ಳಲು ಗ್ರಂಥಾಲಯ ಅನುಕೂಲವಾಗಲಿದೆ. ಆದರಿಂದ ಸೂಕ್ತ ಬಳಕೆಯಾಗದ ಅಂಬೇಡ್ಕರ್ ಭವನಗಳು ಗ್ರಂಥಾಲಯಗಳನ್ನಾಗಿ ಪರಿರ್ವರ್ತಿಸಲು ಕ್ರಮ ಕೈಗೊಂಡು ರಾಜ್ಯದ ಗ್ರಾಮೀಣ ಮತ್ತು ನಗರ, ಪಟ್ಟಣಗಳಲ್ಲಿನ ಹಿಂದುಳಿದ ಜನರ ಓದುಗರಿಗೆ ಅಕ್ಷರ ಜ್ಞಾನ ಹೆಚ್ಚಿಸಿಕೊಳ್ಳಲು ಗ್ರಂಥಾಲವನ್ನಾಗಿ ಪರಿವರ್ತಿಸಿ ಅನುಕೂಲ ಕಲ್ಪಿಸಿಕೊಡಬೇಕೆಂದು ವಕೀಲರ ಸಂಘದ ಅಧ್ಯಕ್ಷರು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.