ಪರಿಶುದ್ದ ಮನಸ್ಸಿನ ಸುಭಾಷ ರಾಠೋಡ ಅವರಿಗೆ ಎಂ.ಎಲ್.ಸಿ ಮಾಡಿ : ಶರಣು ಪಾಟೀಲ ಮನವಿ

ಪರಿಶುದ್ದ ಮನಸ್ಸಿನ ಸುಭಾಷ ರಾಠೋಡ ಅವರಿಗೆ ಎಂ.ಎಲ್.ಸಿ ಮಾಡಿ : ಶರಣು ಪಾಟೀಲ ಮನವಿ

ಪರಿಶುದ್ದ ಮನಸ್ಸಿನ ಸುಭಾಷ ರಾಠೋಡ ಅವರಿಗೆ ಎಂ.ಎಲ್.ಸಿ ಮಾಡಿ : ಶರಣು ಪಾಟೀಲ ಮನವಿ 

ಚಿಂಚೋಳಿ : ಕ್ಷೇತ್ರದಲ್ಲಿ ನೆಲ ಕಚ್ಚಿದ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಿ ಜಿಲ್ಲೆಯಲ್ಲಿಯೇ ಮಾದರಿ ಸಂಘಟನೆ ಮಾಡಿರುವ ಸುಭಾಷ ರಾಠೋಡ ಅವರಿಗೆ ಎಂ.ಎಲ್.ಸಿ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂದು ಚಿಂಚೋಳಿ ವಕ್ತಾರ ಶರಣು ಪಾಟೀಲ ಮೋತಕಪಳ್ಳಿ ಅವರು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ. 

 ಪ್ರಕಟಣೆ ನೀಡಿದ ಅವರು , ಸುಭಾಷ ರಾಠೋಡ ಅವರು ಎರಡು ಬಾರಿ ಅಲ್ಪ ಮತಗಳ ಅಂತರದಿಂದ ಸೋತರೂ ಎದೆಗುಂದದೆ ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದಲ್ಲಿ ಹಗಲಿರುಳು ಶ್ರಮವಹಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಚಿಂಚೋಳಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ. 

ಒಂದು ಕಾಲದಲ್ಲಿ ಇಡೀ ರಾಷ್ಟ್ರದ ಗಮನ ಸೆಳೆದ ಚಿಂಚೋಳಿ. ಇವತ್ತು ರಾಜಕೀಯದಲ್ಲಿ ಮುಂಚೂಣಿ ಸ್ಥಾನಕ್ಕೆ ಬರಲು ಹೆಣಗಾಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೆ ದುಡಿದಿದ್ದೇವೆ. ಆದರೂ ಸುಭಾಷ ರಾಠೋಡ ಅವರು ಅಲ್ಪ ಮತಗಳಿಂದಾಗಿ ಜಯ ನಮ್ಮದಾಗಲಿಲ್ಲ. ಕೇವಲ ಮೂರಂಕಿ ಮತಗಳ ಅಂತರದಿಂದ ಸೋತು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಆದರೂ ಕಾರ್ಯಾಕರ್ತರು ಶಕ್ತಿ ಕುಗ್ಗಿಸದೇ ಲೋಕಸಭೆ ಚುನಾವಣೆಯಲ್ಲಿ ಸಾಗರ ಖಂಡ್ರೆಯವರಿಗೆ ಗೆಲ್ಲಿಸಿ, ಕಾರ್ಯಕರ್ತರ ಶಕ್ತಿ ತೊರಪಡಿಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸಚಿವರುಗಳು ಬಸವಣ್ಣನವರ ಸಂದೇಶಗಳನ್ನು ಪಸರಿಸುವ ಪರಿಶುದ್ಧ ಮನಸ್ಸು ಹೊಂದಿರುವ ಸುಭಾಷ ರಾಠೋಡ ಅವರನ್ನು ಎಂ.ಎಲ್.ಸಿ ಸ್ಥಾನಕ್ಕೆ ಆಯ್ಕೆ ಮಾಡಿ, ಚಿಂಚೋಳಿ ಅಭಿವೃದ್ಧಿಗೆ ಮತ್ತು ಪಕ್ಷದ ಸಂಘಟನೆಗೆ ಸಹಕಾರ ನೀಡಿ ಎಂದು ವಕ್ತಾರ ಶರಣು ಪಾಟೀಲ ಮೋತಕಪಳ್ಳಿ ಮನವಿ ಮಾಡಿದ್ದಾರೆ.