ದಲಿತರಿಗೆ ಸಿಕ್ಕ ಗೌರವ : ಡಾ. ಡಿ.ಜಿ ಸಾಗರ ನಿಸ್ವಾರ್ಥ ದುಡಿಮೆಯ ಪ್ರತಿಫಲ: ಡಾ. ಡಿಜಿ ಸಾಗರ ಪರಿಷತ್ತು ಸದಸ್ಯರಾಗಿ ಆಯ್ಕೆ ಸಂಭ್ರಮಾಚರಣೆ :

ದಲಿತರಿಗೆ ಸಿಕ್ಕ ಗೌರವ : ಡಾ. ಡಿ.ಜಿ ಸಾಗರ ನಿಸ್ವಾರ್ಥ ದುಡಿಮೆಯ ಪ್ರತಿಫಲ:
ಡಾ. ಡಿಜಿ ಸಾಗರ ಪರಿಷತ್ತು ಸದಸ್ಯರಾಗಿ ಆಯ್ಕೆ ಸಂಭ್ರಮಾಚರಣೆ :
ಶಹಾಬಾದ : - ದಲಿತರ ಧ್ವನಿಯಾಗಿ ಅನೇಕ ಯಶಸ್ವಿ ಹೋರಾಟಕ್ಕೆ ನಾಯಕತ್ವ ನೀಡಿ 40 ವರ್ಷಗಳಿಂದ ಸುಧೀರ್ಘವಾಗಿ ದಲಿತ ಸಂಘರ್ಷ ಸಮಿತಿಗೆ ನಿಸ್ವಾರ್ಥದಿಂದ ದುಡಿದ ಡಾ. ಡಿ.ಜಿ ಸಾಗರ ಅವರ ಅವಿರತ ಹೋರಾಟವನ್ನು ಗುರುತಿಸಿ ವಿಧಾನ ಪರಿಷತ್ತು ಸದಸ್ಯರನ್ನಾಗಿ ಆಯ್ಕೆ ಮಾಡಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಸುರೇಶ ಹಾದಿಮನಿ ಹೇಳಿದರು.
ನಗರದ ಡಾ. ಬಿ. ಆರ್ ಅಂಬೇಡ್ಕರ್ ಪ್ರತಿಮೆ ಎದುರು ಡಾ. ಡಿ.ಜಿ ಸಾಗರ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಲಿತ ಹೋರಾಟಗಾರರು ಹಾಗೂ ಮಾಜಿ ನಗರಸಭೆ ಅಧ್ಯಕ್ಷರಾದ ನಾಗರಾಜ ಸಿಂಗೆ ಮಾತನಾಡಿ, ಡಿ.ಜಿ ಸಾಗರ ಅವರು ವಿದ್ಯಾರ್ಥಿಯ ದಿಸೆಯಿಂದಲೇ ಹೋರಾಟದ ದಾರಿಯನ್ನು ಆಯ್ಕೆ ಮಾಡಿಕೊಂಡು ಅನೇಕ ಐತಿಹಾಸಿಕ ಹೋರಾಟಗಳನ್ನು ಕಟ್ಟಿ ಯಶಸ್ವಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ವಿದ್ಯಾರ್ಥಿಗಳ ಸಮಸ್ಯೆ, ಹಾಸ್ಟೆಲಿನಲ್ಲಿ ದಲಿತ ವಿದ್ಯಾರ್ಥಿಗಳಿಗೆ ಭೈಷ್ಕರಿಸಿದ ವಿರುದ್ಧ ಯಶಸ್ವಿ ಹೋರಾಟ, ಪೌರಕಾರ್ಮಿಕರ ಸಮಸ್ಯೆಗಳ ಹಾಗೂ ಅಸ್ಪೃಶ್ಯತೆಯ ವಿರುದ್ಧ, ಮೂಲಸೌಕರ್ಯಕ್ಕಾಗಿ ಹೋರಾಡಿ ದಲಿತ ಧ್ರುವತಾರೆಯಾಗಿ ಬೆಳೆದ ಡಾ. ಡಿ. ಜಿ ಸಾಗರ ಅವರಿಗೆ ಸೂಕ್ತ ಗೌರವ ದೊರೆತಿರುವುದು ದಲಿತರಿಗೆ ಹರ್ಷದಾಯಕವಾಗಿದೆ ಎಂದರು. ಅವರ ಜೊತೆ ಅನೇಕ ಹೋರಾಟದಲ್ಲಿ ಪಾಲ್ಗೊಂಡಿರುವ ಕ್ಷಣಗಳನ್ನು ಅವರು ಸ್ಮರಿಸಿದರು.
ಕಾಡಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಎಂ.ಎ ರಶೀದ್ ಮಾತನಾಡಿ ಡಿ.ಜಿ ಸಾಗರ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಿದ ರಾಜ್ಯ ಸರ್ಕಾರಕ್ಕೂ ಮತ್ತು ಜಿಲ್ಲಾ ಉಸ್ತುವರಿ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಸಚಿವರಾದ ಡಾ. ಶರಣುಪ್ರಕಾಶ ಪಾಟೀಲ ಸಚಿವರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ದಸಂಸ ಜಿಲ್ಲಾ ಮುಖಂಡರಾದ ಕೃಷ್ಣಪ್ಪ ಕರ್ಣಿಕ ಮಾತನಾಡಿ ಇದು ದಲಿತರಿಗೆ ನೀಡಿದ ಗೌರವ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕದ ಅಧ್ಯಕ್ಷ ರಾಜೇಶ ಯನಗುಂಟಿಕರ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಷಮ ಖಾನ, ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಮೃತ್ಯುಂಜಯ ಹಿರೇಮಠ, ಮಾಜಿ ಸದಸ್ಯ ಮಲ್ಲಿಕಾರ್ಜನ ಜಲಂದರ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಜೀಮ ಸಾಹೇಬ, ಕೃಷ್ಣಪ್ಪ ಕರಣಿಕ, ಸತೀಶ ಕೋಬಾಳ ಮತ್ತು ರಾಜು ಜಂಬಗಿ, ಮಹಾದೇವ ತರನಳ್ಳಿ, ಗಣೇಶ ಜಾಯಿ, ರತನರಾಜ ಕೋಬಾಳ, ಸುಭಾಷ ಸಾಕ್ರೆ, ಬಿಎಸ ಕಾಂಬಳೆ, ಮಹ್ಮದ ಮಸ್ತಾನ, ತಿಪ್ಪಣ್ಣ ಧನ್ನೇಕರ, ಮಹಾದೇವ ಮೇತ್ರಿ ಜೈಭೀಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಗರದ ನಗರ ಸಭೆ ಮುಂಭಾಗದಲ್ಲರುವ ಡಾ.ಅಂಬೇಡ್ಕರ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ, ರಾಜ್ಯ ದಲಿತ ಸಂಘರ್ಷ ಸಮಿತಿಯ ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳನ್ನು ಸಲ್ಲಿಸಿ ಹಾಗೆ ಪಟಾಕಿ ಸಿಡಿಸಿ, ಸಿಹಿ ಹಂಚಿ, ಜಯ ಘೋಷಗಳನ್ನ ಹಾಕಿ, ಸಂಭ್ರಮಾಚರಣೆ ಮಾಡಿದರು.