ಮಂದಿರ ಆರಾಧನೆಯ ಸ್ಪೂರ್ತಿ ಕೇಂದ್ರ - ಹಾರಕೂಡ ಶ್ರೀ

ಮಂದಿರ ಆರಾಧನೆಯ ಸ್ಪೂರ್ತಿ ಕೇಂದ್ರ - ಹಾರಕೂಡ ಶ್ರೀ
ಈಶ್ವರಾರಾಧನೆಗೆ, ಆಧ್ಯಾತ್ಮ ಸಾಧನೆಗೆ ಮಂದಿರಗಳು ಸ್ಪೂರ್ತಿಯ ಕೇಂದ್ರವಾಗಿ ವಿಶಿಷ್ಟ ಪಾತ್ರ ನಿಭಾಯಿಸುತ್ತವೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಗ್ರಾಮದ ಹೊರವಲಯದಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಕಟ್ಟಡ ಕಾಮಗಾರಿಯ ಭೂಮಿ ಪೂಜೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಭಾವವಿಲ್ಲದ ನಾಮಸ್ಮರಣೆ ವ್ಯರ್ಥ, ಭಗವಂತನ ಅನುಗ್ರಹ ಪರಿಶುದ್ಧ ಭಾವನೆಯನ್ನು ಹುಡುಕಿಕೊಂಡು ಬರುತ್ತದೆಯೇ ವಿನ: ಕೇವಲ ಆಡಂಬರದ ನಾಮಸ್ಮರಣೆಗೆ ಅಲ್ಲ.
ನಾಮ ಸ್ಮರಣೆ ಭಾವಸ್ಮರಣೆ ಒಂದಾದಾಗ ದೈವ ಕೃಪೆ ಸಾಧ್ಯವಾಗುತ್ತದೆ.
ಭಾವನೆ ಶುದ್ಧವಿದ್ದರೆ ಭಾಗ್ಯದ ರಾಶಿ ಮನೆಯಂಗಳದಲ್ಲಿ ಎನ್ನುವ ಮಾತಿನಂತೆ, ದೇವರು ಯಾವತ್ತೂ ಭಕ್ತಿ, ಶ್ರದ್ಧೆ, ಭಾವಗಳ ಪ್ರಿಯನಾಗಿರುತ್ತಾನೆ.
ಹಾರಕೂಡ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ರಾಮಲಿಂಗೇಶ್ವರ ಮಂದಿರ ಬಲು ಬೇಗನೆ ಪೂರ್ಣಗೊಂಡು ಜನತೆಯ ಶ್ರದ್ಧಾ ಕೇಂದ್ರವಾಗಿ ರೂಪುಗೊಳ್ಳಲಿ ಮತ್ತು ಸತ್ಕಾರ್ಯದಲ್ಲಿ ಪ್ರತ್ಯಕ್ಷ ಪರೋಕ್ಷವಾಗಿ ಶ್ರಮಿಸಲಿರುವ ಸರ್ವರಿಗೂ ಹಾರಕೂಡಧೀಶ ಹೆಚ್ಚಿನ ಶಕ್ತಿ ಸಾಮರ್ಥ್ಯ ನೀಡಲಿ ಎಂದು ಶುಭ ಹಾರೈಸಿದರು.
ಮೇಘರಾಜ ನಾಗರಾಳೆ ಸ್ವಾಗತಿಸಿದರು.
ಆನಂದರಾವ ಝಳಕೆ, ಅಯ್ಯಪ್ಪ ಸಜ್ಜನ, ಸೂರ್ಯಕಾಂತ ಬೆಳಮಗೆ, ಶರಣಬಸಪ್ಪ ಹತ್ತೆ, ಬಾಲಾಜಿ ಬಿರಾದಾರ, ಅಪ್ಪಾರಾವ ಬಿರಾದಾರ, ಸುಭಾಷ ದೇಗಾಂವ, ಮಾರುತಿ ಪಾಟೀಲ, ವಿಜಯಕುಮಾರ ಸಾಮದೆ ಮುಂತಾದವರು ಉಪಸ್ಥಿತರಿದ್ದರು.
ಮಂಜುನಾಥ ಪೀರಜೆ ನಿರೂಪಣೆ ಮಾಡಿದರು. ಮಲ್ಲಪ್ಪ ಖೇಲ್ಡೆ ವಂದಿಸಿದರು.
ಚಿತ್ರ : ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದ ಹೊರವಲಯದಲ್ಲಿ ಶ್ರೀ ರಾಮಲಿಂಗೇಶ್ವರ ಕಟ್ಟಡ ಕಾಮಗಾರಿಗೆ ಡಾ. ಚನ್ನವೀರ ಶಿವಾಚಾರ್ಯರು ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಮೇಘರಾಜ ನಾಗರಾಳೆ, ಅಯ್ಯಪ್ಪ ಸಜ್ಜನ, ಸೂರ್ಯಕಾಂತ ಬೆಳಮಗೆ, ಮಂಜುನಾಥ ಪೀರಜೆ, ಅಪ್ಪಾರಾವ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.