ಏಪ್ರಿಲ್ 22, 23 ರಂದು ಶಹಾಬಾದನಲ್ಲಿ ಭೀಮ ಉತ್ಸವ

ಏಪ್ರಿಲ್ 22, 23 ರಂದು ಶಹಾಬಾದನಲ್ಲಿ ಭೀಮ ಉತ್ಸವ
ಶಹಾಬಾದ್: ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವದ ಅಂಗವಾಗಿ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಕಲ್ಯಾಣ ಕರ್ನಾಟಕದಲ್ಲಿ ಭೀಮ ಉತ್ಸವ ಹಾಗೂ 1949ರ ಬಿಟಿಎಂಸಿ ಕಾಯ್ದೆ ರದ್ದು ಮತ್ತು ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನ ಜರಗಲಿದೆ ಎಂದು ಜಯಂತೋತ್ಸವ ಸಮಿತಿಯ ಅಧ್ಯಕ್ಷ ಶಂಕರ ಅಳ್ಳೋಳಿ ಹಾಗೂ ಗೌರವ ಅಧ್ಯಕ್ಷ ಸುರೇಶ ಮೆಂಗನ ಅವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುದುವಾರ ಹಮ್ಮಿಕೊಂಡ ಪತ್ರಿಕಾಗೋಷ್ಠಿ ಹಾಗೂ ಕರ ಪತ್ರ ಬಿಡುಗಡೆಯಾದ ನಂತರ ಜಂಟಿಯಾಗಿ ಹೇಳಿಕೆ ನೀಡಿದರು.
ನಗರದ ಸರ್ಕಾರಿ ಪ್ರೌಢಶಾಲೆ ಅವರಣದಲ್ಲಿ ಎ. 22 ಸಾ. 5:00 ಗಂ ಬಹಿರಂಗಸಭೆ ನಡೆಯಲಿದ್ದು ಈ ಸಭೆಗೆ ಡಾ.ಬಿ. ಆರ್ ಅಂಬೇಡ್ಕರ್ ಅವರ ಮರಿ ಮೊಮ್ಮಗ ರಾಜರತನ ಅಂಬೇಡ್ಕರ್ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಎಂ. 23 ರಂದು ಸಾ 4ಗಂ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ಪ್ರತಿಮೆವರೆಗು ಭವ್ಯವಾದ ಮೆರವಣಿಗೆ ವಿವಿಧ ಕಲಾತಂಡಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಹಾಗೂ ಅಂಬೇಡ್ಕರ್ ಅವರ ಜೀವನದ ಕೆಲವು ಘಟನೆಗಳ ಚಿತ್ರಗಳು ಪ್ರದರ್ಶನ ಗೊಳ್ಳಲಿವೆ, ಕಾರ್ಯಕ್ರಮಕ್ಕೆ ವರಜ್ಯೋತಿ ಬಂತೇಜಿ, ಹಾಗೂ ಶಾಸಕರು, ಸಚಿವರು ಮತ್ತು ರಾಜ್ಯ ದಲಿತ ನಾಯಕರು ಪ್ರಗತಿ ಪರರು, ಸ್ಥಳೀಯ ಎಲ್ಲಾ ಸಮಾಜದ ಮುಖಂಡರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ, ಈ ಕಾರ್ಯಕ್ರಮಯು ದಲಿತ ಚಿಂತಕ ಹೋರಾಟಗಾರ ಡಾ. ಮಲ್ಲೇಶಿ ಸಜ್ಜನ್ ವೇದಿಕೆಯ ಮೇಲೆ ಜರಗಲಿವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಾಗರಾಜ ಸಿಂಗೆ ಭರತ ದನ್ನಾ, ಬಸವರಾಜ ಮಯೂರ, ಸತೀಶ ಕೊಬಾಳ, ರಾಜೇಶ ಯೆನಗುಂಟಿಕರ, ಶರಣು ಬಗಲಾಪುರ, ಶರಣು ಸೂಗೂರು, ಕೃಷ್ಣಪ್ಪ ಕರಣಿಕ, ಮೋಹನ ಹಳ್ಳಿ, ಪ್ರವೀಣ್ ರಾಜನ್, ಅಲ್ಲಂಪ್ರಭು ಮಸ್ಕಿ, ರಾಜು ಜಂಬಗಿ, ಪುಜಪ್ಪ ಮೇತ್ರಿ, ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಹಾಬಾದ್ ವರದಿ ನಾಗರಾಜ್ ದಂಡಾವತಿ