ತ್ರಿಭಾಷಾ ಕವಿ:ಕೆ.ಬಿ. ಬ್ಯಾಳಿಯವರ ಮಾನವೀಯ ಕಾವ್ಯ ರಚನೆ ಸಾಹಿತಿ ಡಾ.ಪಾಟೀಲ ಬಣ್ಣನೆ

ತ್ರಿಭಾಷಾ ಕವಿ:ಕೆ.ಬಿ. ಬ್ಯಾಳಿಯವರ ಮಾನವೀಯ ಕಾವ್ಯ ರಚನೆ ಸಾಹಿತಿ ಡಾ.ಪಾಟೀಲ ಬಣ್ಣನೆ
ಕೊಪ್ಪಳ: ಐದು ದಶಕಗಳ ಕಾಲ ಅನುವಾದ,ಸೃಜನಶೀಲ, ಹೊಸ ಕಾವ್ಯ ಪ್ರಯೋಗ,ಗದ್ಯ ಮತ್ತು ಸಂಪಾದನೆಯ ಐದು ಭಾಗದಲ್ಲಿ ಬ್ಯಾಳಿಯವರ ಸಾಹಿತ್ಯ ರಚನೆಗೊಂಡಿದೆ ಅವರ ಕಾಜಲ್ ಕಾವ್ಯ ಸಂಕಲನದಲ್ಲಿ ಶಾಹಿರಿ,ರುಬಾಯಿ, ಹಿಂದಿ ಮೂರು ಭಾಷೆಯಲ್ಲಿ ಬರೆದವರು.ಸಹಜ ಯೋಗ ಆರೋಗ್ಯ ಕಾಪಾಡುವ ವಿಶಿಷ್ಟ ಕೈಪಿಡಿಯಾಗಿದೆ.ಹಾಯಿಕು ರುಬಾಯಿಗಳನ್ನು ಬರೆದ ಕನ್ನಡದ ಪಿತಾಮಹ ಅವರ ಕಾವ್ಯ ನವ್ಯದ ಮೂಲಕ ಮಾನವೀಯ ಮೌಲ್ಯಗಳ ಸಾರುವ ತ್ರಿಭಾಷಾ ಕವಿ ಬ್ಯಾಳಿಯವರು ಎಂದು ಸಾಹಿತಿ ಡಾ.ಗವಿಸಿದ್ಧಪ್ಪ ಎಚ್.ಪಾಟೀಲ. ನುಡಿದರು.
ತಾಲೂಕು ಪಂಚಾಯತ ಸಭಾಂಗಣದಲ್ಲಿ ಕುಕನೂರಿನ ತಾಯಿ ಪ್ರಕಾಶನ ಮತ್ತು ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ ಏರ್ಪಡಿಸಿದ ಹಿರಿಯ ಸಾಹಿತಿ ಡಾ.ಕೆ.ಬಿ.ಬ್ಯಾಳಿಯ ವರ ಎರಡು ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಪರಿಚ ಯ ಮಾಡಿ ಮಾತನಾಡಿದರು.ಅವರ ಇಳಿವಯಸ್ಸಿನಲ್ಲೂ ಕಾವ್ಯ ರಚನೆಗೆ ತೊಡಗಿದ ಅಪರೂಪದ ಸಾಹಿತಿ ಎಂದರು.
ಹಿರಿಯ ಸಾಹಿತಿಗಳಾದ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ.ಹೇಮಾ ಪಟ್ಟಣಶೆಟ್ಟಿ, ಪ್ರೊ.ಅಲ್ಲಮಪ್ರಭು ಬೆಟ್ಟದೂರ
ರುದ್ರಪ್ಪ ನಿಷ್ಠಿ, ,ಕೆ.ಬಿ.ಬ್ಯಾಳಿ, ಎ.ಎಚ್.ಬಳ್ಳಾರಿ,ಎಂ.ಆರ್. ಪಂಪನಗೌಡ,ಎಚ್ಎಸ್.ಪಾಟೀಲ, ವೀರಣ್ಣ ನಿಂಗೋಜಿ, ಈಶ್ವರ ಹತ್ತಿ, ಮಹಾಂತೇಶ ಮಲ್ಲನಗೌಡರ,ಆಕಾಶ ತೆಗನೂರ,ಡಾ.ಫಕೀರಪ್ಪ ವಜ್ರಬಂಡಿ,ನರೇಂದ್ರ ಪಾಟೀಲ,
ಮೇಘರಾಜ ಜಡಗೆ ಪ್ರಾರ್ಥಿಸಿದರು ಡಾ.ಮಹಾಂತೇಶ ನೆಲಗಣಿ ನಿರೂಪಿಸಿದರು.
ವರದಿ ಅವಿನಾಶ್ S ದೇವನೂರ