ಬಿಳವಾರ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಬೀಜೋಪಚಾರ ಜಾಗೃತಿ ಅಭಿಯಾನ

ಬಿಳವಾರ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಬೀಜೋಪಚಾರ ಜಾಗೃತಿ ಅಭಿಯಾನ

ಬಿಳವಾರ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಬೀಜೋಪಚಾರ ಜಾಗೃತಿ ಅಭಿಯಾನ

ಯಡ್ರಾಮಿ: ಕಲಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನ ಅಂಗವಾಗಿ ಕೃಷಿ ಇಲಾಖೆ ವತಿಯಿಂದ ಬೀಜೋಪಚಾರ ಜಾಗೃತಿ ಕಾರ್ಯಕ್ರಮವನ್ನು ಜರುಗಿಸಲಾಯಿತು.

ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಹಾಗೂ ಇಜೇರಿ ವಲಯದ ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೀಜೋಪಚಾರದ ಮಹತ್ವವನ್ನು ಕುರಿತು ರೈತರಿಗೆ ವಿವರಣೆ ನೀಡಲಾಯಿತು. ಉತ್ತಮ ನಾಳೆಯ ಫಲಕ್ಕೆ ಬೀಜೋಪಚಾರ ಎಷ್ಟು ಅಗತ್ಯವಿದೆ ಎಂಬುದರ ಬಗ್ಗೆ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸಿದರು.

ಅದೇ ರೀತಿ, ಡಿ.ಎನ್.ಪಿ. (ಡೈಅಮೋನಿಯಂ ಫಾಸ್ಫೇಟ್) ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರದ ಬಳಕೆಯ ಮಹತ್ವವನ್ನೂ ರೈತರಿಗೆ ತಿಳಿಸಲಾಯಿತು. ಈ ಮೂಲಕ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭದ ಬಾಳಿಕೆ ಕುರಿತಂತೆ ಕೃಷಿಕರಲ್ಲಿ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಎಟಿಎಂ ಶ್ರೀ ಸಿದ್ದಲಿಂಗ ಸರ್, ಬಸವರಾಜ ಪಾಟೀಲ ಸರ್ (ನಂದಿಹಳ್ಳಿ), ದೇವೇಂದ್ರ ಗಜಕೋಶ್ ಹಾಗೂ ಕೃಷಿ ಇಲಾಖೆಯ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

ಬಿಳವಾರ ಗ್ರಾಮದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಸ್ವಾಮಿ ಆಗ್ರೋ ಏಜೆನ್ಸಿಯವರು ಸಹ ಸಹಕರಿಸಿದರು.

ಪತ್ರಿಕಾ ಪ್ರಕಟಣೆಗೆ ಬಸವರಾಜ ಪಾಟೀಲ (ನಂದಿಹಳ್ಳಿ) ಅವರು ಮಾಹಿತಿ ನೀಡಿದ್ದಾರೆ.