ಪಾಕಿಸ್ತಾನ ಹೆಸರಿಲ್ಲದೆ ಜೀರ್ಣವಾಗದ ಬಿಜೆಪಿಯವರಿಗೆ ಜನತೆ ಪಾಠ ಕಲಿಸಲಿದ್ದಾರೆ – ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಪಾಕಿಸ್ತಾನ ಹೆಸರಿಲ್ಲದೆ ಜೀರ್ಣವಾಗದ ಬಿಜೆಪಿಯವರಿಗೆ ಜನತೆ ಪಾಠ ಕಲಿಸಲಿದ್ದಾರೆ – ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಕಲಬುರಗಿ, ಮೇ 26:"ಬಿಜೆಪಿ ನಾಯಕರಿಗೆ ಪಾಕಿಸ್ತಾನದ ಹೆಸರು ಹೇಳದೆ ತಿನ್ನುವುದು ಜೀರ್ಣವಾಗದು, ನಿದ್ದೆಯಲ್ಲೂ ಪಾಕಿಸ್ತಾನ ಪಾಕಿಸ್ತಾನ ಎಂದೆ ಕನಸು ಕಾಣುತ್ತಿದ್ದಾರೆ" ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯ ಜಿಲ್ಲಾಧಿಕಾರಿ ಫೌಜಿಯಾ ತರನಮ್ ಅವರನ್ನು ಪಾಕಿಸ್ತಾನದಿಂದ ಬಂದವರಂತೆ ಹೇಳಿಕೆ ನೀಡಿದ ರವಿಕುಮಾರ್ ಅವರ ಹೇಳಿಕೆಯನ್ನು ಖಂಡಿಸಿದ ಖರ್ಗೆ, “ಇದು ಅತ್ಯಂತ ಕೀಳಿದರ್ಜೆಯ ರಾಜಕಾರಣವಾಗಿದೆ. ಈ ಹಿಂದೆ ಸೇನಾಧಿಕಾರಿ ಸೋಫಿಯಾ ಖುರೇಷಿಯವರ ಧರ್ಮ ನೋಡಿ ‘ಭಯೋತ್ಪಾದಕರ ಸಹೋದರಿ’ ಎಂದಿದ್ದರು. ಈಗ ಅಧಿಕಾರಿಯರಿಗೂ ಇದೇ ರೀತಿಯ ಕಳಪೆ ಲೆಕ್ಕಾಚಾರ ಆರಂಭಿಸಿದ್ದಾರೆ. ಇದು ಬಿಜೆಪಿಯ ವಸ್ತುಬದ್ಧ ರಾಜಕೀಯದ ದ್ಯೋತಕ” ಎಂದು ಹೇಳಿದ್ದಾರೆ.
ಅಧಿಕಾರಿಗಳ ವೈಯಕ್ತಿಕ ಸ್ವಭಾವ ಮತ್ತು ನೈತಿಕ ಸ್ಥೈರ್ಯವನ್ನು ಹಾಳುಮಾಡುವ ಪ್ರಯತ್ನದಲ್ಲಿ ಬಿಜೆಪಿ ನಾಯಕರಿದ್ದಾರೆ ಎಂದವರು, “ಫೌಜಿಯಾ ತರಣಮ್ ಅವರು IAS ಪಾಸ್ ಮಾಡಿ ದೇಶಸೇವೆಗೆ ಬಂದವರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅತ್ಯುತ್ತಮ ಚುನಾವಣಾ ಅಧಿಕಾರಿಯ ಪ್ರಶಸ್ತಿಯನ್ನೂ ಪಡೆದವರು” ಎಂದು ಪ್ರಶಂಸಿಸಿದ್ದಾರೆ.
“RSSನ ಗುಲಾಮಗಿರಿ ಮಾಡಿಕೊಂಡು ಸ್ಥಾನ ಗಿಟ್ಟಿಸಿಕೊಂಡವರು ಅಧಿಕಾರಿಗಳ ತ್ಯಾಗ, ನಿಷ್ಠೆ, ಸಂವಿಧಾನದ ಬದ್ಧತೆ ಬಗೆಗೆ ಮಾತನಾಡುವುದು ನಾಚಿಕೆಗೆಡುಕವಾಗಿದೆ. ಜನಸೇವೆಗೆ ಬದ್ಧರಾಗಿರುವ ಅಧಿಕಾರಿಗಳ ಬಗ್ಗೆ ಅಸ್ಥಿರ ಹೇಳಿಕೆ ನೀಡುವ ಮೂಲಕ, ಬಿಜೆಪಿಯವರು ಜನತೆ ಮುಂದೆ ತಮ್ಮ ನಿಜ ಮುಖವನ್ನೇ ತೋರುತ್ತಿದ್ದಾರೆ. ಇಂಥವರಿಗೆ ಜನತೆ ಸಮಯ ಬಂದಾಗ ಸರಿಯಾದ ಪಾಠ ಕಲಿಸುತ್ತಾರೆ” ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.