ಮಹಾಂತ ಶಿವಯೋಗಿಗಳ ಸ್ಮರಣೋತ್ಸವ-ಪ್ರವಚನ ಮಂಗಲ ಮಠಾಧೀಶರ ಮಾರ್ಗದಲ್ಲಿ ಧರ್ಮ ರಕ್ಷಣೆಗೆೆ ಮುಂದಾಗಲು ಗುತ್ತೇದಾರ ಕರೆ

ಮಹಾಂತ ಶಿವಯೋಗಿಗಳ ಸ್ಮರಣೋತ್ಸವ-ಪ್ರವಚನ ಮಂಗಲ ಮಠಾಧೀಶರ ಮಾರ್ಗದಲ್ಲಿ ಧರ್ಮ ರಕ್ಷಣೆಗೆೆ ಮುಂದಾಗಲು ಗುತ್ತೇದಾರ ಕರೆ

ಮಹಾಂತ ಶಿವಯೋಗಿಗಳ ಸ್ಮರಣೋತ್ಸವ-ಪ್ರವಚನ ಮಂಗಲ

ಮಠಾಧೀಶರ ಮಾರ್ಗದಲ್ಲಿ ಧರ್ಮ ರಕ್ಷಣೆಗೆೆ ಮುಂದಾಗಲು ಗುತ್ತೇದಾರ ಕರೆ 

ಆಳಂದ: ಮಠಾಧೀಶರ ಮಾರ್ಗದಲ್ಲಿ ಧರ್ಮ ರಕ್ಷಣೆಗಾಗಿ ಮತಭೇದ ಮರೆತು ಧರ್ಮೀಯರು ಒಗ್ಗಟ್ಟಾಗದೇ ಹೋದರೆ ಅದೋಗತಿ ಕಟಿಟ್ಟ್ಟಬೂತಿಯಾಗಿದೆ, ಧರ್ಮ ಸಂಸ್ಕೃತಿ ರಕ್ಷಣೆಗಾಗಿ ಮುಂದಾಗುವುದು ಇದು ಸಕಾಲವಾಗಿದೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಇಂದಿಲ್ಲಿ ಕರೆ ನೀಡಿದರು.

ಪಟ್ಟಣದ ಶ್ರೀ ಶ್ರೀ ಮಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಮಹಾಂತ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡ ಆಧ್ಯಾತ್ಮಿಕ ಪ್ರವಚನ ಮಹಾಮಂಗಲ ಧಾರ್ಮಿಕ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.  

ವೀರಶೈವ ಲಿಂಗಾಯತ ಸಮುದಾಯದಲ್ಲಿ ಒಗ್ಗಟ್ಟಿನ ಅವಶ್ಯಕತೆ ಇರುವುದನ್ನು ಅವರು ಉಲ್ಲೇಖಿಸಿದರು. ಹಿಂದೂಗಳ ಜಾಗೃತಿ ಮತ್ತು ಒಗ್ಗಟ್ಟಿನಿಂದ ಕೂಡಿಮುನ್ನೆಡೆಯಬೇಕು.

ಸಮಾಜದ ಶ್ರೇಯಸ್ಸಿಗಾಗಿ ಮಠ-ಮಂದಿರಗಳು ಪಾತ್ರ ಬಹುಮುಖವಾಗಿದೆ. ಆಳಂದ ಮಹಾಂತ ಶಿವಯೋಗಿಗ¼ ಮಾಡಿದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳ ಇಂದಿಗೂ ಜನರಿಗೆ ದಾರಿದೀಪವಾಗಿವೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನೆಡೆಯೋಣಾ ಎಂದರು. 

ಅಧ್ಯಕ್ಷತೆ ವಹಿಸಿದ್ದ ಶ್ರೀಮಠದ ಪೀಠಾಧಿಪತಿ ಶ್ರೀ ಮಹಾಂತಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿ, ಭಕ್ತಾದಿಗಳು ಧಾರ್ಮಿಕ ಪರಂಪರೆಯನ್ನು ಪೋಷಿಸಿ, ದೇವರ ಮತ್ತು ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಸಲಹೆ ನೀಡಿದರು. ಮಠ ಪೀಠಗಳು ಭಕ್ತರ ಆಧ್ಯಾತ್ಮಿಕ ಪಥವನ್ನು ಬೆಳಗಿಸುವ ದಿವ್ಯ ಕೇಂದ್ರಗಳಾಗಿದ್ದು, ಸದ್ಭಕ್ತಿಯ ಮೂಲಕ ಜೀವನವನ್ನು ಪಾವನಗೊಳಿಸಬೇಕೆಂದು ಅವರು ಅಭಿಪ್ರಾಯಪಟ್ಟರು.  

ಫಿರೋಜಾಬಾದ್ ಸಂತೆಕಲ್ಲೂರು ಮಠದ ಗುರುಬಸವ ಮಹಾಸ್ವಾಮಿಗಳು, ಸಿದ್ದಲಿಂಗ ಶಿವಾಚಾರ್ಯ ಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು, ರೇವಣಸಿದ್ದ ಶಿವಶರಣ ಮಂಟಪದ ಶ್ರೀ ಚನ್ನಬಸವ ಪಟ್ಟದೇವರು ಶ್ರೀಮಠದ ಪರಂಪರೆ ಇತಿಹಾಸವು ಭಕ್ತರ ಬಾಳಿನ ಬೆಳಕಾಗಿದೆ. ಭಕ್ತಿಯಿಂದ ನಡೆದು ಆಶೀರ್ವಾದವನ್ನು ಪಡೆದುಕೊಳ್ಳಿ ಎಂದರು. 

ಶ್ರೀಮಠದ ನೂತನ ಪೀಠಾಧಿಪತಿ ಡಾ. ಅಭಿನವ ಚನ್ನಬಸವ ಶಿವಾಚಾರ್ಯರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಭಕ್ತರಲ್ಲಿ ನಿಷ್ಠೆ, ಶ್ರದ್ಧೆ, ಸಂಸ್ಕಾರ ಬೆಳೆಯಬೇಕೆಂದು ಕರೆ ನೀಡಿದರು.

ಎವಿ ಪಾಟಿಲ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಹೆಚ್. ಹೊಸಮನಿ ಸೇರಿ ಇನ್ನಿತರು ಮಾತನಾಡಿದರು. 

ಈ ಕಾರ್ಯಕ್ರಮದಲ್ಲಿ ಸಂಗೀತ ಕಲಾ ಸೇವೆಯನ್ನು ಶಿವಶರಣಪ್ಪ ಪೂಜಾರಿ (ಹಿತ್ತಲಶಿರೂರ್) ಮತ್ತು ತಬಲಾ ವಾದನಕಾರ ಬಸವರಾಜ್ ಆಳಂದ ಅವರು ನೀಡಿದ ಶ್ರವ್ಯ ಸಂಗೀತ ಭಕ್ತರ ಮನಸ್ಸನ್ನು ಮಿಡಿಯಿತು.

ನಿರೂಪಣೆಯನ್ನು ಬಸಯ್ಯ ಸ್ವಾಮಿ ನಂದವಾಡಗಿ ಹಾಗೂ ಚಂದ್ರಶೇಖರಯ್ಯ ಶಾಸ್ತ್ರಿ ನಡೆಸಿದರು. 

ಬೆಳಗಿನ ಜಾವ ಮಹಾಂತ ಶಿವಯೋಗಿ ಕರ್ತೃಗದ್ದುಗೆ ರುದ್ರಾಭಿಷೇಕ, ವರಲಕ್ಷ್ಮಿ ಪೂಜೆ ನೆರವೇರಿತು. ಸಮಾರಂಭದಲ್ಲಿ ಆಳಂದ್, ನಾರಾಯಣಪುರ, ಜಾಲವಾದಿ, ನಂದವಾಡಗಿ, ಕೋತನಹಿಪ್ಪರಗ, ಹಿರೋಳಿ, ಕಲಬುರ್ಗಿ, ನಾಗಲೆಗಾವ್, ಅಂಬೆವಾಡ, ಹತ್ತರಗಾ ಸೇರಿದಂತೆ ವಿವಿಧ ಭಾಗಗಳಿಂದ ಬಂದ ಭಕ್ತಾದಿಗಳು ಈ ಪಾವನ ಸಭೆಗೆ ಸಾಕ್ಷಿಯಾದರು. ಈ ಕಾರ್ಯಕ್ರಮ ಧಾರ್ಮಿಕ ಪರಂಪರೆ, ಭಕ್ತಿಯ ಸಂಸ್ಕೃತಿ, ಮಠದ ಮಹತ್ವವನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದ ಮಹತ್ವದ ಕ್ಷಣವಾಯಿತು. ಆಗಮಿಸಿದ್ದ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಿಸಲಾಯಿತು. 

 ವರದಿ ಡಾ. ಅವಿನಾಶ S ದೇವನೂರ ಆಳಂದ