ಜಯನಗರ ಶಿವಮಂದಿರದಲ್ಲಿ ವಿಜ್ರಂಭಣೆಯ ಶಿವಪಾರ್ವತಿ ಕಲ್ಯಾಣೋತ್ಸವ ಆಚರಣೆ

ಜಯನಗರ ಶಿವಮಂದಿರದಲ್ಲಿ ವಿಜ್ರಂಭಣೆಯ ಶಿವಪಾರ್ವತಿ ಕಲ್ಯಾಣೋತ್ಸವ ಆಚರಣೆ

ಜಯನಗರ ಶಿವಮಂದಿರದಲ್ಲಿ ವಿಜ್ರಂಭಣೆಯ ಶಿವಪಾರ್ವತಿ ಕಲ್ಯಾಣೋತ್ಸವ ಆಚರಣೆ 

ಕಲಬುರಗಿ: ಮಹಾ ಶಿವರಾತ್ರಿ ನಿಮಿತ್ತ ಜಯನಗರ ಶಿವಮಂದಿರದಲ್ಲಿ ಇಂದು ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶಿವ ಪಾರ್ವತಿ ಕಲ್ಯಾಣೋತ್ಸವ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಿತು.

 ಟ್ರಸ್ಟ್ ಹಾಗೂ ಬಡಾವಣೆಯ ಮಹಿಳೆಯರಿಂದ ಶಿವಾ ಪಾರ್ವತಿ ಕಲ್ಯಾಣೋತ್ಸವ ನೆರವೇರಿಸಿದರು.ನೆರೆದ ಜನರಿಂದ ಹರ್ ಹರ್ ಮಹಾದೇವ ಎಂಬ ಘೋಷಣೆ ಕೂಗಿದರು.ನಂತರ ಶಿವಪಾರ್ವತಿಯರಿಗೆ ಅಕ್ಷತಾ ಹಾಕಿದರು. ಜಯನಗರ ಶಿವಮಂದಿರದಲ್ಲಿ ಶಿವಪಾರ್ವತಿ ಕಲ್ಯಾಣೋತ್ಸವ ಮಾಡುತ್ತಿರುವುದು ವಿಶೇಷ ಪದ್ಧತಿಯಾಗಿದೆ.ಇಂಥ ಧರ್ಮ ಕಾರ್ಯಗಳು ಎಲ್ಲೆಡೆ ನಡೆಯಬೇಕು.ಶಿವನ ಆಧಾರಿಸುವುದು ಹಾಗೂ ಶಿವನನ್ನು ನೆನೆಯುವುದೇ ಮಹಾಶಿವರಾತ್ರಿ ಆಗಿದೆ.ಶಿವ ಶಿವ ಎಂದರೆ ಭಯವಿಲ್ಲ.ಮನಸ್ಸಿಗೆ ನೆಮ್ಮದಿ ಇರುತ್ತದೆ ಎಂದು ಹಿರಿಯ ಹೋರಾಟಗಾರ ಡಾ.ಲಕ್ಷ್ಮಣ ದಸ್ತಿ ತಿಳಿಸಿದರು.

 ನಂತರ ಡಾ.ಲಕ್ಷ್ಮಣ ದಸ್ತಿ ಅವರು ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿದರು.ಶಿವಪರಂಪರೆ ಜಗತ್ತಿನೆಲ್ಲಡೆ ಧಾರ್ಮಿಕ ಸಂದೇಶ ಸಾರುತ್ತಿದೆ ಎಂದು ಹಿರಿಯ ಸಾಹಿತಿ ಡಾ.ಬಸವರಾಜ ಕುಮನೂರು ಅಭಿಪ್ರಾಯ ಪಟ್ಟರು.ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮಾತನಾಡಿ ಸುಮಾರು 14 ವರ್ಷದಿಂದ ಜಯನಗರ ಶಿವಮಂದಿರದಲ್ಲಿ ಶಿವಪಾರ್ವತಿ ಕಲ್ಯಾಣೋತ್ಸವ ಮಾಡಲಾಗುತ್ತಿದೆ.ಈ ವರ್ಷವೂ ವಿಜ್ರಂಭಣೆಯಿಂದ ಆಚರಿಸಲಾಯಿತು.ಇದಕ್ಕೆಲ್ಲ ಎಲ್ಲರ ಸಹಕಾರ ಸಿಕ್ಕಿದೆ ಎಂದರು.

 ಟ್ರಸ್ಟ್ ಪದಾಧಿಕಾರಿಗಳಾದ ವಿರೇಶ ದಂಡೋತಿ, ಸೂರ್ಯಕಾಂತ ಕೆ.ಬಿ, ಸಿದ್ಧಲಿಂಗ ಗುಬ್ಬಿ,ಬಂಡಪ್ಪ ಕೇಸೂರ, ಬಸವರಾಜ ಮಾಗಿ,ಶಿವಪುತ್ರಪ್ಪ ಮರಡಿ, ಬಸವರಾಜ ಪುರ್ಮಾ, ಮಲ್ಲಯ್ಯ ಸ್ವಾಮಿ ಗಂಗಾಧರಮಠ, ಸುನೀಲ್ ಬಿಡಪ್, ನಾಗರಾಜ ಖೂಬಾ,ಭೀಮಾಶಂಕರ ಶೆಟ್ಟಿ, ವಾಸುದೇವ ಮಾಲಿಬಿರಾದಾರ, ಗುರುಪಾದಪ್ಪ ಕಾಂತಾ,ಎಂ.ಡಿ.ಮಠಪತಿ, ಎಸ್.ಡಿ.ಸೇಡಂಕರ,ಅಶೋಕ ಪಾಟೀಲ, ವೀರಪ್ಪ ಹುಡುಗಿ,ಶಿವಕುಮಾರ ಪಾಟೀಲ್,ಶ್ರೀಮತಿ ಅನುರಾಧ ಕುಮಾರಸ್ವಾಮಿ, ಸುಜಾತಾ ಭೀಮಳ್ಳಿ,ವಿಜಯಾ ಟಿ.ಸಿ.ಚವ್ಹಾಣ,ಮಹಿಳಾ ಘಟಕದ ಪದಾಧಿಕಾರಿಗಳಾದ ಶೈಲಜಾ ವಾಲಿ, ಅನಿತಾ ನವಣಿ, ಸುರೇಖಾ ಬಾಲಕೊಂದೆ, ಲತಾ ತುಪ್ಪದ ವಿಜಯಾ ದಂಡೋತಿ, ಗೀತಾ ಸಿರಗಾಪೂರ , ಪಾರ್ವತಿ ಶೆಟ್ಟಿ, ಶಕುಂತಲಾ ಮರಡಿ, ಅಶ್ವಿನಿ ಪಾಟೀಲ,ಮಹಾಲಿಂಗಮ್ಮ ಮಠಪತಿ ಸೇರಿದಂತೆ ಅನೇಕ ಮಹಿಳೆಯರು ಮತ್ತು ಮಕ್ಕಳು ಹಾಗೂ ಹಿರಿಯರು ಉಪಸ್ಥಿತರಿದ್ದರು