ಆಳಂದ: ನಿಷೇಧಾಜ್ಞೆಯಿಂದ ಜನಜೀವನ ಅಸ್ತವ್ಯಸ್ತ – ಭಕ್ತರಿಗೆ, ವ್ಯಾಪಾರಿಗಳಿಗೆ ತೊಂದರೆ

ಆಳಂದ: ನಿಷೇಧಾಜ್ಞೆಯಿಂದ ಜನಜೀವನ ಅಸ್ತವ್ಯಸ್ತ – ಭಕ್ತರಿಗೆ, ವ್ಯಾಪಾರಿಗಳಿಗೆ ತೊಂದರೆ
ಆಳಂದ ಪಟ್ಟಣದ ಹಜರತ್ ಲಾಡ್ಲೆಮಶಾಕ್ ದರ್ಗಾದಲ್ಲಿ ರಾಘವ ಚೈತನ್ಯ ಲಿಂಗ ಪೂಜೆಯ ಹಿನ್ನೆಲೆ ನಿಷೇಧಾಜ್ಞೆ ಜಾರಿಗೊಂಡಿದ್ದು, ಇದರಿಂದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಜನತೆಗೆ ಅಡೆತಡೆ ಉಂಟಾಗಿದೆ. ಬುಧವಾರ ಬೆಳಗ್ಗೆಯಿಂದಲೇ 144 ಕಲಂ ಅಡಿಯಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದ್ದು, ಜನರ ಓಡಾಟ, ವ್ಯಾಪಾರ-ವ್ಯವಹಾರ ಸಂಪೂರ್ಣ ಸ್ಥಗಿತಗೊಂಡಿದೆ.
ಪ್ರಮುಖ ರಸ್ತೆಗಳಲ್ಲಿನ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಲು ಪೊಲೀಸರು ಒತ್ತಾಯಿಸಿದ್ದು, ಹಣ್ಣು-ತರಕಾರಿ ಮಾರಾಟಕ್ಕೂ ಅವಕಾಶ ನೀಡಲಾಗಿಲ್ಲ. ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಇದರಿಂದಾಗಿ ದೇವಾಲಯಗಳಿಗೆ ತೆರಳುವ ಭಕ್ತರು ಪರದಾಡುವ ಸ್ಥಿತಿಯಾಗಿದೆ.
ನಗರಕ್ಕೆ ಬರುವ ಬಸ್ಸುಗಳನ್ನು ಐದು-ಆರು ಕಿಲೋಮೀಟರ್ ದೂರದಲ್ಲಿ ನಿಲ್ಲಿಸಲಾಗಿದ್ದು, ಪ್ರಯಾಣಿಕರು ಪಾದಯಾತ್ರೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು, ವಯೋವೃದ್ಧರು, ಮಕ್ಕಳು ಹೃದಯವಿದ್ರಾವಕ ಅನುಭವಗಳನ್ನು ಎದುರಿಸುತ್ತಿದ್ದಾರೆ.
ಬಂದೋಬಸ್ತು ಕಾರ್ಯದಲ್ಲಿ ನಿಯೋಜಿತ ಪೊಲೀಸ್ ಸಿಬ್ಬಂದಿಗೂ ಸಮರ್ಪಕ ಆಹಾರ ಸಿಗದೆ ಪರದಾಡುವಂತಾಗಿದೆ. ಕೆಲ ಸಿಬ್ಬಂದಿ ಔಷಧಿ ಅಂಗಡಿಗಳಿಗೆ ತೆರಳಿ ಶಕ್ತಿವರ್ಧಕ ಮಾತ್ರೆಗಳು ತೆಗೆದುಕೊಳ್ಳುವಂತಹ ದುರ್ಬಲ ಸ್ಥಿತಿ ಎದುರಿಸಿದ್ದಾರೆ.
ಈ ಪರಿಸ್ಥಿತಿಯ ವಿರುದ್ಧ ವ್ಯಾಪಾರಸ್ಥರು ಹಾಗೂ ಜನತೆ ಆಕ್ರೋಶ ವ್ಯಕ್ತಪಡಿಸಿದ್ದು, ದೇವಾಲಯಕ್ಕೆ ತೆರಳಲು, ನಿತ್ಯದ ಆರ್ಥಿಕ ಚಟುವಟಿಕೆಗಳನ್ನು ನಿರ್ವಹಿಸಲು ಅವಕಾಶ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಸಾರಿಗೆ ನಿರ್ಬಂಧ: ಪ್ರಯಾಣಿಕರಿಗೆ ಭಾರೀ ತೊಂದರೆ
ಆಳಂದ: ಶಿವರಾತ್ರಿಯ ಹಿನ್ನೆಲೆಯಲ್ಲಿ ಹಜರತ್ ಲಾಡ್ಲೆಮಶಾಕ್ ದರ್ಗಾ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಜಿಲ್ಲಾಡಳಿತದ ಆದೇಶದಂತೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಇದರ ಭಾಗವಾಗಿ, ಪ್ರಮುಖ ಸಾರಿಗೆ ಮಾರ್ಗಗಳಲ್ಲಿ ಐದು ಕಿಲೋಮೀಟರ್ ಅಂತರದಲ್ಲಿ ವಾಹನ ಸಂಚಾರವನ್ನು ತಡೆಹಿಡಿದಿದ್ದಾರೆ, ಇದರಿಂದಾಗಿ ಸಾರ್ವಜನಿಕರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ.
ದೂರದ ಊರಿನಿಂದ ಬಂದ ಜನರು ನಗರದ ಹೊರಭಾಗದಲ್ಲೇ ಬಸ್ಸುಗಳಿಂದ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ವಯೋವೃದ್ಧರು, ಮಹಿಳೆಯರು ಮತ್ತು ಮಕ್ಕಳಿಗೆ ಈ ನಿರ್ಬಂಧ ಹಗಲಿರುಳು ಹತ್ತಿರದ ಸ್ಥಳಕ್ಕೂ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಉಂಟುಮಾಡಿದೆ.
ಅಗತ್ಯ ಸೇವೆಗಳು, ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳು ಹಾಗೂ ದಿನಸಚಾರಿ ಕೆಲಸಕ್ಕೆ ಹೋಗುವವರೂ ಈ ನಿರ್ಬಂಧದ ಹೊಡೆತಕ್ಕೆ ಒಳಗಾಗಿದ್ದು, ಸಾರಿಗೆ ಸಂಸ್ಥೆಗಳಿಗೆ ಸಡಿಲಿಕೆ ನೀಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಕಾರ್ಯನಿರತ ಪೋಲೀಸ್ ಸಿಬ್ಬಂದಿಗಳ ಸಿಬ್ಬಂದಿಗಳಿಗೆ
ಬಸವಗಂಗಾ ಮೇಡಿಕಲ್ ವತಿಯಿಂದ ನೀರು ಮತ್ತು ತಂಪು ಪಾನೀಯ ವಿತರಿಸಿದರು.
ವರದಿ ಡಾ. ಅವಿನಾಶ ಎಸ್. ದೇವನೂರ