ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳಿಂದ ತಹಸೀಲ್ದಾರ್ ಕಚೇರಿ ಎದುರು 2ನೇದಿನ ಮುಷ್ಕರಕ್ಕೆ ಸರ್ಕಾರ ನೌಕರ ಸಂಘ ಬೆಂಬಲ್

ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳಿಂದ ತಹಸೀಲ್ದಾರ್ ಕಚೇರಿ ಎದುರು 2ನೇದಿನ ಮುಷ್ಕರಕ್ಕೆ ಸರ್ಕಾರ ನೌಕರ ಸಂಘ ಬೆಂಬಲ್

ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳಿಂದ ತಹಸೀಲ್ದಾರ್ ಕಚೇರಿ ಎದುರು 2ನೇದಿನ ಮುಷ್ಕರಕ್ಕೆ ಸರ್ಕಾರ ನೌಕರ ಸಂಘ ಬೆಂಬಲ್

ಕಲಬುರಗಿ : ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಗರದ ತಹಸೀಲ್ದಾರ್ ಕಚೇರಿ ಎದುರು ಗ್ರಾಮ ಆಡಳಿತ ಅಧಿಕಾರಿಗಳು ಎರಡನೇ ದಿನ ಮುಷ್ಕರಕ್ಕೆ ಸರ್ಕಾರ ನೌಕರ ಸಂಘ ಬೆಂಬಲ್ ನೀಡಿದ್ದಾರೆ. 

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿ ಕಾರಿಗಳ ಕೇಂದ್ರ ಸಂಘದ ಆದೇಶದ ಮೇರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಗ್ರಾಮ ಆಡಳಿತ ಅಧಿ ಕಾರಿಗಳು ಕೈಗೆ ಕಪ್ಪು ಬಟ್ಟೆ ಧರಿಸಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಸರಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ತಾಲೂಕಾಧ್ಯಕ್ಷ ಕಿರಣಕುಮಾರ ಮಾತನಾಡಿ, ಇ-ಪೌತಿ ಖಾತಾ ಆಂದೋಲನ ಕೈಬಿಡಬೇಕು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಉತ್ತಮ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ, ಗುಣಮಟ್ಟದ ಮೊಬೈಲ್ ಫೋನ್, ಸಿಯುಜಿ ಸಿಮ್ ಮತ್ತು ಡೇಟಾ, ಗೂಗಲ್ ಕ್ರೋಮ್ ಬುಕ್, ಲ್ಯಾಪ್‌ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ಕಲ್ಪಿಸಬೇಕು. ಪ್ರಯಾಣ ಭತ್ಯೆ ಹೆಚ್ಚಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಧರಣೆ ನಡೆಸಲಾಗುತ್ತಿದೆ. ಈ ವೇಳೆ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ

ಭರವಸೆ ನೀಡಲಾಗಿತ್ತು. ಆದರೆ, ಈವರೆಗೆ ಯಾವುದೇ ಬೇಡಿಕೆ ಈಡೇರಿಸಿಲ್ಲ. ಬದಲಿಗೆ ಕೆಲಸದ ಒತ್ತಡ ಹೆಚ್ಚಿಸಲಾಗಿದೆ ಎಂದು ಆರೋಪಿಸಿದರು. ಈಡೇರಿಸುವವರೆಗೆ ಮುಂದುವರಿಸುವ ಬೇಡಿಕೆ ಮುಷ್ಕರ ಎಚ್ಚರಿಕೆ ನೀಡಲಾಯಿತು. 

ಸರ್ಕಾರ ನೌಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳುಂಡಗಿ, ಶ್ರೀಮಂತ ಪಟೇದ್ದಾರ, ಧರ್ಮರಾಜ ಜವಳಿ, ಚಂದ್ರಕಾಂತ ಏರಿ, ಬಾಬು ಮೌರ್ಯ, ಎಂ. ಬಿ. ಪಾಟೀಲ, ಕೃಷ್ಣಾಚಾರಿ, ಸಂತೋಷ ಸಲಗರ, ರಾಜು ಗೋಪಣೆ, ಕರ್ನಾಟಕ ಗ್ರಾಮ ಆಡಳಿತ ಅಧಿಕಾರಿ ನೌಕರರ ಸಮಘದ ಅಧ್ಯಕ್ಷ ಮೋತಿಲಾಲ ಚವ್ಹಾಣ, ಗ್ರಾಮ ಆಡಳಿತಾಧಿ ಕಾರಿಗಳಾದ ಗುರುಮೂರ್ತಯ್ಯ ಚತುರಾಚಾರಿಮಠ, ರೇವಣಸಿದ್ದಪ್ಪ ಚಂದನಕೇರಿ, ಕುಮಾರ ಸೇರಿದಂತೆ ಇತರರು ಇದ್ದರು