ಅವೈಜ್ಞಾನಿಕ ಮತ್ತು ಕಳಪೆ ಮಟ್ಟದ್ದಾಗಿದ್ದು ಅದನ್ನು ಪರಿಶೀಲನೆ ಮಾಡಬೇಕೆಂದು : ಜಿಲ್ಲಾಧಿಕಾರಿಗಳಾದ ಫೌಜಿಯಾ ತರನ್ನುಮ್ ಅವರಿಗೆ ಮನವಿ

ಅವೈಜ್ಞಾನಿಕ ಮತ್ತು ಕಳಪೆ ಮಟ್ಟದ್ದಾಗಿದ್ದು ಅದನ್ನು ಪರಿಶೀಲನೆ ಮಾಡಬೇಕೆಂದು : ಜಿಲ್ಲಾಧಿಕಾರಿಗಳಾದ ಫೌಜಿಯಾ ತರನ್ನುಮ್ ಅವರಿಗೆ ಮನವಿ
ಕಲಬುರಗಿ: 2018-19ನೇ ಸಾಲಿನ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಗರದ ತಾರ್ಫೈಲ್ ಬಡಾವಣೆ ವಾರ್ಡ್ ನಂ. 54ರಲ್ಲಿ 350 ಮನೆಗಳು ಮಂಜೂರಾಗಿದ್ದು ಆ ಮನೆಗಳ ನಿರ್ಮಾಣ ಅವೈಜ್ಞಾನಿಕ ಮತ್ತು ಕಳಪೆ ಮಟ್ಟದ್ದಾಗಿದ್ದು ಅದನ್ನು ಪರಿಶೀಲನೆ ಮಾಡಬೇಕೆಂದು ಕಲ್ಯಾಣ ಕರ್ನಾಟಕ ಸೇನೆ ಮತ್ತು ಭೀಮ ಯುವ ಸೇನೆ ಜಂಟಿಯಾಗಿ ಜಿಲ್ಲಾಧಿಕಾರಿಗಳಾದ ಫೌಜಿಯಾ ತರನ್ನುಮ್ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದ ತಾರ್ಫೈಲ ಬಡಾವಣೆಯ ವಾರ್ಡ್ ನಂ. 54 ಇಲ್ಲಿ2018-19ನೇ ಸಾಲಿನ ಪ್ರಧಾನಮಂತ್ರಿಆವಾಸ್ಯೋಜನೆಅಡಿಯಲ್ಲಿತಾರ್ಫೈಲ್ ಬಡಾವಣೆಗೆ 350 ಮನೆಗಳು ಮಂಜೂರಾಗಿರುತ್ತವೆ, ಈ ಮನೆಗಳ ಪೈಕಿ 300 ಮನೆಗಳು ನಿರ್ಮಾಣವಾಗಿರುತ್ತವೆ, ಮಾಡಿರುವ 300 ಮನೆಗಳು ಕಳಪೆ ಗುಣಮಟ್ಟದ್ದಾಗಿರುತ್ತವೆ. ಮಳೆಗಾಲದಲ್ಲಿ ಸೋರುತ್ತಿರುತ್ತವೆ, ಇದನ್ನು ಈ ಹಿಂದೆಯುಕೂಡಾ ಸ್ಲಂ ಬೋರ್ಡ್ಮಾನ್ಯಸಹಾಯಕಅಭಿಯಂತರರ ಗಮನಕ್ಕೆ ತರಲಾಗಿದೆ, ಆದರೂಕೂಡಾಯಾವುದೇ ಸರಿಯಾದ ಸ್ಪಂದನೆದೊರಕಿರುವುದಿಲ್ಲ, ಇದರಲ್ಲಿಸುಮಾರು ರೂ.40,000 ದಿಂದ 50,000ರ ವರಗೆಖರ್ಚು ಮಾಡಿ120 ಮನೆಗಳು ಫಲಾನುಭವಿಗಳು ಸಾಲ-ಸೂಲ ಮಾಡಿಅಲ್ಲಿನ ಸ್ಥಳಿಯರು ಖುದ್ದಾಗಿತಾವೇ ನಿರ್ಮಿಸಿಕೊಂಡಿರುತ್ತಾರೆ, ಅವರಿಗೆಯಾವುದೇರೀತಿಹಧನ ಸಹಾಯ ಮತ್ತುಕಟ್ಟಡದ ಕಚ್ಚಾ ಸಾಮಾಗ್ರಿಗಳು ಕೊಟ್ಟಿರುವುದಿಲ್ಲ, ಇದನ್ನು ಫಲಾನುಭವಿಗಳು ಸ್ಲಂಬೋರ್ಡ್ ಅಧಿಕಾರಿಗಳಿಗೆ ಪ್ರಶ್ನಿಸಿದಾಗ ಇಂದು ನಾಳೆ ನಿಮಗೆ ಸಂಪೂರ್ಣಮನೆ ಹಣ ನೀಡಲಾಗುವುದೆಂದು ಹೇಳಿ ಹಣ ಎಷ್ಟು ನೀಡುತ್ತಾರೆಂದು ವಿವರ ನೀಡುತ್ತಿಲ್ಲ, ಹೀಗೆಕಾಟಾಚಾರಕ್ಕೆ ಸ್ಥಳಕ್ಕೆ ಬಂದುಬೋಗಸ ಭರವಸೆ ನೀಡುತ್ತಿದ್ದಾರೆ, ಹಾಗೂ ಎ.ಇ.ಇ. ಸ್ಥಳಕ್ಕೆ ಬಂದು ಮಾಧ್ಯಮಕ್ಕೆ ಮಾತನಾಡಿಇಲ್ಲಿಗೆ ನಾನು 281 ಮನೆಯನ್ನು ಪೂರ್ಣಗೊಳಿಸಿದ್ದೇವೆ, ಇನ್ನುಳಿದ 70 ಮನೆ ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಲಾಗುವುದೆಂದು ತಲೆ ಬುಡಇಲ್ಲದ ಹಾಗೆ ಲೆಕ್ಕ ನೀಡುತ್ತಿದ್ದಾರೆ. ಒಟ್ಟು ಸಂಪೂರ್ಣ ಹಣಎಷ್ಟೆಂದು ಮಾಹಿತಿ ನೀಡುತ್ತಿಲ್ಲ. ಸ್ಲಂ ಬೋರ್ಡ್ನಿಂದ ಬರುವಂತ ಮನೆಗಳು ಸಿಟಿ ಸರ್ವೆಯಲ್ಲಿ ಹಾಗೂ ಜಿ.ಡಿ.ಎ. ಲೇಔಟ್ ನಲ್ಲಿ ಪೂರ್ಣಗೊಳಿಸುವುದು ಯಾರಅನುಮತಿ ಪಡೆದಿದ್ದಾರೆಎನ್ನುವುದು ಪ್ರಶ್ನಾರ್ಹ ?ಈ ಕಾಮಗಾರಿಅನುಮಾನ ಅಧಿಕಾರಿಗಳ ವಿರುದ್ದ ಹೆಚ್ಚಿಸುತ್ತಿದ್ದು, ಯಾವುದೇ ಸಂಬಂಧಪಟ್ಟ ಸಮಗ್ರ ಮಾಹಿತಿ ನೀಡುತ್ತಿಲ್ಲ, ಏನಾದರೂಉಡಾಫೆಉತ್ತರ ನೀಡಿ ಆಫೀಸಿನಿಂದ ಕಳಿಸುತ್ತಿದ್ದಾರೆ.ಸುಮಾರು25ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವಇಲ್ಲಿನ ಅಧಿಕಾರಿಗಳಿಗೆ ವರ್ಗಾವಣೆ ಮಾಡಬೇಕೆನ್ನುವ ವಿನಂತಿ,ಆದ್ದರಿಂದ ಮಾನ್ಯರುತಾವುಕೂಡಲೇ ಸ್ಥಳಪರಿಶೀಲನೆ ಮಾಡಿ, ಈ ವಿಷಯದಕುರಿತು ಸಮಗ್ರ ಮಾಹಿತಿ ಪಡೆದುಕಳಪೆ ಮಟ್ಟದ ಕೆಲಸಕ್ಕೆ ಕಾರಣೀಕರ್ತರಾದ ಅಧಿಕಾರಿಗಳ ವಿರುದ್ಧಅತೀ ಶೀಘ್ರದಲ್ಲಿ ಕ್ರಮಕೈಗೊಂಡು ಫಲಾನುಭವಿಗಳಿಗೆ ಬರಬೇಕಾದ ಸಂಪೂರ್ಣ ಹಣ ಹಾಗೂ ನ್ಯಾಯ ಒದಗಿಸಿಕೊಡಬೇಕೆಂದು ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇವೆ.
ಈ ವಿಷಯದಕುರಿತು ಈಗಾಗಲೇ ತಮಗೆ ಮಾಹಿತಿ ನೀಡಲಾಗಿದೆ.ಮತ್ತು ಮಾನ್ಯಉಸ್ತುವಾರಿ ಸಚಿವರಿಗೂ ಸಹ ಈ ಬಗ್ಗೆ ಪತ್ರ ನೀಡಲಾಗಿದೆ, ಒಂದು ವೇಳೆ ಶೀಘ್ರವಾಗಿ ತಾರ್ಫೈಲ್ ಬಡಾವಣೆಯಲ್ಲಿನ್ಯಾಯದೊರಕದೆಇದ್ದಲ್ಲಿಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಲಬುರಗಿಕಛೇರಿಗೆ ಸಮಸ್ತ ತಾರ್ಫೈಲ್ ಬಡಾವಣೆಯ ಜನರ ಜೊತೆಗೆ ಮತ್ತು ಕಲ್ಯಾಣ ಕರ್ನಾಟಕ ಸೇನೆ ಮತ್ತು, ಭೀಮಯುವಸೇನೆ (ರಿ) ಹಾವನೂರ ಜಂಟಿಯಾಗಿ ಸೇರಿ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಸಂಸ್ಥಾಪಕ ಅಧ್ಯಕ್ಷ ದತ್ತು ಹೈಯಾಳಕರ, ಭೀಮಯುವಸೇನೆ ಅಧ್ಯಕ್ಷ ಸಂತೋಷ ಹಾವನೂರ, ಶ್ರೀಮತಿ ಬಿ. ಗೋರಂಪಳ್ಳಿ, ಶ್ರೀದೇವಿ ಮುತ್ತಂಗಿ, ನಿಂಗಮ್ಮಕಟ್ಟಿಮನಿ, ಅಬ್ದುಲ್ಜಾವೇದ್, ಫರ್ಜಾನಾಬೇಗಂ, ರಾಹುಲ ಹಿಪ್ಪರಗಿ, ಬಸವರಾಜ ತಾರ್ಫೈಲ್, ನೀಲಮ್ಮ ಕಮಲಾಪೂರ ಸೇರಿದಂತೆ ಇತರರು ಇದ್ದರು.