ಜೀವನಾನುಭವವನ್ನು ಸಾಹಿತ್ಯದ ಓದಿನ ಮೂಲಕ ಗಳಿಸಲು ಡಾ.ಹೊನ್ನಲ್ ಕರೆ
ಜೀವನಾನುಭವವನ್ನು ಸಾಹಿತ್ಯದ ಓದಿನ ಮೂಲಕ ಗಳಿಸಲು ಡಾ.ಹೊನ್ನಲ್ ಕರೆ
ಕಲಬುರಗಿ: ಸೆಂಟ್ ಜೋಶೇಪ್ ಪಿಯೂ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ಚ-ಕೋರ ಸಾಹಿತ್ಯ ವಿಚಾರ ವೇದಿಕೆ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಡಾ.ಚಂದ್ರಶೇಖರ ಕಂಬಾರರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಡಾ.ಚಿ.ಸಿ.ನಿಂಗಣ್ಣ ಪ್ರಾಂಶುಪಾಲರು ಹಾಗೂ ಜಾನಪದ ತಜ್ಞರು ಇವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಚಕೋರ ಸಾಹಿತ್ಯ ವಿಚಾರ ವೇದಿಕೆಯ ಧೈಯೋದ್ದೇಶ ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಆದ ಡಾ.ಸಿದ್ದರಾಮ ಹೊನ್ನಲ್ ಆಶಯ ನುಡಿಯಾಡಿ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಉಪನ್ಯಾಸಕರು ಆದ ಡಾ.ಸಂತೋಷಕುಮಾರ ಕಂಬಾರ ಅವರು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರರ ಕುರಿತು ಅವರ ಬದುಕು ಬರಹದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರು ಆದ ಶ್ರೀ ಬಿ.ಎಚ್.ನಿರಗುಡಿ ಅವರು ಹಾಗೂ ಶ್ರೀ ಶ್ಯಾಮುವೆಲ್ ಎಸ್ ಸಂಸ್ಥೆಯ ಸಂಯೋಜಕರು ಹಾಗೂ ಈರ್ವರು ಉಪನ್ಯಾಸಕಿಯರು ಮುಖ್ಯ ಅತಿಥಿ-ಯಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಇದ್ದಗಣ್ಯರೆಲ್ಲರೂ ಸಸಿಗೆ ನೀರುಹಾಕುವಮೂಲಕಕಾರ್ಯಕ್ರಮ ಉದ್ಘಾಟಿಸಿದರು.ವಿಧ್ಯಾರ್ಥಿಗಳು ಪಠ್ಯದ ಜೊತೆಗೆ ಸಾಹಿತ್ಯ ಹಾಗೂ ಜೀವನಾನುಭವ ಪಡೆಯಲು ಸಾಹಿತ್ಯ ಸಂಗೀತ ಕಲೆ ಸಂಸ್ಕೃತಿ ಬಗ್ಗೆ ತಿಳಿದುಕೊಂಡಿರಬೇಕು.ಇದು ಯಾವ ವಿವಿಯೂ ಕಲಿಸುವುದಿಲ್ಲ ಆ ಕಾರಣ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದ ಮೂಲಕ ಜೀವನಾನುಭವ ಗಳಿಸಿದರೆ ಬದುಕಿನಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಸಾಧ್ಯ ಆಗುತ್ತದೆ ಎಂದುಲೇಖಕಡಾ.ಸಿದ್ಧರಾಮ ಹೊನ್ನಲ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ನೂರಾರು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರುಭಾಗವಹಿಸಿದ್ದರು
ಕಲ್ಬುರ್ಗಿ ಸುದ್ದಿ ನಾಗರಾಜ್ ದಂಡಾವತಿ