ಕಲ್ಯಾಣ ಕರ್ನಾಟಕದ ಸಾಹಿತ್ಯ ಶ್ರೇಷ್ಠವಾದುದು : ಮಾಲೀಕಯ್ಯ ಗುತ್ತೇದಾರ್
ಕಲ್ಯಾಣ ಕರ್ನಾಟಕದ ಸಾಹಿತ್ಯ ಶ್ರೇಷ್ಠವಾದುದು : ಮಾಲೀಕಯ್ಯ ಗುತ್ತೇದಾರ್
ಕನಬುರಗಿ : ಕಲ್ಯಾಣ ಕರ್ನಾಟಕ ಭಾಗದ ಸಾಹಿತಿಗಳು ಶ್ರೇಷ್ಠ ಸಾಹಿತ್ಯ ರಚನೆ ಮಾಡಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಮಾನವಾಗಿ ಬೆಳೆಯುವ ಶಕ್ತಿ ಹೊಂದಿದ್ದಾರೆ ಎಂದು ಮಾಜಿ ಸಚಿವರಾದ ಮಾಲೀಕಯ್ಯ ವಿ. ಗುತ್ತೇದಾರ್ ಹೇಳಿದರು.
ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಫೆಬ್ರವರಿ 16ರಂದು ಕಾವ್ಯಧೇನು ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಈ ಭಾಗದ ಸಾಹಿತ್ಯ ತೌಲನಿಕವಾಗಿ ಅತ್ಯಂತ ಶ್ರೇಷ್ಠವಾಗಿ ಮೂಡಿಬಂದಿದೆ. ಇದಕ್ಕೆ ವಚನಕಾರರು ಮತ್ತು ದಾಸರು ಪ್ರೇರಣೆಯಾಗಿದ್ದು ಈ ಭಾಗದ ಸಾಹಿತಿಗಳಿಗೆ ರಾಷ್ಟ್ರ ಮತ್ತು ವಿಶ್ವಮಟ್ಟದ ಸ್ಥಾನಮಾನ ಲಭಿಸಂತಾಗಲಿ. ಕವಿಗಳು ತಮ್ಮ ಕವಿತೆಗಳ ಮೂಲಕ ಅದ್ಭುತ ಪ್ರತಿಭಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದು ಇದಕ್ಕೆ ಡಾ. ರಾಜಕುಮಾರ್ ಅವರ ಅಭಿನಯದ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕಾಳಿದಾಸ ತನ್ನ ಕವಿತೆಯ ಮೂಲಕ ಭೋಜರಾಜನ ಮನೆಗೆದ್ದ ಸನ್ನಿವೇಶ ಆದರ್ಶಪ್ರಾಯವಾದುದು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತೇಗಲತಿಪ್ಪಿ ನೇತೃತ್ವದಲ್ಲಿ ಕ್ರಿಯಾಶೀಲವಾಗಿ ಸಾಹಿತ್ಯಕೆಲಸ ಮಾಡುತ್ತಿರುವುದು ಶ್ಲಾಘನೀಯ ವಿಷಯ ಎಂದು ಹೇಳಿದರು. ಸಮ್ಮೇಳನದ ಸರ್ವಾಧ್ಯಕ್ಷರಾದ ಮುಡಬಿ ಗುಂಡೇರಾವ್ ಉಪಸ್ಥಿತರಿದ್ದರು. ಕವಿಗೋಷ್ಠಿ ಅಧ್ಯಕ್ಷತೆಯನ್ನು ಆಕಾಶವಾಣಿ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ವಹಿಸಿದ್ದರು. ಪ್ರತಿ ಮಾಜಿ ಸಚಿವ ಮಾಲೀಕರಿಗೆ ಗುತ್ತೇದಾರ್ ಅವರಿಗೆ ಕಸಾಪ ಜಿಲ್ಲಾಧ್ಯಕ್ಷರಾದ ವಿಜಯಕುಮಾರ್ ತೇಗಲತಿಪ್ಪಿ ಮರಳಿಕೆ ನೀಡಿ ವಿಶೇಷ ಸನ್ಮಾನ ಮಾಡಿದರು. ಶಿವರಾಜ ಅಂಡಗಿ, ಧರ್ಮಣ್ಣ ಎಚ್ ದನ್ನಿ, ಸಿದ್ದಲಿಂಗ ಬಾಳಿ ಮತ್ತಿತರರು ಉಪಸ್ಥಿತರಿದ್ದರು.
