ಪಂಚ ಗ್ಯಾರಂಟಿ ಯೋಜನೆಗಳ ಸರಿಯಾಗಿ ತಲುಪುತ್ತಿಲ್ಲ : ಕುಸನೂರ ಗ್ರಾಮಸ್ಥರ ಆಕ್ರೋಶ

ಪಂಚ ಗ್ಯಾರಂಟಿ ಯೋಜನೆಗಳ ಸರಿಯಾಗಿ ತಲುಪುತ್ತಿಲ್ಲ : ಕುಸನೂರ ಗ್ರಾಮಸ್ಥರ ಆಕ್ರೋಶ

ಪಂಚ ಗ್ಯಾರಂಟಿ ಯೋಜನೆಗಳ ಸರಿಯಾಗಿ ತಲುಪುತ್ತಿಲ್ಲ : ಕುಸನೂರ ಗ್ರಾಮಸ್ಥರ ಆಕ್ರೋಶ

ಕಲಬುರಗಿ: ಕರ್ನಾಟಕ ರಾಜ್ಯದಲ್ಲಿ ಪಂಚ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕುವ ಮೂಲಕ ಕೆಲಸ ಮಾಡುತ್ತಿದೆ ಎಂದು ಕುಸನೂರ ಗ್ರಾಮಸ್ಥರಾದ ಮಂಜುನಾಥ ಬರಗಾಲಿ ಅವರು ಆಕ್ರೋಶ ವ್ಯಕ್ತಪಡಿಸಿದರು.

          ಈ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಮನವಿ ಮಾಡಿರುವ ಅವರು,ರಾಜ್ಯದ ಜನರಿಗೆ ಗೃಹ ಜ್ಯೋತಿ ಯೋಜನೆಯ ಮೂಲಕ ಪ್ರತಿ ತಿಂಗಳು 200 ಯುನಿಟ್‌ಗಳವರೆಗೂ ಉಚಿತವಾಗಿ ವಿದ್ಯುತ ನೀಡುತ್ತೇವೆ ಎಂದು ಹೇಳಿರುತ್ತಾರೆ.ಆದರೆ ಕುಸನೂರ ಗ್ರಾಮದ ಜನರಿಗೆ ವಿದ್ಯುತ ಬಿಲ್‌ಗಳನ್ನು ನೋಡಿ ಕರೆಂಟ ಶಾಕ್ ಹೊಡೆದಂತಾಗಿದೆ. ಪ್ರತಿಯೊಬ್ಬ ವಿದ್ಯುತ ಬಳಕೆದಾರನಿಗೆ 30 ಸಾವಿರದಿಂದ 40 ಸಾವಿರವರೆಗೂ ವಿದ್ಯುತ್ ಬಿಲ್‌ಗಳನ್ನು ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಅಧಿಕಾರಿಗಳು ನೀಡಿರುತ್ತಾರೆ. ಕಡು ಬಡವರು ಹಾಗೂ ದಿನಗೂಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ರೀತಿ ಬಿಲ್‌ಗಳನ್ನು ನೀಡಿದ್ದರೆ, ಜನರು ಯಾರ ಮೊರೆ ಹೋಗಬೇಕು ಎಂಬುದು ಜನರ ಅಭ್ರಿಪಾಯ. ಈ ಗ್ರಾಮದ ಜನರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು ಕೂಡಾ ಸ್ಥಳಕ್ಕೆ ಜೆಸ್ಕಾಂ ವಿಭಾಗದ ಅಧಿಕಾರಗಳು ಬಂದು ಭೇಟಿಮಾಡಿ ಎರಡು ದಿನಗಳವರೆಗೆ ಕಾಲವಕಾಶ ನೀಡಬೇಕೆಂದು ಕೇಳಿಕೊಂಡು ಹೋಗಿರುತ್ತಾರೆ. ಅದಷ್ಟ ಬೇಗ ಜನರ ಸಮಸ್ಯೆಗೆ ಸಹಕರಿಸಬೇಕು ಇಲ್ಲದ್ದಿದರೆ ಹೋದಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಅವರು ತಿಳಿಸಿದ್ದಾರೆ.

      ಈ ಸಂದರ್ಭದಲ್ಲಿ ಹಾಜಿ ಪಾಶ,ರೇವಣಸಿದ್ದ ಚೇಗಂಟಿ,

ಉದಯಕುಮಾರ ಹಾದಿಮಾನಿ,ಅಂಬರಾಯ ತಲ್ವಾರ ಸೇರಿದಂತೆ ಇತರರು ಇದ್ದರು.