ಕಲಬುರಗಿ: ಶ್ರೀ ಶಿವಶರಣ ಮಾದರ ಚೆನ್ನಯ್ಯ ಜಯಂತೋತ್ಸವಕ್ಕೆ ಜಿಲ್ಲಾಧ್ಯಕ್ಷರಾಗಿ ಚಂದ್ರಕಾಂತ ಕೆ. ನಾಟೀಕಾರ ಆಯ್ಕೆ

ಕಲಬುರಗಿ: ಶ್ರೀ ಶಿವಶರಣ ಮಾದರ ಚೆನ್ನಯ್ಯ ಜಯಂತೋತ್ಸವಕ್ಕೆ ಜಿಲ್ಲಾಧ್ಯಕ್ಷರಾಗಿ ಚಂದ್ರಕಾಂತ ಕೆ. ನಾಟೀಕಾರ ಆಯ್ಕೆ

ಕಲಬುರಗಿ: ಶ್ರೀ ಶಿವಶರಣ ಮಾದರ ಚೆನ್ನಯ್ಯ ಜಯಂತೋತ್ಸವಕ್ಕೆ ಜಿಲ್ಲಾಧ್ಯಕ್ಷರಾಗಿ ಚಂದ್ರಕಾಂತ ಕೆ. ನಾಟೀಕಾರ ಆಯ್ಕೆ

ನಗರದ ಗುಲಾಬ ಬಾಡಿ ಬಡಾವಣೆಯ ಸಮುದಾಯ ಭವನದಲ್ಲಿ ನಡೆದ ಮಾದಿಗ ಸಮಾಜದ ಸಭೆಯಲ್ಲಿ ಶ್ರೀ ಶಿವಶರಣ ಮಾದರ ಚೆನ್ನಯ್ಯನವರ ೯೭೬ನೇ ಜಯಂತಿ ಉತ್ಸವದ ಅಂಗವಾಗಿ ಸಮಾರಂಭದ ಜಿಲ್ಲಾ ಅಧ್ಯಕ್ಷರಾಗಿ ಚಂದ್ರಕಾಂತ ಕೆ. ನಾಟೀಕಾರರನ್ನು ಏಕಮತದಿಂದ ಆಯ್ಕೆ ಮಾಡಿಸಲಾಯಿತು.

ಸಭೆಯನ್ನು ಶ್ಯಾಮ್ ನಾಟೇಕರ್, ಪರಮೇಶ್ವರ್ ಖಾನಾಪುರ್, ರಾಜು ವಾಡೇಕರ್, ದಶರಥ ಕಲಗುರ್ತಿ, ಬಾಬು ಸುಂಠಣ, ಲಿಂಗರಾಜ್ ತಾರಫೈಲ್, ನಾಗರಾಜ ಗುಂಡಗುರ್ತಿ, ರಾಮೇಶ ವಾಡೇಕರ್ ಹಾಗೂ ಗೋಪಿಕೃಷ್ಣ ಗುಡೆನವರ್ ಸೇರಿದಂತೆ ಸಮಾಜದ ಹಿರಿಯರು ಕೂಡಿ ನಡೆಸಿದರು.

ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಚಂದ್ರಕಾಂತ ನಾಟೀಕಾರ ಅವರು ನಗರದ ಡಾ. ಬಾಬು ಜಗಜೀವನರಾಮ, ಡಾ. ಬಾಬಾ ಸಾಬೇಬ ಅಂಬೇಡ್ಕರ್ ಮತ್ತು ಶ್ರೀ ಬಸವೇಶ್ವರರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಕಂಠೆಪ್ಪ ಮಾಸ್ಟರ್, ಸಿದ್ದಲಿಂಗ ಕಟ್ಟಿಮನಿ, ತಿಮ್ಮಣ್ಣಾ ಕುಂಬಾರಹಳ್ಳಿ, ನಾಗರಾಜ ಮುದನಾಳ, ಶರಣು ಪಗಲಾಪೂರ, ರಮೇಶ ಕಟ್ಟಿಮನಿ, ಮಲ್ಲಿಕಾರ್ಜುನ ಸಿಂಗೆ, ಅಂಬಣ್ಣಾ ಕಿಣಗಿಕರ್, ಪರಶುರಾಮ ನಾಟೀಕಾರ, ರಾಜು ಎಸ್. ಕಟ್ಟಿಮನಿ, ಮಲ್ಲಿಕಾರ್ಜುನ ಜಿನಕೇರಿ, ಸಚಿನ್ ಕಟ್ಟಿ, ರಾಹುಲ್ ಮೇತ್ರೆ, ಹಣಮಂತ ಅಂಕಲಗಿಕರ, ಮಂಜುನಾಥ್ ಲೆಂಗಟಿ, ಪ್ರಕಾಶ ಮಾಳಗೆ, ಚಂದಪ್ಪ ಕಟ್ಟಿಮನಿ, ಬಂಡೇಶ್ ರತ್ನಡಗಿ, ಶ್ರೀಮಂತ ಭಂಡಾರಿ, ಮಾರಲಿಂಗ ಅಣಗಿ, ಮಲ್ಲಿಕಾರ್ಜುನ್ ಸರಡಗಿ, ಸೈಬಣ್ಣ ಗಡೆಸೂರ್, ವಿನೋದ್, ಸತೀಶ್ ನೀಲೂರ್ ಹಾಗೂ ಅನೇಕ ಯುವಕರು ಮತ್ತು ಸಮಾಜದ ಕಾರ್ಯಕರ್ತರು ಭಾಗವಹಿಸಿದ್ದರು.

ಮಾದಿಗ ಸಮಾಜದ ಏಕತೆ, ಸಮಾಜೋನ್ನತಿ ಮತ್ತು ಯುವಜನರ ಸಬಲೀಕರಣಕ್ಕಾಗಿ ಮುಂದಿನ ಜಯಂತಿ ಉತ್ಸವವನ್ನು ಭವ್ಯವಾಗಿ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.