ಶಿಕ್ಷಣ ಪ್ರೇಮಿ ದಿಶಾ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಖಜುರ್ಗಿ"

"ಶಿಕ್ಷಣ ಪ್ರೇಮಿ ದಿಶಾ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಖಜುರ್ಗಿ"
ಲೇಖಕರು ಡಾ. ವಿದ್ಯಾಸಾಗರ ದಣ್ಣೂರ, ಉಪನ್ಯಾಸಕರು ಕಲಬುರಗಿ.
ಕಲ್ಯಾಣ ಕರ್ನಾಟಕ ಪ್ರದೇಶವಾದ ಈ ನೆಲ, ಶರಣರು, ಸಂತರು, ತತ್ವಪದಕಾರರು ಹಾಗೂ ಸೂಫಿಗಳ ಸೌಹಾರ್ದ ಭಾವೈಕ್ಯತೆಯ ನೆಲವಾಗಿದೆ. ಈ ನೆಲವು ಶಿಕ್ಷಣ ಮತ್ತು ಅನ್ನದಾಸೋಹದ ನೆಲ ಕೂಡ ಹೌದು. ಇಂತಹ ನೆಲದಲ್ಲಿ ಜನಿಸಿದ ಶಿವಾನಂದ ಖಜುರ್ಗಿ ಅವರು ಮೂಲತ: ಆಳಂದ ತಾಲೂಕಿನ ಜವಳಿ (ಡಿ) ಗ್ರಾಮದವರು. ಶಿಕ್ಷಕರಾದ ಸಿದ್ರಾಮಪ್ಪ ಹಾಗೂ ಆದರ್ಶ ಗೃಹಣಿ ಶ್ರೀಮತಿ ಜಗದೇವಿಯವರ ಮಗನಾಗಿ ೦5-02 1973 ರಲ್ಲಿ ಜನಿಸಿದರು. ತಂದೆ ಶಿಕ್ಷಕ ವೃತ್ತಿಯನ್ನು ಮಾಡುವ ಕಾರಣಕ್ಕೆ ಮೊದಲಿನಿಂದಲೂ ಶಿಕ್ಷಣ ಕ್ಷೇತ್ರದ ಕುರಿತು ಆಸಕ್ತಿಯನ್ನು ಹೊಂದಿದ್ದಾರೆ. ಸುಸಂಸ್ಕೃತ ಕುಟುಂಬದಲ್ಲಿ ಹುಟ್ಟಿದ ಇವರು ಹಲವಾರು ಮಾನವೀಯ ಮೌಲ್ಯಗಳು ಅಳವಡಿಸಿಕೊಂಡು ಬದುಕುವುದನ್ನು ರೂಢಿಸಿಕೊಂಡು ನೈತಿಕ ಪಥದಲ್ಲಿ ಪಯಣ ಮಾಡುತ್ತಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಒಂದನೇ ತರಗತಿಯಿಂದ ನಾಲ್ಕನೇ ತರಗತಿವರೆಗೆ ಗಾಣಗಾಪುರದಲ್ಲಿ ಮುಗಿಸಿದ್ದಾರೆ. ನಂತರದ ಶಿಕ್ಷಣವನ್ನು ಕಲಬುರಗಿ ಶ್ರೀ ಶರಣಬಸವೇಶ್ವರ ಪ್ರಾಥಮಿಕ, ಪ್ರೌಢ ಶಿಕ್ಷಣ, ಪಿಯುಸಿ ಪದವಿ ಪೂರ್ವ ಶಿಕ್ಷಣ ಸಂಯುಕ್ತ ಕಾಲೇಜು, ಪದವಿ ಶಿಕ್ಷಣ ಶ್ರೀ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ ಕಲಬುರಗಿ, ಸ್ನಾತಕೋತ್ತರ ಪದವಿ ಎಂ.ಎಸ್ಸಿ. ಗಣಿತ ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ ಪಡೆದಿದ್ದಾರೆ. ಇಪ್ಪತ್ತು ವರ್ಷಗಳ ಕಾಲ ಉಪನ್ಯಾಸಕ ವೃತ್ತಿಯನ್ನು ಸಂಪೂರ್ಣ ಭಾವದಿಂದ ನಿಭಾಯಿಸಿರುವ ಹೆಮ್ಮೆ ಇವರದ್ದು. ಸರಳವಾಗಿ ಗಣಿತ ಕಲಿಸುವ ಉಪನ್ಯಾಸಕ ಎಂದು ಕಲಬುರಗಿಯಲ್ಲಿ ಚಿರಪರಿಚಿತರಾಗಿದ್ದಾರೆ. "ಶಿವಾನಂದ ಖಜುರ್ಗಿ ಎಂದರೆ ಗಣಿತ, ಗಣಿತ ಅಂದರೆ ಶಿವಾನಂದ ಖಜುಗಿ೯" ಎಂಬ ವ್ಯಾಖ್ಯಾನ ಕಲಬುರಗಿ ಪರಿಸರದಲ್ಲಿ ಕೇಳಿ ಬರುತ್ತದೆ. ಅದೇ ಸಂದರ್ಭದಲ್ಲಿ ಮನೆ ಪಾಠದ ಮೂಲಕ ಹಲವಾರು ಬಡ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚುವುದರ ಮೂಲಕ ಅವರ ಬದುಕಿಗೆ ದಾರಿದೀಪ ಆಗಿದ್ದಾರೆ. ಜಿಲ್ಲೆಯಾದ್ಯಂತ ಅಪಾರ ಶಿಷ್ಯ ಸಮೂಹ ಹೊಂದಿದ ನೆಚ್ಚಿನ ಉಪನ್ಯಾಸಕರಾಗಿದ್ದಾರೆ. ತನ್ನದೇ ಆದ ಶೈಲಿಯ ಮೂಲಕ ಗಣಿತ ವಿಷಯದ ಇವರ ಮನೆಯ ಪಾಠ ವಿದ್ಯಾರ್ಥಿಗಳಿಗೆ ನೆಚ್ಚಿ ಜಿಲ್ಲೆಯಾದ್ಯಂತ ಶಿಷ್ಯ ಸಮೂಹದ ಗೌರವ ಮತ್ತು ಮನ್ನಣೆಗೆ ಪಾತ್ರರಾಗಿದ್ದಾರೆ. ಇಪ್ಪತ್ತು ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದನ್ನು ಇನ್ನಷ್ಟು ವ್ಯಾಪಕಗೊಳಿಸುವುದರ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಇನ್ನು ಹೆಚ್ಚು ಕೆಲಸ ಮಾಡಲು ಸಾಧ್ಯ ಎಂಬ ಭಾವದಿಂದ ಶಿವಾನಂದ ಖಜುರ್ಗಿ ಅವರು ತಮ್ಮದೇ ಆದ ಸಂಸ್ಥೆ ಒಂದನ್ನು ಆರಂಭಿಸಲು ಸಂಕಲ್ಪ ಮಾಡುತ್ತಾರೆ. ಇದರ ಉದ್ದೇಶವೇ ಈ ಭಾಗದ ವಿದ್ಯಾರ್ಥಿಗಳ ಹಾಗೂ ಪ್ರಮುಖವಾಗಿ ಬಡ ಮಕ್ಕಳ ಬದುಕು ಬೆಳಗಿಸುವುದು ಆಗಿದೆ. ಈ ಸಂಕಲ್ಪದಿಂದ ಆಗಿಯೇ ಸಮಾನ ಮನಸ್ಕರೆಲ್ಲರೂ ಒಗ್ಗೂಡಿ "ಸಂಕಲ್ಪ" ಸಂಸ್ಥೆ ಹುಟ್ಟು ಹಾಕಿ, ಆ ಮೂಲಕ " ದಿಶಾ" ಎಂಬ ಹೆಸರಿನಲ್ಲಿ ಪಿ. ಯು. ವಿಜ್ಞಾನ ಕಾಲೇಜು 2015 ರಲ್ಲಿ ಆರಂಭಿಸಲಾಗುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಉದ್ಯಮವಾಗಿ ನಿರ್ಮಾಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಬಡವರು ಬಡತನದಿಂದ ಹೊರಬರಲು ಇರುವ ಏಕೈಕ ಮಾರ್ಗ ಶಿಕ್ಷಣವೇ ಆಗಿದೆ ಎಂಬುದನ್ನು ಅರಿತು ಆ ನಿಟ್ಟಿನಲ್ಲಿ ನಡೆದು ಇದೊಂದು ಮಕ್ಕಳ ಬದುಕು ಕಟ್ಟುವ, ಆ ಮಕ್ಕಳು ತಮ್ಮ ಬದುಕು ಕಟ್ಟಿಕೊಳ್ಳುವುದರ ಮೂಲಕ ಇಡೀ ಅವರ ಕುಟುಂಬವೇ ನೆಮ್ಮದಿಯಾಗಿ ಬದುಕುವಂತೆ ಆಗುತ್ತದೆ ಎಂಬ ದೂರ ದೃಷ್ಟಿಕೋನದಿಂದ ಹಗಲಿರುಳು ಶ್ರಮಿಸುವ ಶ್ರಮ ಜೀವಿ ಆಗಿದ್ದಾರೆ. "ಯಾವಾಗಲು ನನ್ನ ಕಣ್ಣ ಮುಂದೆ ವಿದ್ಯಾರ್ಥಿಗಳ ಭವಿಷ್ಯವೇ ಇರುತ್ತದೆ ಹೊರತು ಮತ್ತೇನೂ ಅಲ್ಲ" ಎಂಬ ಅವರ ಮಾತು ವಿದ್ಯಾರ್ಥಿಗಳ ಬದುಕಿನ ಕುರಿತ ಕಾಳಜಿಯನ್ನು ಗೋಚರಿಸುತ್ತದೆ. "ಶಿಕ್ಷಣ ಮತ್ತು ತಿನ್ನುವ ಆಹಾರ ಎಂದಿಗೂ ಕಲುಷಿತವಾಗಬಾರದು" ಎಂಬ ಮಾತು ಅವರ ಪ್ರಾಮಾಣಿಕತೆಯನ್ನು ಸಾರಿ ಹೇಳುತ್ತದೆ. 'ಸಮಯಕ್ಕಿಂತ ಹಣ ದೊಡ್ಡದಲ್ಲ' ಎನ್ನುವ ಅವರ ವಿಚಾರದ ಕಾರಣಕ್ಕೆ ವಿದ್ಯಾರ್ಥಿಗಳ ಒಳಿತಿಗಾಗಿ ದೇಶದ ಮೂಲೆ ಮೂಲೆಗಳಿಂದ ಹಲವಾರು ನುರಿತ ಉಪನ್ಯಾಸಕರನ್ನು ಕರೆಸಿ ಸಮಯಕ್ಕೆ ಸರಿಯಾಗಿ ಯಾವ ಜ್ಞಾನದ ಅವಶ್ಯಕತೆ ಇರುತ್ತದೆ, ಅದನ್ನು ಉಣಬಡಿಸುವ ತವಕ ಮತ್ತು ಮನಸ್ಸು ವಿದ್ಯಾರ್ಥಿಗಳ ಭವಿಷ್ಯದ ಕನಸು ನನಸು ಮಾಡುವ ಅವರ ವಿದ್ಯಾರ್ಥಿಗಳ ಕುರಿತ ಕಾಳಜಿಯನ್ನು ಹೇಳುತ್ತದೆ. ಜಿಲ್ಲೆಯಾದ್ಯಂತ ಹಲವಾರು ಶಾಲೆ ಕಾಲೇಜುಗಳ ಕಾರ್ಯಕ್ರಮಗಳ ಅಹ್ವಾನಗಳಿಗೆ ಸ್ಪಂದಿಸಿ ಹಲವು ಒತ್ತಡಗಳ ಮಧ್ಯವೇ ಹೋಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯದ ಜೊತೆಗೆ ವಿದ್ಯಾರ್ಥಿಗಳು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಬೇಕಾಗುವ ಹಲವಾರು ನೈತಿಕ ಮೌಲ್ಯಗಳು ಹಾಗೂ ಸಂಸ್ಕಾರದ ಪಾಠಗಳು ನೀಡುವುದರ ಮೂಲಕ ಸಂಸ್ಕಾರ ಮತ್ತು ಸಜ್ಜನಿಕೆಯ ವಿದ್ಯಾರ್ಥಿಗಳನ್ನಾಗಿಸುವ ಕಾರ್ಯ ಮಾಡುತ್ತಿದ್ದಾರೆ. ಇವರ ಸಾಮಾಜಿಕ ಸೇವೆ ಮತ್ತು ಶಿಕ್ಷಣ ಸೇವೆ ನಿಸ್ವಾರ್ಥದಿಂದ ಪ್ರಾಮಾಣಿಕವಾಗಿ ನಿಭಾಯಿಸಿಕೊಂಡು ಬರುತ್ತಿರುವುದರಿಂದಲೇ ಅವರಿಗೆ ಈಗಾಗಲೇ ಹಲವಾರು ಪ್ರಶಸ್ತಿಗಳು ಮೂಡಿಗೆರೆಸಿಕೊಂಡಿದ್ದಾರೆ. "ಸಾಹಿತ್ಯ ಸಾರಥಿ "ಶಿಕ್ಷಣ ರತ್ನ" "ಶಂಕರ ಶ್ರೀ" "ಯುವ ಚೇತನ" "ವಿದ್ಯಾಧರ" ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಸಾಹಿತ್ಯ, ಸಂಸ್ಕೃತಿ, ಭಾಷೆಯ ಕುರಿತ ಇವರ ಜ್ಞಾನ ಶಕ್ತಿ ಇವರನ್ನು ಇನ್ನಷ್ಟು ಸೂಕ್ಷ್ಮ ಸಂವೇದನೆಯ ವ್ಯಕ್ತಿಯನ್ನಾಗಿಸಿವೆ. ಇನ್ನೊಬ್ಬರ ಕಷ್ಟಗಳಿಗೆ ಮರುಗುವ, ಕೊರಗುವ, ಹಳಹಳಿಸುವ, ತಕ್ಷಣ ಸ್ಪಂದಿಸುವ ಕರುಣಾ ಜೀವಿಯಾಗಿಸಿವೆ. ಶಿಕ್ಷಣ ದಾಸೋಹದ ಜೊತೆಗೆ ಅನ್ನ ದಾಸೋಹದ ಭಾವ ಇವರದಾಗಿದೆ. ಶಿಕ್ಷಣ ಮತ್ತು ಅನ್ನ ದಾಸೋಹದ ಈ ಎರಡು ಸಂದರ್ಭಗಳು ಅವರ ಖುಷಿಯನ್ನು ಇಮ್ಮಡಿಗೊಳಿಸುತ್ತವೆ. ಅವರು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಉಣಬಡಿಸುವುದರಲ್ಲಿ ಕಾಣುವ ಖುಷಿ ಮಿತಿಯಿಲ್ಲದು.
ತಾನು ಮಾಡುವ ಊಟ ಎಲ್ಲಾರೂ ಊಟ ಮಾಡಬೇಕು ಎಂಬ ಭಾವ ಇವರದು. ತಮ್ಮ ಸಂಸ್ಥೆಯಲ್ಲಿ ಊಟವನ್ನು ಉಣಬಡಿಸುವುದಲ್ಲದೆ ಜಿಲ್ಲೆಯಾದ್ಯಂತ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಸಮಾಜಮುಖಿ, ಇನ್ನಿತರ ಜೀವಪರವಾದ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿರುವ ಸಂದರ್ಭದಲ್ಲಿಯೂ ಕೂಡ ಊಟವನ್ನು ನೀಡಿ ಅವರ ತೃಪ್ತಿಯಲ್ಲಿ ಇವರು ತೃಪ್ತಿಯನ್ನು ಕಾಣುತ್ತಾರೆ. ಇಷ್ಟಕ್ಕೆ ನಿಲ್ಲದೆ ಶರಣರ, ಸಂತರ ಆಶಯದಂತೆ ತನು-ಮನ, ಧನ ಹೀಗೆ ಎಲ್ಲಾ ರೀತಿಯ ಸಹಾಯವನ್ನು ಮಾಡುವ ಉದಾರವಾದಿ ಆಗಿದ್ದಾರೆ. ಶರಣರ, ಸಂತರ, ಆಶಯಗಳಂತೆ ಯಾವಾಗಲೂ ಶಿಕ್ಷಣ ಮತ್ತು ಅನ್ನ ದಾಸೋಹ ಮೈಗೂಡಿಸಿಕೊಂಡು ಆ ಪಥದಲ್ಲಿ ನಡೆಯುತ್ತಿರುವ ಸರಳ, ಸಜ್ಜನ ಮತ್ತು ನೈತಿಕ ಪ್ರಜ್ಞೆಯ ಪ್ರತೀಕ ಶರಣಜೀವಿ ಶಿವಾನಂದ ಖಜುರ್ಗಿ ಅವರಿಗೆ 'ಲೋಕ ಶಿಕ್ಷಣ ಟ್ರಸ್ಟ್' "ಸಂಯುಕ್ತ ಕರ್ನಾಟಕ" ದ ಕಲ್ಬುರ್ಗಿ ಅವೃತ್ತಿ 25ರ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ದಿಶಾ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಖಜುರ್ಗಿ ಅವರಿಗೆ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಕ್ಷೇತ್ರಕ್ಕೆ ಕಳೆದ ಮೂವತ್ತು ವರ್ಷಗಳ ಕಾಲ ಪ್ರಾಮಾಣಿಕತೆ ಹಾಗೂ ಉತ್ಸಾಹದಿಂದ ನೀಡುತ್ತಿರುವ ಕೊಡುಗೆ ಹಾಗೂ ಸಾಮಾಜಿಕ ಕಳಕಳಿ ಪರಿಗಣಿಸಿ
"ಶಿಕ್ಷಣ ಬಂಧು" ಪ್ರಶಸ್ತಿ ನೀಡಿ ಪುರಸ್ಕರಿಸಿರುವುದು, ದಿಶಾ ಕಾಲೇಜಿನ ವಿದ್ಯಾರ್ಥಿಗಳಿಗೂ, ಉಪನ್ಯಾಸಕ ವೃಂದಕ್ಕೂ, ಹಾಗೂ ಅವರ ಅಪಾರ ಸ್ನೇಹ ಬಳಗಕ್ಕೂ ಅತಿ ಸಂತಸವನ್ನು ತಂದಿದೆ.