ವಿದ್ಯಾರ್ಥಿಗಳಲ್ಲಿ ಶಿಸ್ತು ಸಮಯಪ್ರಜ್ಞೆ: ಶಿವಶರಣಪ್ಪ ಮೂಳೆಗಾಂವ್

ವಿದ್ಯಾರ್ಥಿಗಳಲ್ಲಿ ಶಿಸ್ತು ಸಮಯಪ್ರಜ್ಞೆ: ಶಿವಶರಣಪ್ಪ ಮೂಳೆಗಾಂವ್

ವಿದ್ಯಾರ್ಥಿಗಳಲ್ಲಿ ಶಿಸ್ತು ಸಮಯಪ್ರಜ್ಞೆ: ಶಿವಶರಣಪ್ಪ ಮೂಳೆಗಾಂವ್ 

ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ,ಸಮಯಪ್ರಜ್ಞೆ ,ವಿನಯತೆ ಜೊತೆಗೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ನಿವೃತ್ತ ಜಂಟಿ ನಿರ್ದೇಶಕರಾದ ಶಿವಶರಣಪ್ಪ ಮೂಳೆಗಾಂವ್ ಹೇಳಿದರು.

ನಗರದ ಸತ್ಯಂ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ದ್ವಿತೀಯ ವರ್ಷದ ವಿದ್ಯಾರ್ಥಿಗಳ ವತಿಯಿಂದ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಯೊಂದಿಗೆ ಸಹ ಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬರಬೇಕು. ಓದು ಬರಹ ಪ್ರಾಮಾಣಿಕತೆಯಿಂದ ಮಾಡಿದರೆ ಜೀವನದಲ್ಲಿ ಸಾರ್ಥಕತೆ ಪಡೆಯಬಹುದು ಎಂದು ಶಿವಶರಣಪ್ಪ ಮೂಳೆಗಾಂವ್ ಕರೆ ಕೊಟ್ಟರು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ರಂಗಾಯಣದ ನಿರ್ದೇಶಕರಾದ ಪ್ರಭಾಕರ್ ಜೋಶಿ ಮಾತನಾಡಿ ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಓದಿನಲ್ಲಿ ಕೊಡಬೇಕು ಶಿಕ್ಷಕರ ಹೇಳಿದ ವಿಷಯವನ್ನು ಸರಿಯಾದ ರೀತಿಯಿಂದ ಆಲಿಸಬೇಕು ಪ್ರತಿಯೊಂದು ವಿಷಯವನ್ನು ಓದಿ ಮನನ ಮಾಡಿಕೊಳ್ಳಬೇಕು ಹೆಚ್ಚಿನ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸತ್ಯಂ ಪಿಯು ಕಾಲೇಜಿನ ಪ್ರಾಂಶುಪಾಲ ಬಿ .ಎಚ್. ನಿರಗುಡಿಯವರು ಮಾತನಾಡಿ ವಿದ್ಯಾರ್ಥಿಗಳು ಪ್ರತಿನಿತ್ಯ ತರಗತಿಗಳಿಗೆ ಹಾಜರಾಗಿ ಉಪನ್ಯಾಸಕರು ಹೇಳಿದ ವಿಷಯವನ್ನು ಮನನ ಮಾಡಿಕೊಂಡು ಓದಿನಲ್ಲಿ ಕಠಿಣ ಶ್ರಮವಹಿಸಿ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಕಾಲೇಜಿನ ಕೀರ್ತಿ ತರಬೇಕೆಂದು ಹೇಳಿದರು

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಸಂತೋಷ ಪಿಳ್ಳೆ, ಮಹೇಶ್ ಗಡಗಿ, ಡಾ. ಸುಲೋಚನಾ ಅಂಕಲಗಿ, ರೂಪಾ ಕುಲಕರ್ಣಿ, ನಿರ್ಮಲಾ ಜಾವಳಿ, ರಾಜೆಶ್ರೀ ಸಾಲಿಮಠ. ವಿಶ್ವಜ್ಯೋತಿ ಮಠ, ಕಾಶಿನಾಥ ಪಂಚಾಳ ಅನೇಕರು ಉಪಸ್ಥಿತರಿದ್ದರು. ಪ್ರಥಮ ವರ್ಷದ ವಿದ್ಯಾರ್ಥಿಗಳಾದ ವಿಜಯಲಕ್ಷ್ಮಿ, ಸಮೃದ್ಧಿ, ಐಶ್ವರ್ಯ, ರೇವಣಸಿದ್ಧ, ಶಿವರಾಜ್ ಕಾಲೇಜಿನ ಅನುಭವಗಳನ್ನು ಹೇಳಿಕೊಂಡರು

ಕಾರ್ಯಕ್ರಮದ ನಿರೂಪಣೆ ಮೇಘನಾ ಸ್ವಾಗತ ಲಕ್ಷ್ಮಿ ಪ್ರಾರ್ಥನೆ ಪುಷ್ಪಾ ಹಾಗೂ ವರ್ಷಾ