ಜಯನಗರ ಶಿವಮಂದಿರದಲ್ಲಿ ಅದ್ದೂರಿಯಾಗಿ ನೆರವೇರಿದ ದಾನಮ್ಮ ದೇವಿಯ ಕಲ್ಯಾಣ ಮಹೋತ್ಸವ ಕಾರ್ಯಕ್ರಮ

ಜಯನಗರ ಶಿವಮಂದಿರದಲ್ಲಿ ಅದ್ದೂರಿಯಾಗಿ ನೆರವೇರಿದ ದಾನಮ್ಮ ದೇವಿಯ ಕಲ್ಯಾಣ ಮಹೋತ್ಸವ ಕಾರ್ಯಕ್ರಮ
ಕಲಬುರಗಿ: ಶ್ರಾವಣ ಮಾಸ ನಿಮಿತ್ತ ಜಯನಗರ ಶಿವ ಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಗುಡ್ಡಾಪೂರ ಶ್ರೀ ದಾನಮ್ಮ ದೇವಿಯ ಒಂದು ತಿಂಗಳ ಪುರಾಣ ಕಾರ್ಯಕ್ರಮದ 18ನೆಯ ದಿನವಾದ ಭಾನುವಾರ ಸಂಜೆ ದಾನಮ್ಮನ ಕಲ್ಯಾಣ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ನಗರದ ನಾನಾ ಬಡಾವಣೆಯ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು,ಮಹಿಳೆಯರು, ಮಕ್ಕಳು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.ಶಿವಮಂದಿರದ ಅರ್ಚಕ ಶ್ರೀ ವೀರಯ್ಯ ಮಠಪತಿ ಶಾಸ್ತ್ರೋಕ್ತವಾಗಿ ಶ್ರೀ ದಾನಮ್ಮನ ಮದುವೆ ಕಾರ್ಯ ನಡೆಸಿಕೊಟ್ಟರು.ತೋರಣದಿಂದ ಮಂಟಪ ಅಲಂಕಾರ ಮಾಡಲಾಗಿತ್ತು.ಶ್ರೀ ದಾನಮ್ಮ ಹಾಗೂ ಶ್ರೀ ಸೋಮನಾಥರ ಮೂರ್ತಿಗಳನ್ನು ಸಿಂಗಾರದೊಂದಿಗೆ ಮಂಟಪದಲ್ಲಿ ಕೂರಿಸಲಾಗಿತ್ತು.ಜಯನಗರ ಬಡಾವಣೆಯ ದಂಪತಿಗಳನ್ನು ವಧು ವರರನ್ನಾಗಿ ಮಂಟಪದ ಮುಂದೆ ಕೂರಿಸಿ, ನಂತರ ವಿಧಿ ವಿಧಾನ ಮಂತ್ರ ಘೋಷಣೆ ಮಾಡುವ ಮೂಲಕ ತಾಳಿ ಕಟ್ಟುವ ಕಾರ್ಯ ನಡೆಯಿತು.ಎರಡು ಕಡೆಯ ಬೀಗರಿಗೆ ಬಟ್ಟೆ ಆಯೇರಿ ಮಾಡಲಾಯಿತು.ಇದಕ್ಕೂ ಮೊದಲು ದಂಪತಿಗಳಿಗೆ ಮುತ್ತೈದೆಯರು ಹಾಡುವ ಮೂಲಕ ಎಣ್ಣೆ ಹಚ್ಚುವ ಶಾಸ್ತ್ರ ಜರುಗಿತು.ಮದುವೆಯಲ್ಲಿ ನೂರಾರು ಮಹಿಳೆಯರು,ಹೆಣ್ಣು ಮಕ್ಕಳು ರೇಷ್ಮೆ ಸೀರೆ ತೊಟ್ಟು ಭಾಗವಹಿಸಿದ್ದರು.
ಇದಕ್ಕೂ ಮೊದಲು ಮಾತನಾಡಿದ ಪುರಾಣ ಪಂಡಿತ ವೇದಮೂರ್ತಿ ಶ್ರೀ ತೋಟಯ್ಯ ಶಾಸ್ತ್ರೀಗಳು ಪುರಾಣದ ಘಟ್ಟದಲ್ಲಿ ಬರುವ ಗುಡ್ಡಾಪೂರ ಶ್ರೀ ದಾನಮ್ಮ ದೇವಿಯ ಕಲ್ಯಾಣ ಮಹೋತ್ಸವ ಶಿವಮಂದಿರದಲ್ಲಿ ಹಮ್ಮಿಕೊಂಡಿದ್ದು ವಿಶೇಷ.ಇಂಥ ಅನೇಕ ಕಾರ್ಯಗಳು ಜಯನಗರ ಶಿವ ಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ನಿರಂತರ ನಡೆಯುತ್ತಲೇ ಇದೆ.ಟ್ರಸ್ಟ್ ಕೆಲಸ ಶ್ಲಾಘನೀಯ ಎಂದ ಅವರು ಬೇಡಿ ಬಂದ ಭಕ್ತರಿಗೆ ಬೇಡಿದ ವರವನ್ನು ಕರುಣಿಸುವಳು.ಮಕ್ಕಳಿಲ್ಲದವರಿಗೆ ಮಕ್ಕಳ ಭಾಗ್ಯ ನೀಡುವಳು.ದಾನಮ್ಮ ದೇವಿಯ ಚರಿತ್ರೆ ಅಪಾರವಾದದ್ದು.ಆ ಮಾತೆಯನ್ನು ಎಷ್ಟು ವರ್ಣಿಸಿದರೂ ಸಾಲದು ಎಂದು ಹೇಳಿದರು..
ಟ್ರಸ್ಟ್ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಮಾತನಾಡಿ ಶಿವಮಂದಿರದಲ್ಲಿ ಟ್ರಸ್ಟ್ ಮಹಿಳಾ ಘಟಕದ ಮಹಿಳೆಯರು ನಡೆಸಿಕೊಟ್ಟ ಇಂದಿನ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ಐತಿಹಾಸಿಕವಾಗಿದೆ.ದಾನಮ್ಮ ದೇವಿಯ ಕೃಪೆ ಎಲ್ಲರ ಮೇಲೂ ಇರಲಿ.ಒಂದು ತಿಂಗಳು ಹಮ್ಮಿಕೊಂಡಿರುವ ಪುರಾಣ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಟ್ರಸ್ಟ್ ಪದಾಧಿಕಾರಿಗಳಾದ ವಿರೇಶ ದಂಡೋತಿ.ಬಂಡಪ್ಪ ಕೇಸೂರ,ಸಿದ್ಧಲಿಂಗ ಗುಬ್ಬಿ,ಮಲ್ಲಯ್ಯ ಸ್ವಾಮಿ ಗಂಗಾಧರಮಠ.ಮನೋಹರ ಬಡಶೇಷಿ,ಹಿರಿಯ ಸದಸ್ಯರಾದ ಬಸವರಾಜ ಅನ್ವರಕರ, ಗುರುಪಾದಪ್ಪ ಕಾಂತಾ, ಬಸವರಾಜ ಪುರ್ಮ,ವೀರಪ್ಪ ಹುಡಗಿ, ಮಲ್ಲಿಕಾರ್ಜುನ ಕಲ್ಲಾ,ನಾಗರಾಜ ಖೂಬಾ,ಶಿವಪುತ್ರಪ್ಪ ಮರಡಿ, ಮಲ್ಲಯ್ಯ ಸ್ವಾಮಿ ಬೀದಿಮನಿ,ಮಹಿಳಾ ಘಟಕದ ಪದಾಧಿಕಾರಿಗಳಾದ ಶೈಲಜಾ ವಾಲಿ,ಅನುರಾಧ ಕುಮಾರಸ್ವಾಮಿ, ಸುಜಾತಾ ಭೀಮಳ್ಳಿ, ಸುರೇಖಾ ಬಾಲಕೊಂದೆ, ವಿಜಯಾ ಚವ್ಹಾಣ,ಅನಿತಾ ನವಣಿ,ಲತಾ ತುಪ್ಪದ, ಗೀತಾ ಸಿರಗಾಪೂರ,ವಿಜಯಾ ದಂಡೋತಿ, ಗೀತಾ ಹುಡುಗಿ, ಪಾರ್ವತಿ ಶೆಟ್ಟಿ,ಗಂಗಾ ಅನ್ವರಕರ, ವಿಜಯಲಕ್ಷ್ಮಿ ಪುರ್ಮ,ಶಿವಲಿಲಾ ಬೊಮ್ಮಣ ಸೇರಿದಂತೆ ವಿವಿಧ ಬಡಾವಣೆಗಳ ನೂರಾರು ಮಹಿಳೆಯರು, ಹಿರಿಯರು,ಮಕ್ಕಳು ಭಾಗವಹಿಸಿದ್ದರು.