ಜಗತ್ತೀನ 45 ಭಾಷೆಗಳಿಗೆ ವಚನಗಳನ್ನು ಅನುವಾದಿಸಿದ ಬಸವ ಸಮಿತಿ

ವಚನ ಆಷಾಡ ಪ್ರವಚನ ಮಹಾನ್ ದರ್ಶನಿಕ ಬಸವಣ್ಣ ಸಮಾರೋಪ ಸಮಾರಂಭ
ಜಗತ್ತಿನ 45 ಭಾಷೆಗಳಿಗೆ ವಚನಗಳನ್ನು ಅನುವಾದಿಸಿದ ಬಸವ ಸಮಿತಿ
ಕಲಬುರ್ಗಿ ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ 24ನೇ ದಿನದಂದು ಮಾತನಾಡಿದ ಬೆಳಗಾವಿಯ ಬಸವ ಬೆಳವಿಯ ಚರಂತಿೇಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡುತ್ತಾ , ಬಸವಾದಿ ಶರಣರು ನಿರಾಶವಾದಿಗಳಲ್ಲ ಆಶಾವಾದಿಗಳು 12ನೇ ಶತಮಾನದಲ್ಲಿ ಶರಣರು ಬಿತ್ತಿದ ಅಧ್ಯಾತ್ಮ ಬೀಜ 21ನೇ ಶತಮಾನದಲ್ಲಿ ಫಲವಾಗಿ ಪಲ್ಲವಿಸಿದೆ ನಾವು ಅನುಭವಿಸುತ್ತಿದ್ದೇವೆ .ಪುರೋಹಿತಶಾಹಿತ್ವ ನಮ್ಮ ದೇಶದ ಸಂಸ್ಕೃತಿಯಲ್ಲ , ಶರಣ ಸಂಸ್ಕೃತಿಯೇ ಭಾರತದ ನೈಜ ಸಂಸ್ಕೃತಿ ಯಾಗಿದೆ .ಸೊಲ್ಲಾಪುರದ ಸಿದ್ಧರಾಮೇಶ್ವರರು ತಾನು ನಂಬಿದ ಪೂರ್ವದ ಸಿದ್ಧಾಂತವನ್ನು ತೊರೆದು ಬಸವ ಸಿದ್ದಾಂತವನ್ನು ಒಪ್ಪಿದಂತೆ ಇಂದಿನ ಸಂಪ್ರದಾಯವಾದಿಗಳು ತಮ್ಮ ಪೂರ್ವದ ಸೂತಕವನ್ನು ತೊರೆದು ಬಸವ ಸಿದ್ದಾಂತ ಒಪ್ಪಿಕೊಳ್ಳಬೇಕು .ಶರಣ ಸಿದ್ದಾಂತ ಬರಿ ಹೇಳಲಿಕ್ಕಲ್ಲ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ವಿನೀತ ಭಾವ ಎಲ್ಲರೂ ರೂಡಿಸಿಕೊಳ್ಳಬೇಕು. ಕೂಡಲಸಂಗನ ಶರಣರು ಮನದಿರೆದು ಮಾತನಾಡಿದರೆ ಲಿಂಗವೇ ಕಾಣಬಹುದು .
ಸಮಾರೋಪ ನುಡಿಗಳನ್ನಾಡಿದ ಬೆಂಗಳೂರು ಕೇಂದ್ರ ಬಸವ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ ಜತ್ತಿ ಅವರು ಮಾತನಾಡಿ ಪ್ರಸ್ತುತ ಸಂದರ್ಭದಲ್ಲಿ ಬಸವ ಸಮಿತಿ ನೈಜ ಬಸವ ಸಿದ್ದಾಂತವನ್ನು ಜನರಲ್ಲಿ ಬಿತ್ತುತ್ತಿದೆ, ಬಸವಣ್ಣನವರ ವಚನಗಳನ್ನು ಚೈನಿಸ್, ಜರ್ಮನ್ , ಸ್ಪೇನ್ ಸೇರಿದಂತೆ ದೇಶವಿದೇಶದ 45 ಭಾಷೆಗಳಿಗೆ ವಚನಗಳನ್ನು ಬಸವ ಸಮಿತಿ ಅನುವಾದಿಸಿ ಜಗತ್ತಿನಾದ್ಯಂತ ಶರಣ ಸಿದ್ದಾಂತ ತಲುಪುವಂತೆ ಮಾಡಿದೆ ಎಂದರು
ಸಮಾರೋಪ ಸಮಾರಂಭದಲ್ಲಿ ಒಂದು ತಿಂಗಳಪರ್ಯಂತ ಪ್ರವಚನ ಶ್ರವಣ ಮಾಡಿದ ಶರಣರು ವೇದಿಕೆಯ ಮೇಲೆ ತಮ್ಮ ಅನುಭವ ಹಂಚಿಕೊಂಡರು . ಪ್ರಶ್ನೋತ್ತರ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾದರು .
ಪತ್ರಕರ್ತರಾದ ಸಂಗಮನಾಥ ರೇವತ್ಗಾವ್ ,ಶಿವಶರಣಪ್ಪ ಚೆನ್ನುರವರನ್ನು ಸನ್ಮಾನಿಸಲಾಯಿತು
ಶರಣಬಸವರಾಜ ವೆಂಕಟಾಪುರ ಅವರು 30 ಜನರಿಗೆ ಲಿಂಗ ದೀಕ್ಷೆ ನೀಡಿದರು . ಬೆಳಗಿನ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ 300 ಜನ ಭಾಗಿಯಾಗಿದ್ದರು
ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸ್ವತಿ ಖೂಬಾ , ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ,ನಿವೃತ ನ್ಯಾಯಮೂರ್ತಿಗಳಾದ ಚೆನ್ನಮಲ್ಲಪ್ಪ ಬೆನಕನಹಳ್ಳಿ , ರೇವಣಸಿದ್ದ ಮಹಾಸ್ವಾಮಿಗಳು ರಟ್ಕಲ್ ,ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ . ಶರಣಗೌಡ ಪಾಟೀಲ ಪಾಳಾ ,ಡಾ . ಕೆ ಎಸ್ ವಾಲಿ ,ಬಂಡಪ್ಪ ಕೇಸುರ ಅವರು ಹಾಜರಿದ್ದರು