ಕಾವ್ಯ ಸಂಸ್ಕೃತಿ ಯಾನ’ ಅಧ್ಯಕ್ಷರಾಗಿ ಕವಿ ಅಂಬಲಗೆ ಆಯ್ಕೆ

ಕಾವ್ಯ ಸಂಸ್ಕೃತಿ ಯಾನ’ ಅಧ್ಯಕ್ಷರಾಗಿ ಕವಿ ಅಂಬಲಗೆ ಆಯ್ಕೆ
ಕಲಬುರಗಿಯಲ್ಲಿ ನಡೆಯಲಿರುವ `ಕಾವ್ಯ ಸಂಸ್ಕೃತಿ ಯಾನ’ದ ಸರ್ವಾಧ್ಯಕ್ಷರಾಗಿ ಹಿರಿಯ ಕವಿ ಡಾ.ಕಾಶೀನಾಥ ಅಂಬಲಗಿ ಅವರು ಆಯ್ಕೆಯಾಗಿದ್ದಾರೆ ಎಂದು ಆಯೋಜಕರಾದ ಮಲ್ಲಿಕಾರ್ಜುನ ಮಹಾಮನೆ ಹಾಗೂ ರಾಷ್ಟ್ರಕೂಟ ಸಾಂಸ್ಕೃತಿಕ ಪ್ರತಿಷ್ಠಾನ ಮುಖ್ಯಸ್ಥ ಮಹಿಪಾಲರೆಡ್ಡಿ ಮುನ್ನೂರ ತಿಳಿಸಿದ್ದಾರೆ.
ಬೆಂಗಳೂರಿನ ರಂಗ ಮಂಡಲ ಆಯೋಜಿಸಿದ್ದು, ಸ್ಥಳೀಯ ಸೇಡಂನ ರಾಷ್ಟ್ರಕೂಟ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ಸೆಪ್ಟೆಂಬರ್ 29 ರಂದು ಕಲಬುರಗಿ ನಗರದ ದಿ ಐಡಿಯಲ್ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ಒಂದು ದಿನದ ಕಾವ್ಯ ಯಾನ ನಡೆಯಲಿದೆ.
ಈ ಯಾನವನ್ನು ಕವಿ ಡಾ.ಕಾಶಿ ನಾಥ ಅಂಬಲಗೆ ಅವರು ಮುನ್ನಡೆಸಲಿದ್ದಾರೆ.
ಕಾವ್ಯ ಸಂಸ್ಕೃತಿ ಯಾನದ ಮೊದಲ ಕಾರ್ಯಕ್ರಮವು ಜುಲೈ ತಿಂಗಳಲ್ಲಿ ಚಾಮರಾಜನಗರದಲ್ಲಿ ಆರಂಭವಾಗಿದ್ದು, ಆಗಸ್ಟ್ ತಿಂಗಳಲ್ಲಿ
ಧಾರವಾಡ, ಇದೀಗ ಸೆಪ್ಟೆಂಬರ್ ತಿಂಗಳಲ್ಲಿ ಕಲಾನಿಕೇತನದಲ್ಲಿ ತೃತೀಯ ಕಾವ್ಯ ಸಂಸ್ಕೃತಿ ಯಾನ ಜರುಗಲಿದೆ.
ಸೆ. 29 ರಂದು ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೂ ಕಾವ್ಯ ಸಂಸ್ಕೃತಿ ಯಾನ ನಡೆಯಲಿದ್ದು, ನಾಡಿನ ಲೇಖಕರು,ಭಾಗವಹಿಸುವರು.
ಸಾಹಿತಿಗಳಾದ ಜಿ ಎನ್ ಮೋಹನ, ಹೇಮಾ ಪಟ್ಟಣಶೆಟ್ಟಿ, ಆರ್ ಜಿ ಹಳ್ಳಿ ನಾಗರಾಜ್, ಚನ್ನಪ್ಪ ಅಂಗಡಿ, ಮೂಡ್ನಾಕೂಡು ಚಿನ್ನಸ್ವಾಮಿ, ಭೈರಮಂಗಲ ರಾಮೇಗೌಡ, ರಂಗಸ್ವಾಮಿ ಸಿದ್ದಯ್ಯ ಸೇರಿದಂತೆ ಹಿರಿಯ ಸಾಹಿತಿಗಳು ಡಾ.ಕಾಶಿನಾಥ ಅಂಬಲಗೆ ಅವರನ್ನು ಸರ್ವಾಧ್ಯಕ್ಷರನ್ನಾಗಿ ಮಾಡುವಂತೆ ಸಲಹೆ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.