ಹುಟ್ಟಿದ ಧರ್ಮ ಸಂಸ್ಕಾರ ತಿರಸ್ಕರಿಸಿದ ಬಸವಣ್ಣ

ಹುಟ್ಟಿದ ಧರ್ಮ ಸಂಸ್ಕಾರ ತಿರಸ್ಕರಿಸಿದ ಬಸವಣ್ಣ

ಹುಟ್ಟಿದ ಧರ್ಮ ಸಂಸ್ಕಾರ ತಿರಸ್ಕರಿಸಿದ ಬಸವಣ್ಣ

ಕಲಬುರ್ಗಿ ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ ಎಂಟನೇ ದಿನದಂದು ಮಾತನಾಡಿದ ಗುಲ್ಬರ್ಗ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಜಯಸ್ತ್ರೀ ದಂಡೆ ಅವರು ಮಾತನಾಡುತ್ತಾ , ಬಸವಣ್ಣನವರು ಲಿಂಗಸ್ವಾಯುತ್ತ ಮಾಡಿಕೊಂಡು ಅದರಲ್ಲಿ ಭಕ್ತಿ ನಿಷ್ಠೆ ಶ್ರದ್ಧೆ ಹೊಂದಿದರು . ಇಷ್ಟಲಿಂಗ ಭಕ್ತಿಯಷ್ಟು ಹಿತವಾದ ಭಕ್ತಿ ಇನ್ನೊಂದಿಲ್ಲ .ಇಷ್ಟಲಿಂಗದ ಮೇಲಿನ ಭಕ್ತಿ ವ್ಯವಹಾರಿಕವಾದದಲ್ಲ . ಸ್ಥಾವರ ಲಿಂಗದ ನಿಷ್ಠೆ ವ್ಯವಹಾರಿಕವಾಗಿದೆ .ಇಷ್ಟಲಿಂಗ ಕಟ್ಟಿಕೊಂಡ ಭಕ್ತ ಬೇರಾವ ದೈವಗಳಿಗೆ ಎರಗಬಾರದು .ಇಷ್ಟಲಿಂಗ ನಮ್ಮ ಜೊತೆಗೆ ಇರುವುದರಿಂದ ಅದನ್ನು ನಾವು ಯಾವಾಗ ಬೇಕಾದರೂ ಪೂಜಿಸಬಹುದು ಆರಾಧಿಸಬಹುದು. ಇಷ್ಟಲಿಂಗದ ತೃಪ್ತಿ ಪೂಜೆಯ ಮೂಲಕ ಪಡೆದುಕೊಳ್ಳಬಹುದಾಗಿದೆ . ಲಿಂಗವಂತ ಧರ್ಮದಲ್ಲಿ ಸ್ತ್ರೀ ಪುರುಷ ಭೇದಭಾವ ಇಲ್ಲದೆ ಎಲ್ಲರೂ ಲಿಂಗ ಧರಿಸಬಹುದು ಲಿಂಗ ಪೂಜೆ ಮಾಡಿಕೊಳ್ಳಬಹುದಾಗಿದೆ . ಬಸವಣ್ಣನವರು ಹುಟ್ಟಿದ ಧರ್ಮದಲ್ಲಿ ಸ್ತ್ರೀ ಪುರುಷ ಭೇದ ಭಾವವಿದ್ದು ಬಸವಣ್ಣನವರ ಅಕ್ಕ ಅಕ್ಕನಾಗಮ್ಮನಿಗೆ ಧರ್ಮ ಸಂಸ್ಕಾರ ನೀಡದೆ ಇದ್ದುದರಿಂದ ನನ್ನ ಅಕ್ಕನಿಗೆ ಇಲ್ಲದೆ ಇರುವ ಧರ್ಮ ಸಂಸ್ಕಾರ ನನಗೆ ಬೇಡವೆಂದು ತಿರಸ್ಕರಿಸಿ ಮನೆ ಬಿಟ್ಟು ಹೊರಟರು .

ಇಷ್ಟಲಿಂಗ ಕರಸ್ಥಲದಲ್ಲಿ ಹಿಡಿದುಕೊಂಡು ಅರೆತೆರೆದ ಕಣ್ಣುಗಳಿಂದ ದೃಷ್ಟಿಸಬೇಕು ಲಿಂಗವನ್ನು ನೋಡುತ್ತಾ ನೋಡುತ್ತಾ ಲಿಂಗವೇ ನಾನು ನಾನೆ ಲಿಂಗವೆಂಬ ಸ್ಥಿತಿಗೆ ಶರಣ ಬಂದು ತಲುಪುತ್ತಾನೆ .ವ್ಯಸನಾದಿ ದುರ್ಗುಣ ದುಶ್ಚಟಗಳನ್ನು ತ್ಯಜಿಸಿ ಇಷ್ಟಲಿಂಗ ವ್ಯಸನಿ ಯಾಗಬೇಕು . ಏಕಾಗ್ರತೆ ಇದ್ದರೆ ಮಾತ್ರ ಲಿಂಗದ ಮೇಲೆ ಅಭಿಮಾನ ಹುಟ್ಟುತ್ತದೆ .ಕ್ರಿಯಾ ಸಿದ್ಧಿ ಲಭಿಸುತ್ತದೆ ಎಂದು ಹೇಳಿದರು  

 ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸ್ವತಿ khooba, ಡಾ.ಬಿ.ಡಿ ಜತ್ತಿ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ವೀರಣ್ಣ ದಂಡೆ , ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ . ಶರಣಗೌಡ ಪಾಟೀಲ್ ಪಾಳ ,ಡಾ . ಕೆ ಎಸ್ ವಾಲಿ , ಡಾ. ಎ. ಎಸ್ ಪಾಟೀಲ್ ,ಬಂಡಪ್ಪ ಕೇಸುರ್ ಅವರು ಹಾಜರಿದ್ದರು .