ಲೌಕಿಕ ಸೆಳೆತಗಳಿಗೆ ಬಂಧಿತನಾಗದಿರು - ಹಾರಕೂಡ ಶ್ರೀ

ಲೌಕಿಕ ಸೆಳೆತಗಳಿಗೆ ಬಂಧಿತನಾಗದಿರು - ಹಾರಕೂಡ ಶ್ರೀ
ಲೌಕಿಕ ಸೆಳೆತಗಳಿಗೆ ಬಂಧಿತನಾಗದೆ ಬದುಕುವುದನ್ನು ತಿಳಿದವನ ಜೀವನ ತಿಳಿಯಾಗುತ್ತಾ ಹೋಗುತ್ತದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯ ಪ್ರೌಢ ವಿಭಾಗದ 2016-17ನೇ ಸಾಲಿನ 10ನೇ ಬ್ಯಾಚ್ ವಿದ್ಯಾರ್ಥಿ ಬಳಗದಿಂದ ಆಯೋಜಿಸಿದ ಗುರುವಂದನೆ ಹಾಗೂ 846ನೇ ತುಲಾಭಾರ ಸಮಾರಂಭದ ಪಾವನ ಸಾನಿಧ್ಯ ವಹಿಸಿದ ಶ್ರೀಗಳು, ಕವಿ ವಾಣಿಯಂತೆ ಪ್ರತಿಯೊಬ್ಬರೂ ಹುಟ್ಟುವಾಗ ವಿಶ್ವಮಾನವರಾಗಿಯೇ ಜನ್ಮಿಸಿ ನಂತರ ಪ್ರತಿ ಹಂತದಲ್ಲೂ ಬಂಧಿತರಾಗುತ್ತಾ ಹೋಗುತ್ತಾರೆ.
ಮದುವೆಯಾದ ಹೆಂಡತಿ, ಕಟ್ಟಿದ ಮನೆ, ಗಳಿಸಿದ ಅಂತಸ್ತು ಅಧಿಕಾರ, ಸಂಪಾದಿಸಿದ ಐಶ್ವರ್ಯ, ಬಂಧು ಮಿತ್ರರು ಹೀಗೆ ಒಂದಾದ ಮೇಲೊಂದು ಬಂಧನಗಳು ಗೋಪುರವನ್ನೇ ನಿರ್ಮಿಸಿ ಬಿಡುತ್ತವೆ.
ಇಂತಹ ಲೌಕಿಕ ಬಂಧಮುಕ್ತಿಗೆ ಗುರುಚರಣ ಸಾನಿಧ್ಯ ಅವಶ್ಯವಾಗಿದ್ದು, ಗುರು ಕರುಣಿಸಿದ ಅರುವಿನಲ್ಲಿ ಸ್ವಪ್ರಜ್ಞೆಯ ಬೆಳಕಿನಲ್ಲಿ ನಡೆದಾಗ ಬಂಧ ಮುಕ್ತಿಯ ರಹದಾರಿ ಗೋಚರವಾಗುತ್ತದೆ.
ನಾವು ನೀಡುವ ಶಿಕ್ಷಣದಲ್ಲಿ ಇಂತಹ ಉನ್ನತ ಮೌಲ್ಯ ಬೆರೆತಿರಬೇಕು ಎಂದು ನುಡಿದರು.
10ನೇ ಬ್ಯಾಚ್ ವಿದ್ಯಾರ್ಥಿ ಬಳಗಕ್ಕೂ ಹಾಗೂ ಸರ್ವರಿಗೂ ಹಾರಕೂಡಧೀಶ ಸದಾ ಮಂಗಳವನ್ನು ಕರುಣಿಸಲಿ ಎಂದು ಶುಭ ಹಾರೈಸಿದರು.
ಚನ್ನಪ್ಪ ಪಾಟೀಲ, ನಾಗರಾಜ ಮಾನಕರ, ಚಂದ್ರಿಕಾ ಬೆಳಮಗೆ, ಸುನೀಲ ಬೆಳಮಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಬಿ.ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ಶಿವದಾಸ ಸ್ವಾಮಿ, ಕವಿತಾ ಸ್ವಾಮಿ, ಮಹಾದೇವ ಪೂಜಾರಿ, ವಿಜಯಕುಮಾರ ಸಂಗೋಳಗೆ, ಪಂಡಿತ ಪೂಜಾರಿ, ಪಂಡಿತರಾವ ದೇಗಾಂವ ಹಾಗೂ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.
ಸುಭದ್ರಾ ಹಿರೇಮಠ ಹಾರಕೂಡ ಸ್ವಾಗತ ಮಾಡಿದರು. ಶಿವಾನಿ ಶಿವದಾಸ ಸ್ವಾಮಿ ಸಂಗೀತ ಸೇವೆ ಸಲ್ಲಿಸಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನೆ ಗೀತೆ ಹಾಡಿದರು.ಚಂದ್ರಿಕಾ ಬೆಳಮಗೆ ಹಾರಕೂಡ ನಿರೂಪಿಸಿದರು.
ಚಿತ್ರ : ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯ ಪ್ರೌಢ ವಿಭಾಗದ 2016-17ನೇ ಸಾಲಿನ 10ನೇ ಬ್ಯಾಚ್ ವಿದ್ಯಾರ್ಥಿ ಬಳಗದಿಂದ ಆಯೋಜಿಸಿದ ಗುರುವಂದನೆ ಹಾಗೂ 846ನೇ ತುಲಾಭಾರ ಸಮಾರಂಭವನ್ನು ಜೀ ಕನ್ನಡ ಸರಿಗಮಪ -21ರ ವಿಜೇತೆ ಶಿವಾನಿ ಶಿವದಾಸ ಸ್ವಾಮಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು, ಬಿ.ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ಶಿವದಾಸ ಸ್ವಾಮಿ, ಕವಿತಾ ಸ್ವಾಮಿ, ಸುಭದ್ರಾ ಹಿರೇಮಠ ಉಪಸ್ಥಿತರಿದ್ದರು.