"ಚಂದ್ರಶಿಖರ" ಗ್ರಂಥಾರ್ಪಣೆ ಮಾಡಿದ ಬರಗೂರು

ಪ್ರೊ. ಎಸ್. ಚಂದ್ರಶೇಖರ್ ಅವರಿಗೆ 75ನೇ ವರ್ಷದ ಅಭಿನಂದನಾ ಸಮಾರಂಭ ಹಾಗೂ "ಚಂದ್ರಶಿಖರ" ಗ್ರಂಥಾರ್ಪಣೆ ಮಾಡಿದ ಬರಗೂರು
**ಬೆಂಗಳೂರು**: ಕನ್ನಡ ಸಾಹಿತ್ಯ ಲೋಕದ ಹಿರಿಯ ಚಿಂತಕ, ಕವಿ, ಆಲೋಚಕರಾದ ಪ್ರೊ. ಎಸ್. ಚಂದ್ರಶೇಖರ್ ಅವರ 75ನೇ ವರ್ಷದ ಸ್ಮರಣಾರ್ಥವಾಗಿ ಅವರಿಗೆ ಅಭಿನಂದನಾ ಸಮಾರಂಭ ಹಾಗೂ "ಚಂದ್ರಶಿಖರ" ಎಂಬ ಅಭಿನಂದನಾ ಗ್ರಂಥದ ಬಿಡುಗಡೆ ಕಾರ್ಯಕ್ರಮ ಸೊಮವಾರ ಬೆಂಗಳೂರಿನ ಕೆ.ಆರ್. ಸರ್ಕಲ್ನ ಸರ್ಕಾರಿ ಕಲಾ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶಾಸಕ ಡಾ. ಅಶ್ವಥ್ ನಾರಾಯಣ ಅವರು ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ "ಚಂದ್ರಶಿಖರ" ಪುಸ್ತಕವನ್ನು ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಬಿಡುಗಡೆ ಮಾಡಿದರು. ಶಾಸಕ ಪುಟ್ಟಣ್ಣ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಗ್ರಹಾರ ಕೃಷ್ಣಮೂರ್ತಿ, ಕೆ.ವಿ. ನಾರಾಯಣಸ್ವಾಮಿ, ಎಚ್. ಎ. ರಂಗನಾಥ, ಡಾ. ಕಾವಲಮ್ಮ, ಪ್ರೊ. ರಾಮಚಂದ್ರಗೌಡ ಮತ್ತು ಪ್ರೊ. ಬಿ.ಟಿ. ಶ್ರೀನಿವಾಸ್ ಅವರು ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು.
ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಮಾತನಾಡುತ್ತಾ, “ಪ್ರೊ. ಚಂದ್ರಶೇಖರ್ ಅವರೊಂದಿಗೆ ನಮ್ಮ ಹಲವು ದಶಕಗಳ ಸ್ನೇಹ ಸಂಬಂಧವಿದೆ. ಅವರು ಹಾರೋಗೇರಿ ಗ್ರಾಮಕ್ಕೆ ಬಂದಾಗ ನಮ್ಮ ಬರಗೂರು ಗ್ರಾಮಕ್ಕೂ ಬಂದು, ನೂರಾರು ವಿಷಯಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಮೈಸೂರು ರಾಜಕೀಯ ಕುರಿತು ಅವರು ಬರೆದ ಪುಸ್ತಕ, ಹಾಗೂ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಗಾಂಧಿ ಮತ್ತು ಅಂಬೇಡ್ಕರ್ ಪಯಣದ ಕುರಿತು ಅವರ ವಿಶಿಷ್ಟ ಲೇಖನಗಳು ಬಹುಚರ್ಚಿತವಾಗಿವೆ,” ಎಂದು ಹೇಳಿದರು.
ಸಾಹಿತಿ ಹಾಗೂ ಪತ್ರಕರ್ತ ಅಗ್ರಹಾರ ಕೃಷ್ಣಮೂರ್ತಿ ಮಾತನಾಡುತ್ತಾ, “ಬಡತನದಲ್ಲಿ ಹುಟ್ಟಿ ಸಹೋದರರ ಪ್ರೋತ್ಸಾಹದಿಂದ ಬೆಳೆದ ಪ್ರೋ. ಚಂದ್ರಶೇಖರ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯ, ಕುಲಪತಿಯಾಗಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಇಂದಿನ ಯುವ ಸಾಹಿತಿಗಳಿಗೆ ಅವರು ಶ್ರೇಷ್ಠ ಮಾದರಿ,” ಎಂದು ಮೆರೆದರು.
ಕಾರ್ಯಕ್ರಮದ ಆರಂಭದಲ್ಲಿ ಆತಿಥ್ಯ ವಹಿಸಿದ್ದು, ಮತ್ತು ಡಾ. ಕುಮಾರಿ ಚೈತ್ರ ಅವರ ಸಂಗೀತ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಮಾರಂಭ ಆರಂಭವಾಯಿತು.ರವಿ, ಮೋಹನ್, ಡಾ.ವೀರಶೆಟ್ಟಿ ಗಾರಂಪಳ್ಳಿ, ಇದ್ದರು ,ರಾಜೇಶ್ ಸ್ವಾಗತಿಸಿದರು,