ಕೋಳಿ ಸಾಕಾಣಿಕೆ ಮತ್ತು ಮೋಟ್ಟೆ ಉತ್ಪಾದನೆ ಘಟಕದ ಉದ್ಘಾಟನಾ ಸಮಾರಂಭ

ಕೋಳಿ ಸಾಕಾಣಿಕೆ ಮತ್ತು ಮೋಟ್ಟೆ ಉತ್ಪಾದನೆ ಘಟಕದ ಉದ್ಘಾಟನಾ ಸಮಾರಂಭ

ಕೋಳಿ ಸಾಕಾಣಿಕೆ ಮತ್ತು ಮೋಟ್ಟೆ ಉತ್ಪಾದನೆ ಘಟಕದ ಉದ್ಘಾಟನಾ ಸಮಾರಂಭ

ಕಮಲನಗರ :ತಾಲೂಕಿನ ಹೊಳೆ ಸಮುದ್ರ ಗ್ರಾಮದಲ್ಲಿ ಬಸವೆಶ್ವರ ಸಂಜೀವಿನಿ ಮಹಿಳಾ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಿಂದ ವೀರಭದ್ರೇಶ್ವರ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಸಮುದಾಯ ಬಂಡವಾಳ ನಿಧಿ 2 ಲಕ್ಷ ರೂಪಾಯಿ ಸಾಲ ಪಡೆದು ಮತ್ತು ಸ್ವಂತ ಬಂಡವಾಳದಿಂದ ಕೋಳಿ ಸಾಕಾಣಿಕೆ ಮತ್ತು ಮೋಟ್ಟೆ ಉತ್ಪಾದನೆ ಘಟಕದ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು 

ಮಾನ್ಯ ಯೋಜನಾ ನಿರ್ದೇಶಕರಾದ ಶ್ರೀ ಜಗನ್ನಾಥ ಮುರ್ತಿ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವ ಸಹಾಯ ಸಂಘದ ಮಹಿಳೆಯರು ಸಾಲ ಪಡೆದು ಸಣ್ಣ ಸಣ್ಣ ಚಟುವಟಿಕೆ ಉತ್ಪನ್ನಗಳ ಮಾಡಲು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಹಣಮಂತ ರಾಯ್ ಕೌಟಗೆ ರವರು NRLM ಯೋಜನೆ ಬಹಳಷ್ಟು ಉತ್ತಮ ಯೋಜನೆಯಾಗಿದೆ ನಮ್ಮಲ್ಲಿ ನಡೆಯುವ ಎರಡು ಕಾರ್ಯಕ್ರಮ ಯಾವುದು ಎಂದರೆ ನರೆಗಾ ಮತ್ತು NRLM ಇದರಲ್ಲಿ ನರೆಗಾ ಯೋಜನೆಯಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಾರೆ NRLM ದಲ್ಲಿ ಒನರ ಆಗುತ್ತಾರೆ ಎಂದು ವ್ಯತ್ಯಾಸ ತಿಳಿಸಿ ಬಡತನವನ್ನು ಕಡಿಮೆ ಮಾಡಲು ಇಂತಹ ಒಳ್ಳೆಯ ಕಾರ್ಯಕ್ರಮವಾಗಿದೆ ಎಂದು ಮನವೊಲಿಸಿ ತಿಳಿಸಿದರು.

 ಜಿಲ್ಲಾ ವ್ಯವಸ್ಥಾಪಕರಾದ ಶ್ರೀ ಆಕಾಶ ಸ್ವಾಮಿ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮೀಣ ಭಾಗದ ಜನರಿಗೆ ಯೋಜನೆ ಬಗ್ಗೆ ಮಾಹಿತಿ ನೀಡುವಂತೆ ಎಲ್ಲಾ ಸಿಬ್ಬಂದಿಗಳಿಗೆ ತಿಳಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕರು ಲಾತುರವರು ಸಾಲ ಪಡೆದು ಚಟುವಟಿಕೆ ಮಾಡುತ್ತಿರಬೇಕು ಮತ್ತು ಅಭಿವೃದ್ಧಿ ಯಾಗಬೇಕು ಎಂದು ತಿಳಿಸಿದರು.

 ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಯೋಗಿತಾ ಮಾರುತಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀ ಮಹಾದೆವ ಒಕ್ಕೂಟ ಅಧ್ಯಕ್ಷರಾದ ಶ್ರೀಮತಿ ಕಾಳಮ್ಮ ವೀರಭದ್ರೇಶ್ವರ SHG ಅಧ್ಯಕ್ಷರಾದ ಶ್ರೀಮತಿ ಸುದರ್ಶನಾ ದಯಾನಂದ ಸ್ವ ಸಹಾಯ ಸಂಘದ ಮಹಿಳೆಯರು ಸಿಬ್ಬಂದಿಗಳು ಭಾಗವಹಿಸಿದರು.

ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಕು ಕವಿತಾ ಬಿರಾದಾರ ರವರು ಕಾರ್ಯಕ್ರಮ ನಿರೂಪಿಸಿದರು. KILP ಕಾರ್ಯಕ್ರಮ ಸಂಯೋಜಕರಾದ ಜಾಂತಿಕರ ಪ್ರಮೋದ ಸ್ವಾಗತಿಸಿದರು. ರಾಜು ಗಾಂಧಿ ಫೆಲೋ ಶ್ರೀ ಸಂಪತ ರವರು ವಂದಿಸಿದರು. ಕಾರ್ಯಕ್ರಮದಲ್ಲಿ ಸುನಿತಾ ಸುಲೋಚನಾ ಅಂಕಿತಾ,ಪೂಜಾ MBK LCRP ಕೃಷಿ ಸಖಿ ಪಶು ಸಖಿ ನಾರಿ ಸಖಿ FLCRP ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದರು.