ಡಾ. ಬಿ. ಆರ್. ಅಂಬೇಡ್ಕರ ಫೌಂಡೇಶನ್ ವತಿಯಿಂದ ಹಸಿರು ಕಾಳಜಿ ಕಾರ್ಯಕ್ರಮ

ಡಾ. ಬಿ. ಆರ್. ಅಂಬೇಡ್ಕರ ಫೌಂಡೇಶನ್ ವತಿಯಿಂದ ಹಸಿರು ಕಾಳಜಿ ಕಾರ್ಯಕ್ರಮ

ಇಂದು ಬೀದರ ಜಿಲ್ಲೆಯ ಬೀದರ್ ತಾಲೂಕಿನ ಆಣದೂರ ಬುದ್ಧ ವಿಹಾರ ಆವರಣದಲ್ಲಿ ಬಿ. ಆರ್. ಅಂಬೇಡ್ಕರ್ ಫೌಂಡೇಶನ್ ಹಾಗೂ ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ವಿಶೇಷವಾದ " ಹಸಿರು ಕಾಳಜಿ " ಸಸಿ ನೇಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು. ಈ ಕಾರ್ಯಕ್ರಮದ ಪೂಜ್ಯ ಬಂತೆ ಜೀ ಸಂಘರಖಿತ್ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಕಾರ್ಯಕ್ರಮದ ‌ಕುರಿತು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಚಕ್ರಧರ ಹೊಸಳ್ಳಿ ಪರಿಸರ ಕಾಳಜಿ ಎಂದರೆ ನೈಸರ್ಗಿಕ ಸಂಪತ್ತುಗಳು, ಪ್ರಾಣಿ-ಪಕ್ಷಿಗಳು, ಮರಗಳು, ನದಿಗಳು, ಮಣ್ಣು, ಗಾಳಿ ಮತ್ತು ನೀರಿನ ಮೇಲೆ ನಾವು ತೋರುವ ಜವಾಬ್ದಾರಿಯುತ ನಡವಳಿಕೆ ಮತ್ತು ಪ್ರೀತಿಯ ಮನೋಭಾವ. ಪರಿಸರದ ಸಮತೋಲನ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಪರಿಸರ ಉಳಿವು ನಮ್ಮೆಲ್ಲರ ಹೊಣೆಗಾರಿಕೆ. “ಒಂದು ಮರ ನೆಡಿ, ಭವಿಷ್ಯ ಉಳಿಸಿ” ಎಂಬ ಮಾತನ್ನು ಅನುಸರಿಸಿ, ನಾವು ಚಿಕ್ಕಚಿಕ್ಕ ಕ್ರಮಗಳಿಂದ ಕೂಡ ಪ್ರಕೃತಿಗೆ ಬಹು ದೊಡ್ಡ ಕೊಡುಗೆಯನ್ನು ನೀಡಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಫೌಂಡೇಶನ್ ಸದಸ್ಯರು ಹಾಗೂ ಊರಿನ ಅನೇಕ ಗಣ್ಯ ವ್ಯಕ್ತಿಗಳು ಶ್ರೀ ಸುನೀಲ್ ಆಣದೂರ, ಯಕತಪೂರ್ ಗ್ರಾಮ ಪಂಚಾಯತ್ ಸದಸ್ಯರು, ಶ್ರೀ ಉದಯ ಪ್ರತಾಪ, ಜೆಡಿಎಸ್ ಮುಖಂಡರು ಮತ್ತು ಸಂಸ್ಥೆಯ ಸರ್ವ ಸದ್ಯಸರು ಅನಿಲಕುಮಾರ್ ಚಂದಾಪುರಕರ್, ರಾಕೇಶ್ ಬಸವರಾಜ್, ಸಿದ್ದರಾಮ್ ಮೋರ್, ಮೋಹನ್ ದೊಡ್ಡಿ, ಪ್ರವೀಣ್ ಬಗ್ದಲ್, ವಿಶಾಂತ್ ಮೋರ್, ಪರಮೇಶ್ವರ ಭಾವಿಕಟ್ಟಿ, ಅವಿನಾಶ ಹೊಸಮನಿ, ಪ್ರಸನ್ನಕುಮಾರ್ ಕಮ್ಠಾಣೆ, ಶ್ರೀನಿವಾಸ ಸುಲ್ತಾನಪುರೆ ಹಾಗೂ ಗ್ರಾಮಸ್ತರು ಉಪಸ್ಥಿತರಿದ್ದರು.

ವರದಿ: ಮಛಂದ್ರನಾಥ ಕಾಂಬಳೆ ಬೀದರ್