ಜೂನ್ 29ರಂದು ಚಿಣಮಗೇರಾ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕೊಠಡಿಗಳ ಮತ್ತು ಟ್ರಸ್ಟ್ ಉದ್ಘಾಟನಾ ಸಮಾರಂಭ

ಜೂನ್ 29ರಂದು ಚಿಣಮಗೇರಾ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕೊಠಡಿಗಳ ಮತ್ತು ಟ್ರಸ್ಟ್ ಉದ್ಘಾಟನಾ ಸಮಾರಂಭ

ಜೂನ್ 29ರಂದು ಚಿಣಮಗೇರಾ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕೊಠಡಿಗಳ ಮತ್ತು ಟ್ರಸ್ಟ್ ಉದ್ಘಾಟನಾ ಸಮಾರಂಭ        

ಅಪಜಲಪುರ :-ತಾಲೂಕಿನ ಸುಕ್ಷೇತ್ರ ಚಿಣಮಗೆರಾ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ವತಿಯಿಂದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಕೊಠಡಿಗಳ ಮತ್ತು ಟ್ರಸ್ಟ್ ಉದ್ಘಾಟನಾ ಸಮಾರಂಭ ದಿನಾಂಕ್ 29 -6- 2025 ರಂದು ಬೆಳಗ್ಗೆ 11:00ಗೆ ಜರುಗಲಿದೆ ಎಂದು ಟ್ರಸ್ಟಿನ ಅಧ್ಯಕ್ಷರಾದ ಕಲ್ಯಾಣರಾವ ನಾಗಪ್ಪ ಜಮಾದಾರ್ ಕಾರ್ಯದರ್ಶಿಗಳಾದ ಚಂದ್ರಕಾಂತ್ ಯಲ್ಲಪ್ಪ ಜಮಾದಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಷಟಸ್ಥಲ ಬ್ರಹ್ಮ ಶ್ರೀ ಸಿದ್ದರಾಮ ಶಿವಾಚಾರ್ಯರು ಮಹಾಂತೇಶ್ವರ ಸಂಸ್ಥಾನ ಮಠ ಚಿನ್ಮಯಗಿರಿ, ಷಟಸ್ಥಲ ಬ್ರಹ್ಮ ಶ್ರೀ ವೀರ ಮಹಾಂತ ಶಿವಾಚಾರ್ಯರು ಚಿನ್ಮಯಗಿರಿ, ಪೂಜ್ಯಶ್ರೀ ಮಲ್ಲಣಪ್ಪ ಮಹಾಸ್ವಾಮಿಗಳು ಅಲ್ಲಮ ಪ್ರಭು ಸಂಸ್ಥಾನ ಮಠ ತೊನಸನಹಳ್ಳಿ ವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಎಂ ವೈ ಪಾಟೀಲ್ ಅವರು ನೆರವೇರಿಸುವರು, ಶ್ರೀ ಮಹಾಲಕ್ಷ್ಮಿ ಭಾವಚಿತ್ರಕ್ಕೆ ಪೂಜೆ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ನೆರವೇರಿಸುವರು, ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಅನ್ನು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಉದ್ಘಾಟಿಸುವರು. ಸಸಿ ನೆಡುವ ಕಾರ್ಯಕ್ರಮವನ್ನು ಕಲ್ಬುರ್ಗಿ ಜೀ.ಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಅಪಜಲಪುರ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಮಾದಾರ್, ರಾಜ್ಯ ಬಿಜೆಪಿ ಮುಖಂಡ ಅವ್ವಣ್ಣ ಮ್ಯಾಕೆರಿ, ರಾಜ್ಯ ಸಮಾಜವಾದಿ ಪಕ್ಷದ ಮುಖಂಡ ಮಹಾಂತೇಶ್ ಪಾಟೀಲ್, ಕಾಂಗ್ರೆಸ್ ಪಕ್ಷದ ಮುಖಂಡ ಲಚ್ಚಪ್ಪ ಜಮಾದಾರ್, ಬಿಜೆಪಿ ಮಂಡಲ ಅಧ್ಯಕ್ಷ ವಿದ್ಯಾಧರ್ ಮಂಗಳೂರು, ರಾಜ್ಯ ಜೆಡಿಎಸ್ ಮುಖಂಡ ಶಿವಕುಮಾರ್ ನಾಟಿಕರ್, ಅಫಜಲಪುರ ತಾಲೂಕ ಕೋಲಿ ಸಮಾಜದ ಅಧ್ಯಕ್ಷ ಮಾರಾಯ ಅಗಸಿ, ಕೋಳಿ ಸಮಾಜದ ಮುಖಂಡ ಬಸವರಾಜ್ ಸಪ್ಪನ್ ಗೋಳ್ ಚೌಡಾಪುರ್, ಕಾಂಗ್ರೆಸ್ ಮುಖಂಡ ಸಿದ್ದು ಸಿರಸಗಿ, ಕೋಳಿ ಸಮಾಜದ ಮುಖಂಡರಾದ ಲಕ್ಷ್ಮಣ್ ಹೆರೂರ್, ದೇವಿಂದ್ರ ಜಮಾದಾರ್, ಜೀಪಂ ಮಾಜಿ ಸದಸ್ಯ ಮತಿನ್ ಪಟೇಲ್, ತಾಲೂಕ ತಳವಾರ್ ಮಹಾಸಭಾ ಅಧ್ಯಕ್ಷ ಗುರುನಾಥ್ ಕೋರಬಾ ಹಾವನೂರ್, ಮಹಾಂತೇಶ್ ತಳವಾರ್ ಆನೂರ್, ಬಂದರ್ ವಾಡ್ ಗ್ರಾಪಂ ಮಾಜಿ ಅಧ್ಯಕ್ಷ ಅಶ್ಪಾಕ್ ಗೊಬ್ಬುರ್ ಉಪಸ್ಥಿತರಿರುವರು. ಅತಿಥಿಗಳಾಗಿ ಚೌಡಾಪುರ್ ಗ್ರಾಪಂ ಅಧ್ಯಕ್ಷ ಚಂದಮ್ಮ ಶಿವಕುಮಾರ್ , ಚಿಣಮಗೇರಾ ಗ್ರಾಪಂ ಸದಸ್ಯರಾದ ಬಾಬಾನಬಿ ಸೋಂದುಸಾಬ್, ಅನಸೂಯ ಶಿವಮೂರ್ತಪ್ಪ, ಮಹಾಂತಮ್ಮ ಹಣಮಂತ, ಚಿದಾನಂದ ಈರಣ್ಣ, ಓಂ ಪ್ರಕಾಶ್ ಗೋಡೆನ್, ಮಹಾಂತಪ್ಪ ಕಲ್ಯಾಣ ರಾವ್ ಉಪಸ್ಥಿತರಿರುವರು. ವಿಶೇಷ ಆಹ್ವಾನಿತರು ಚಿಣಮಗೇರಾ ಶ್ರೀ ವೀರಭದ್ರೇಶ್ವರ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಬಸವರಾಜ ಪಾಟೀಲ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಕುಲಕರ್ಣಿ, ಕಲ್ಬುರ್ಗಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಮಾಜಿ ಅಧ್ಯಕ್ಷ ಮಲ್ಲಿನಾಥ್ ಪಾಟೀಲ್,ಕಾಂಗ್ರೆಸ್ ಮುಖಂಡರಾದ ಅಂಬಾರಾಯ ಕಡಗಂಚಿ,ಗ್ರಾಮದ ಮುಖಂಡರಾದ ಮಹಾಂತಪ್ಪ ಅವರಾದಿ, ಗುರುದೇವ್ ಗೋಡೆನ್, ಬಿಜೆಪಿ ಮುಖಂಡರಾದ ಶಿವಕುಮಾರ್ ಬರ್ದಿ, ಶಂಕರ್ ಎಸ್ ಕಲಶೆಟ್ಟಿ, ಚೌಡಾಪುರ್ ಗ್ರಾಪಂ ಮಾಜಿ ಅಧ್ಯಕ್ಷ ಮಹಾಂತಪ್ಪ ತಳಕೇರಿ, ಗ್ರಾಮದ ಮುಖಂಡರಾದ ಭೀಮಶ್ಯಾ ಜಮಾದಾರ್, ಶೇಷಯ್ಯ ಗುತ್ತೇದಾರ್, ಕಾಡಪ್ಪ ಪೂಜಾರಿ, ಮಹಮ್ಮದ್ ಹಳಿಯಾಳ, ಲಕ್ಷ್ಮಣ್ ಭೀಮ್ ಶಾ ಗಾಣಗಾಪುರ್, ಚಿಣಮಗೇರಾ ಶ್ರೀ ಮಹಾಲಕ್ಷ್ಮಿ ಭಜನಾ ಸಂಘದ ಅಧ್ಯಕ್ಷ ಸಿದ್ದು ಮಂಗಳೂರು, ಚಿಣಮಗೇರಾ ಶ್ರೀ ವೈಭವ ಲಕ್ಷ್ಮಿ ವಿವಿದೋದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಬಸಮ್ಮ ಬಸವರಾಜ್ ಜಮಾದಾರ್ ಉಪಸ್ಥಿತರಿರುವರು. ಈ ಸಮಾರಂಭಕ್ಕೆ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಸಮಸ್ತ ಬಂಧುಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರೀ ಮಹಾಲಕ್ಷ್ಮಿ ಜೀರ್ಣೋದ್ಧಾರ ಟ್ರಸ್ಟಿನ ಪದಾಧಿಕಾರಿಗಳು ಸರ್ವ ಸದಸ್ಯರು ವಿನಂತಿಸಿದ್ದಾರೆ.