ಪೆರ್ನಾಜೆಯಲ್ಲಿ ಮತ್ತೆ ಕಾಡಾನೆ ಹಾವಳಿ: ಕೃಷಿಕರಿಗೆ ಆತಂಕ

ಪೆರ್ನಾಜೆಯಲ್ಲಿ ಮತ್ತೆ ಕಾಡಾನೆ ಹಾವಳಿ: ಕೃಷಿಕರಿಗೆ ಆತಂಕ

ಪೆರ್ನಾಜೆಯಲ್ಲಿ ಮತ್ತೆ ಕಾಡಾನೆ ಹಾವಳಿ: ಕೃಷಿಕರಿಗೆ ಆತಂಕ

ನೆಟ್ಟಣಿಗೆ ಪುತ್ತೂರು ತಾಲೂಕು ಮುಡೂರು ಗ್ರಾಮದ ಪೆರ್ನಾಜೆ ವ್ಯಾಪ್ತಿಯಲ್ಲಿ ನಾಲ್ಕು ತಿಂಗಳ ವಿರಾಮದ ಬಳಿಕ ಮತ್ತೆ ಕಾಡಾನೆಗಳ ಹಾವಳಿ ವರದಿಯಾಗಿದೆ. ಮಂಗಳವಾರ ರಾತ್ರಿ ಇಬ್ಬರು ಕೃಷಿಕರ ತೋಟಗಳಿಗೆ ಕಾಡಾನೆ ನುಗ್ಗಿ ಬೆಳೆಗಳಿಗೆ ಹಾನಿ ಮಾಡಿರುವ ಘಟನೆ ನಡೆದಿದೆ.

ಪೆರ್ನಾಜೆಯ ಕೃಷಿಕ ಶ್ರೀ ಕುಮಾರ್ ಅವರ ತೋಟಕ್ಕೆ ನುಗ್ಗಿದ ಕಾಡಾನೆ ಮೂರು ಬಾಳೆಗಿಡಗಳನ್ನು ಮುರಿದು ನಾಶಪಡಿಸಿದ್ದು, ದೀವಿ ಹಲಸು ಮರದ ತೊಗಟೆಗಳನ್ನು ತಿಂದು ಹಾನಿಯುಂಟುಮಾಡಿದೆ. ಅಲ್ಲದೇ ಶ್ರೀ ರಾಘವೇಂದ್ರ ಭಟ್ ಅವರ ತೋಟಕ್ಕೂ ಲಗ್ಗೆಯಿಟ್ಟ ಕಾಡಾನೆ ಸುಮಾರು ಹತ್ತು ಬಾಳೆಗಿಡಗಳನ್ನು ನಾಶಪಡಿಸಿದ್ದು, ಹಲಸು ಮರಕ್ಕೂ ಹಾನಿಯಾಗಿದೆ.

ಈ ಪ್ರದೇಶದಲ್ಲಿ ಅರಣ್ಯ ಇಲಾಖೆ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಸೋಲಾರ್ ಬೇಲಿ ಅಳವಡಿಸಿದ್ದರೂ, ಕಾಡಾನೆಗಳು ಅದನ್ನು ದಾಟಿ ತೋಟಗಳಿಗೆ ನುಗ್ಗಿರುವುದು ಕೃಷಿಕರ ನಿದ್ದೆಗೆಡಿಸಿದೆ.

ಸ್ಥಳೀಯರಿಂದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪಾಣಾಜೆ ವಲಯ ಅರಣ್ಯಾಧಿಕಾರಿ ಶ್ರೀ ಮದನ್ ಹಾಗೂ ಇಲಾಖಾ ಸಿಬ್ಬಂದಿ ಬುಧವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಭರವಸೆ ನೀಡಿದೆ.

ಸ್ಥಳ: ಪುತ್ತೂರು ಗ್ರಾಮಾಂತರ, ಮುಡೂರು ಗ್ರಾಮದ ಪೆರ್ನಾಜೆ  

-ಕೃಪೆ: ಸ್ಥಳೀಯ ವರದಿಗಾರರು

--